ಶ್ರೀನಾಥ್, ಪ್ರಸಾದ್ ಕ್ರಿಕೆಟ್ಗೆ ಗುಡ್ ಬೈ ಹೇಳಲಿ- ಡುಂಗಾರ್ಪುರ್
ದುಬೈ : ಮೈಸೂರು ಎಕ್ಸ್ಪ್ರೆಸ್ ಜಾವಗಲ್ ಶ್ರೀನಾಥ್ ಸುಸ್ತಾಗಿದ್ದಾರೆ. ಲೆಗ್ ಕಟರ್ ಮೋಡಿಗಾರ ವೆಂಕಟೇಶ್ ಪ್ರಸಾದ್ ಮೊನಚು ಮಾಯವಾಗಿದೆ. ಹೀಗಾಗಿ ಈ ಇಬ್ಬರಿಗೂ ಗೋಲ್ಡನ್ ಹ್ಯಾಂಡ್ಶೇಕ್ ಮಾಡುವ ಕಾಲ ಹತ್ತಿರಾಗಿದೆ, ಅರ್ಥಾತ್ ಕ್ರಿಕೆಟ್ಜೀವನಕ್ಕೆ ಮಂಗಳ ಹಾಡುವ ದಿನ ಸನ್ನಿಹಿತವಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮಾಜಿ ಅಧ್ಯಕ್ಷ ರಾಜ್ಸಿಂಗ್ ಡುಂಗಾರ್ಪುರ್ ಹೇಳಿದ್ದಾರೆ.
ಗಲ್ಫ್ ನ್ಯೂಸ್ಗೆ ಕೊಟ್ಟಿರುವ ಸಂದರ್ಶನದಲ್ಲಿ ಅವರು ಈ ಮಾತನ್ನಾಡಿದ್ದಾರೆ. ದಕ್ಷಿಣ ಆಫ್ರಿಕದಲ್ಲಿನ ಒಂದು ದಿನದ ಪಂದ್ಯಗಳ ತ್ರಿಕೋನ ಸರಣಿಯಲ್ಲಿನ ಸೋಲನ್ನು ಕುರಿತ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಿದ್ದರು. ಶ್ರೀನಾಥ್ ಹಾಗೂ ಪ್ರಸಾದ್ ಸಾಕಷ್ಟು ಆಡಿದ್ದಾರೆ. ಒಂದೋ ಈ ಇಬ್ಬರೂ ದೀರ್ಘ ಕಾಲ ರೆಸ್ಟ್ ತಗೊಳ್ಳಬೇಕು. ಇಲ್ಲವೇ ರಿಟೈರ್ ಆಗಬೇಕು. ಆಶಿಶ್ ನೆಹ್ರ ಹಾಗೂ ಜಹೀರ್ ಖಾನ್ ಲಯ ಕಂಡುಕೊಂಡಲ್ಲಿ ಶ್ರೀನಾಥ್ ಮತ್ತು ಪ್ರಸಾದ್ ಜಾಗೆಗಳನ್ನು ಸಮರ್ಥವಾಗಿ ತುಂಬಬಲ್ಲರು. ಮೂರನೇ ವೇಗಿಯಾಗಿ ಅಜಿತ್ ಅಗರ್ಕರ್ ತಂಡಕ್ಕೆ ಇದ್ದೇ ಇದ್ದಾರೆ. ಅಗರ್ಕರ್ ಪ್ರತಿಭಾವಂತ. ಇನ್ನಷ್ಟು ಸಾಣೆಗೊಡ್ಡಿಕೊಂಡು, ಅತಿಯಾದ ಯತ್ನಗಳನ್ನು ಮಾಡದಿದ್ದಲ್ಲಿ ಕ್ರಿಕೆಟ್ಟಿಗೆ ಎಂಟ್ರಿ ಕೊಟ್ಟಾಗ ತೋರಿದ ಪ್ರದರ್ಶನವನ್ನೇ ಮುಂದುವರಿಸಲು ಸಾಧ್ಯವಿದೆ ಎಂದರು.
ಭಾರತ ಸತತ 9ನೇ ಫೈನಲ್ಗಳನ್ನು ಸೋತಿದೆ. ಸಚಿನ್ ಔಟಾದೊಡನೆ, ಅವರನ್ನೇ ಅನುಕರಿಸುವ ಚಾಳಿ ಇನ್ನೂ ಕೊನೆಯಾಗಿಲ್ಲ. ತಂಡದ ಆಯ್ಕೆ ಪ್ರಕ್ರಿಯೆ ಇನ್ನೂ ಪಾರದರ್ಶಕವಾಗಬೇಕು. ನಯನ್ ಮೊಂಗಿಯಾ ಅವರನ್ನು ತಂಡದಿಂದ ಹೊರಗೆ ಹಾಕಿದ್ದು ತರವಲ್ಲ ಎಂದು ಡುಂಗಾರ್ಪುರ್ ಅಭಿಪ್ರಾಯಪಟ್ಟರು.
(ಪಿಟಿಐ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications