ತ್ವರಿತ ಅಲರ್ಟ್ ಗಳಿಗಾಗಿ
For Daily Alerts
20ರಿಂದ ದಾವಣಗೆರೆ, ಬೀದರ್, ರಾಯಚೂರು, ಗುಲ್ಬರ್ಗಾಕ್ಕೆ ಕೃಷ್ಣ ಭೇಟಿ
ಬೆಂಗಳೂರು : ಭೀಕರ ಬರ ಪರಿಸ್ಥಿತಿಯನ್ನು ಎದುರಿಸಲು ರಾಜ್ಯ ಸರಕಾರ ಕೈಗೊಂಡಿರುವ ಬರ ಪರಿಹಾರ ಕಾಮಗಾರಿಗಳ ಖುದ್ದು ವೀಕ್ಷಣೆಗಾಗಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು, ಆಗಸ್ಟ್ 20ರಿಂದ ಬರ ಪೀಡಿತ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ದಾವಣಗೆರೆ, ಗುಲ್ಬರ್ಗಾ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ಬರ ಪರಿಹಾರ ಕಾಮಗಾರಿಗಳ ಖುದ್ದು ಸಮೀಕ್ಷೆ ನಡೆಸಲಿದ್ದಾರೆ. ಈ ಸಂಬಂಧ ಆಗಸ್ಟ್ 20ರಂದು ದಾವಣಗೆರೆಗೆ ತೆರಳುವ ಕೃಷ್ಣ, ಆಗಸ್ಟ್ 21ರಂದು ರಾಯಚೂರು, ಗುಲ್ಬರ್ಗಾ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು 22ರಂದು ಬೀದರ್ಗೆ ಆಗಮಿಸಿ, ಸಮೀಕ್ಷೆ ನಡೆಸಿದ ಬಳಿಕ, ಅಂದೇ ಸಂಜೆ ಬೆಂಗಳೂರಿಗೆ ಹಿಂತಿರುಗಲಿದ್ದಾರೆ ಎಂದು ಮುಖ್ಯಮಂತ್ರಿಗಳ ಕಾರ್ಯಾಲಯದ ಹೇಳಿಕೆ ತಿಳಿಸಿದೆ.
ಮುಖಪುಟ / ಕೃಷ್ಣಗಾರುಡಿಯ ಕನ್ನಡಿ
Comments
Story first published: Saturday, August 18, 2001, 0:00 [IST]