Get Updates
Get notified of breaking news, exclusive insights, and must-see stories!

ಬಸ್ಸು ಕಾಣದ 5 ಸಾವಿರ ಹಳ್ಳಿಗಳಿಗೆ ಸಚಿವರು ಬಸ್ಸು ಬಿಡ್ತಾರಂತೆ..

ಬೆಂಗಳೂರು : ಕರ್ನಾಟಕದಲ್ಲಿ ವಾಹನ ಸಂಚಾರದ ಸೌಕರ್ಯವೇ ಇಲ್ಲದ 5 ಸಾವಿರ ಹಳ್ಳಿಗಳಿಗೆ ಇನ್ನೊಂದು ವರ್ಷದೊಳಗೆ ಬಸ್‌ ಓಡಿಸುವುದಾಗಿ ಸಾರಿಗೆ ಸಚಿವ ಸಗೀರ್‌ ಅಹಮದ್‌ ಸೋಮವಾರ ಹೇಳಿದ್ದಾರೆ.

ಪ್ರೆಸ್‌ ಕ್ಲಬ್‌ ಆಯೋಜಿಸಿದ್ದ ಪತ್ರಿಕಾ ಸಂದರ್ಶನದಲ್ಲಿ ಅವರು ಮಾತಾಡುತ್ತಿದ್ದರು. ಸಾರಿಗೆ ಸಂಪರ್ಕ ಸೇವೆಯಿಂದ ವಂಚಿತವಾಗಿರುವ 5 ಸಾವಿರ ಹಳ್ಳಿಗಳಿಗೆ ರಸ್ತೆಗಳನ್ನು ಸರಿಪಡಿಸಿ, ಬಸ್‌ ಸಂಚಾರ ಪ್ರಾರಂಭಿಸಲಾಗುವುದು. ಇನ್ನೊಂದು ವರ್ಷದಲ್ಲಿ ಈ ಕೆಲಸ ಆಗಲಿದೆ ಎಂದರು. ಸಾರಿಗೆ ಇಲಾಖೆಯ ಇತರೆ ಕಾರ್ಯಕ್ರಮಗಳನ್ನು ಅವರು ತೆರೆದಿಟ್ಟದ್ದು ಹೀಗೆ...

  • ಸಾರಿಗೆ ವ್ಯವಸ್ಥೆ ಸುಧಾರಣೆಗೆ ಸದ್ಯದಲ್ಲೇ ಸರ್ಕಾರ ನೀತಿಯಾಂದನ್ನು ಪ್ರಕಟಿಸಲಿದೆ.
  • ರಸ್ತೆ ಅಪಘಾತಗಳಿಗೆ ಚಾಲಕನೊಬ್ಬನನ್ನೇ ಹೊಣೆಯಾಗಿಸುವುದು ತರವಲ್ಲ. ಕೆಟ್ಟು ನಿಂತ ವಾಹನಗಳೂ ಇದಕ್ಕೆ ಕಾರಣವಾಗುತ್ತವೆ. ಈ ಸಮಸ್ಯೆ ಪರಿಹರಿಸಲು ಬಸ್‌ ಬೇಸ್‌, ಗೂಡ್ಸ್‌ ಬೇಸ್‌ಗಳನ್ನು ನಿರ್ಮಿಸುವ ಬಗೆಗೂ ಪರಿಶೀಲಿಸಲಾಗುತ್ತಿದೆ. ರಸ್ತೆ ಸುರಕ್ಷಾ ಸಮಿತಿ ಸಭೆ ನಡೆಸಿ, ನಿರ್ಣಯ ಕೈಗೊಳ್ಳಲಿದೆ.
  • ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಮ್ಯಾಕ್ಸಿಕ್ಯಾಬ್‌ ಸಂಚಾರವನ್ನು ಪೂರ್ಣ ಪ್ರಮಾಣದಲ್ಲಿ ನಿಯಂತ್ರಿಸಲಾಗುವುದು.
  • ಬೆಂಗಳೂರಿನ 5 ಆರ್‌ಟಿಓಗಳನ್ನು ಗಣಕೀಕರಣಗೊಳಿಸುವ ಕೆಲಸ ಜಾರಿಯಲ್ಲಿದೆ. ಇನ್ನೊಂದು ವರ್ಷದೊಳಗೆ ವಾಹನ ಪರವಾನಗಿಯನ್ನು ಇಚ್ಛಿಸಿದ ಜಾಗದಲ್ಲಿ ಪಡೆಯಬಹುದಾದ ವ್ಯವಸ್ಥೆಯನ್ನೂ ಮಾಡಲಾಗುವುದು.
  • ದೇಶದಲ್ಲೇ ಅತ್ಯುತ್ತಮ ಸಾರಿಗೆ ಸಂಸ್ಥೆ ಎಂದು ಭೂಸಾರಿಗೆ ಇಲಾಖೆ ಘೋಷಿಸಿ, 5 ಲಕ್ಷ ರುಪಾಯಿ ಬಹುಮಾನವನ್ನೂ ನೀಡಿದೆ.
(ಪಿಟಿಐ)
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+