Get Updates
Get notified of breaking news, exclusive insights, and must-see stories!

ಡಾ। ತೀ.ನಂ. ಶಂಕರನಾರಾಯಣರ ಕೃತಿಗೆ ಕು.ಶಿ. ಜಾನಪದ ಪ್ರಶಸ್ತಿ

ಉಡುಪಿ : ಉತ್ತಮ ಜಾನಪದ ಕೃತಿಗೆ ನೀಡುವ ಕು.ಶಿ. ಜಾನಪದ ಪ್ರಶಸ್ತಿಗೆ 2001ನೇ ಸಾಲಿನಲ್ಲಿ ಕನ್ನಡ ಜಾನಪದ ವಿದ್ವಾಂಸ ಡಾ। ತೀ.ನಂ. ಶಂಕರನಾರಾಯಣ ಅವರ ‘ಜಾನಪದ ಸಮೀಕ್ಷೆ-ವಿಶ್ಲೇಷಣೆ’ ಕೃತಿ ಆಯ್ಕೆಯಾಗಿದೆ.
ಪ್ರಸ್ತುತ ಕುವೆಂಪು ವಿಶ್ವವಿದ್ಯಾ ನಿಲಯದಲ್ಲಿ ಪ್ರಾಧ್ಯಾಪಕರಾಗಿರುವ ಡಾ। ಶಂಕರನಾರಾಯಣ ಅವರು, ಜಾನಪದ ಮೈಲುಗಲ್ಲುಗಳು, ಜಾನಪದ ವಿಚಾರ, ಕಾಡುಗೊಲ್ಲರ ಸಂಪ್ರದಾಯಗಳು ಮತ್ತು ನಂಬಿಕೆಗಳು, ಜನಪದ ಮಹಾಕಾವ್ಯ, ದ್ರಾವಿಡ ಜಾನಪದ ಮೊದಲಾದ ಕೃತಿಗಳ ಕರ್ತೃ. ಡಾ। ಶಂಕರನಾರಾಯಣರು, ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿಯ ಜಾನಪದ ತಜ್ಞ ಪ್ರಶಸ್ತಿಯನ್ನೂ ಪಡೆದಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ। ಬಿ.ಎ. ವಿವೇಕ ರೈ ಹಾಗೂ ಪ್ರಸಾರಾಂಗದ ನಿರ್ದೇಶಕ ಡಾ। ಕೆ. ಚಿನ್ನಪ್ಪ ಗೌಡ ಅವರಿರುವ ಆಯ್ಕೆ ಸಮಿತಿಯು ಡಾ। ಶಂಕರನಾರಾಯಣ ಅವರ ಕೃತಿ ಜಾನಪದ ಸಮೀಕ್ಷೆ-ವಿಶ್ಲೇಷಣೆಯನ್ನು ಕು.ಶಿ. ಜಾನಪದ ಪ್ರಶಸ್ತಿಗಾಗಿ ಆಯ್ಕೆ ಮಾಡಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ। ಹೇರಂಜೆ ಕೃಷ್ಣ ಭಟ್‌ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+