Get Updates
Get notified of breaking news, exclusive insights, and must-see stories!

ವಿದ್ಯುತ್‌ ಕ್ಷೇತ್ರದ ಸುಧಾರಣೆಗೆ ಬದ್ಧ : ಮುಖ್ಯಮಂತ್ರಿ ಕೃಷ್ಣ ಘೋಷಣೆ

ಬೆಂಗಳೂರು : ವಿದ್ಯುತ್‌ ಕ್ಷೇತ್ರದಲ್ಲಿನ ಸುಧಾರಣೆಗೆ ರಾಜ್ಯ ಸರಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಹೇಳಿದ್ದಾರೆ. ಕರ್ನಾಟಕ ವಿದ್ಯುತ್‌ ನಿಗಮದ 31ನೇ ವಾರ್ಷಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ತಾನು ಕೊಂಡ ವಿದ್ಯುತ್ತಿಗೆ ಪೂರ್ಣ ಹಣ ಪಾವತಿ ಮಾಡದ ಹೊರತು ಕೆಪಿಟಿಸಿಎಲ್‌ನ ಪರಿಸ್ಥಿತಿ ಸುಧಾರಣೆಯಾಗುವುದು ಕಷ್ಟ ಎಂದು ಅಭಿಪ್ರಾಯಪಟ್ಟರು.

ಆದಾಗ್ಯೂ ವಿದ್ಯುತ್‌ ನಿಯಂತ್ರಣ ಆಯೋಗ ಸೂಚಿಸಿರುವ ಕ್ರಮಗಳನ್ನು ಕೈಗೊಳ್ಳಲಾಗುವುದು. ವಿದ್ಯುತ್‌ ಕ್ಷೇತ್ರದ ಸುಧಾರಣೆಗಾಗಿ ರಾಜ್ಯ ಸರಕಾರ ವಿಶ್ವಬ್ಯಾಂಕ್‌ ನೆರವಿನಿಂದ ಪಡೆದ ಮೊದಲ ಕಂತಿನ 279 ಕೋಟಿ ರುಪಾಯಿ ಸಾಲವನ್ನು ಕೆಪಿಟಿಸಿಎಲ್‌ ಹಾಗೂ ವಿದ್ಯುತ್‌ ನಿಗಮಕ್ಕೆ ಬಿಡುಗಡೆ ಮಾಡಿದೆ.

ಕೆ.ಪಿ.ಟಿ.ಸಿ.ಎಲ್‌. ಸುಧಾರಣೆಗೊಳ್ಳುವುದರ ಜೊತೆಗೆ ಜನತೆಯ ಆಶೋತ್ತರಗಳನ್ನು ಪೂರೈಸಲಿದೆ ಎಂಬ ವಿಶ್ವಾಸ ತಮಗಿದೆ ಎಂದರು. ಜಲಾಶಯಗಳ ಅಚ್ಚುಕಟ್ಟು ಪ್ರದೇಶಗಳಲ್ಲಿ ಉಂಟಾಗಿರುವ ಮಳೆಯ ಅಭಾವದಿಂದಾಗಿ ಮುಂಬರುವ ದಿನಗಳು ವಿದ್ಯುತ್‌ ಕ್ಷೇತ್ರಕ್ಕೆ ಆಶಾದಾಯಕವಾಗಿಲ್ಲ ಎಂದೂ ಕೃಷ್ಣ ಹೇಳಿದರು.

7ನೇ ಘಟಕ : ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಕೇಂದ್ರದ (ಆರ್‌.ಟಿ.ಪಿ.ಎಸ್‌) ಏಳನೇ ಘಟಕದ ಕಾಮಗಾರಿ ಕಳೆದ ವರ್ಷ ಅಕ್ಟೋಬರ್‌ 10ರಿಂದ ಆರಂಭವಾಗಿದ್ದು, 2003ರ ಏಪ್ರಿಲ್‌ ಹೊತ್ತಿಗೆ ಕಾರ್ಯಾರಂಭ ಮಾಡಲಿದೆ ಎಂಬ ವಿಶ್ವಾಸ ತಮಗಿದೆ ಎಂದರು.

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+