ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು:ಗುಂಡು ಹಾರಿಸಿಕೊಂಡು ಇಂಜಿನಿಯರಿಂಗ್‌ ವಿದ್ಯಾರ್ಥಿ ಆತ್ಮಹತ್ಯೆ

By Staff
|
Google Oneindia Kannada News

ಬೆಂಗಳೂರು: ಇಂಜಿನಿಯರಿಂಗ್‌ ವಿದ್ಯಾರ್ಥಿಯಾಬ್ಬ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಜೆ.ಸಿ.ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ಸಂಭವಿಸಿದೆ.

ಶೇಷಾದ್ರಿ ರಸ್ತೆ ಮಾರಪ್ಪ ಗಾರ್ಡನ್‌ ನಿವಾಸಿ ರಜನೀಶ್‌ ಅಲಿಯಾಸ್‌ ಬಬ್ಲು ಎನ್ನುವ 26 ವರ್ಷ ವಯಸ್ಸಿನ ಯುವಕ ತನ್ನ ಮನೆಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಫನ್‌ವರ್ಲ್ಡ್‌ನ ನಿರ್ದೇಶಕರಲ್ಲೊಬ್ಬರಾದ ಎ.ಕೆ. ನಾಯರ್‌ ಅವರ ಪುತ್ರನಾದ ರಜನೀಶ್‌ ಇಂಜಿನಿಯರಿಂಗ್‌ ವಿದ್ಯಾರ್ಥಿ.

ಬೆಳಗ್ಗೆ 11 ಗಂಟೆಯಾದರೂ ರಜನೀಶ್‌ ಏಳದಿದ್ದುದನ್ನು ಗಮನಿಸಿದ ಮನೆಯವರು, ಪೊಲೀಸರಿಗೆ ಸುದ್ದಿ ಮುಟ್ಟಿಸಿ ಆನಂತರ ಬಾಗಿಲು ತೆರೆದಾಗಿ ರಜನೀಶ್‌ ರಕ್ತದ ಮಡುವಿನಲ್ಲಿ ಹೆಣವಾಗಿದ್ದುದು ಕಂಡುಬಂದಿದೆ. ರಾತ್ರಿ ವಾಲ್ಯೂಮ್‌ ಹೆಚ್ಚಿಸಿಕೊಂಡು ಆತ ಟೀವಿ ನೋಡುತ್ತಿದ್ದ . 0.22 ರಿವಾಲ್ವಾರ್‌ನಿಂದ ಶೂಟ್‌ ಮಾಡಿಕೊಂಡಿರುವ ರಜನೀಶ್‌, ಸ್ನೇಹಿತರಿಗೆ ನೀಡಬೇಕಾದ 20 ಸಾವಿರ ರುಪಾಯಿಗಳ ಸಾಲದ ವಿವರಗಳನ್ನು ಬರೆದಿರಿಸಿದ್ದಾನೆ.

ರಜನೀಶ್‌ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡಿರುವ ಜೆ.ಸಿ.ನಗರ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X