ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೈರನಕುಪ್ಪೆಯಲ್ಲಿ ಕಬಿನಿಗಡ್ಡ ಸೇತುವೆ ನಿರ್ಮಿಸಲು ಕೇಂದ್ರಕ್ಕೆ ಪ್ರಸ್ತಾವನೆ

By Staff
|
Google Oneindia Kannada News

ಬೆಂಗಳೂರು: ಕೇರಳ ಹಾಗೂ ಕರ್ನಾಟಕದ ಗಡಿಯಲ್ಲಿರುವ ಬೈರನಕುಪ್ಪೆ ಬಳಿ ಕಬಿನಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸುವ ಕುರಿತಂತೆ ಕೇಂದ್ರಕ್ಕೆ ಜಂಟಿ ಪ್ರಸ್ತಾವನೆ ಕಳಿಸಲು ಎರಡೂ ರಾಜ್ಯಗಳು ನಿರ್ಧರಿಸಿವೆ.

ಕೇರಳದ ಸಚಿವ ಎಂ. ಕೆ. ಮುನೀರ್‌ ಹಾಗೂ ರಾಜ್ಯ ಲೋಕೋಪಯೋಗಿ ಸಚಿವ ಧರಂ ಸಿಂಗ್‌ ಭಾನುವಾರ ಈ ಪ್ರಸ್ತಾವನೆಯ ಕುರಿತು ಮಾತು ಕತೆ ನಡೆಸಿದರು. ಮಡಿಕೇರಿಯ ಬೈರನಕುಪ್ಪೆ ಬಳಿ ಸೇತುವೆ ನಿರ್ಮಾಣವಾದರೆ ಮೈಸೂರು ಮತ್ತು ಕೇರಳ ನಡುವೆ ಸುಮಾರು 45 ಕಿಮೀ ಅಂತರ ಕಡಿಮೆಯಾಗುತ್ತದೆ. ಇದರಿಂದ ಎರಡೂ ರಾಜ್ಯಗಳ ಆರ್ಥಿಕ ಹಾಗೂ ಸಾಮಾಜಿಕ ಚಟುವಟಿಕೆಗಳು ಉತ್ತಮ ಗೊಳ್ಳಲಿವೆ ಎಂದು ಭಾನುವಾರದ ಜಂಟಿ ಸುದ್ದಿಗೋಷ್ಠಿಯಲ್ಲಿ ಎರಡೂ ರಾಜ್ಯದ ಸಚಿವರು ಅಭಿಪ್ರಾಯಪಟ್ಟರು.

ಎರಡೂ ರಾಜ್ಯಗಳು ಕೇಂದ್ರಕ್ಕೆ ಮನವಿ ಸಲ್ಲಿಸಿ, ರಸ್ತೆ ನಿಧಿಯಿಂದ ಸುಮಾರು 6.5 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲು ಕೇಂದ್ರವನ್ನು ಒತ್ತಾಯಿಸಲಾಗುವುದು ಎಂದು ಧರಂ ಸಿಂಗ್‌ಹೇಳಿದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X