Get Updates
Get notified of breaking news, exclusive insights, and must-see stories!

ಕೇಂದ್ರ ಸಚಿವರಾದ ಮುರಸೋಳಿ ಮಾರನ್‌, ಬಾಲು ಬಿಡುಗಡೆ

ಚೆನ್ನೈ : ಕೇಂದ್ರ ಸಚಿವರಾದ ಮುರಸೋಳಿ ಮಾರನ್‌ ಹಾಗೂ ಟಿ.ಆರ್‌. ಬಾಲು ಅವರು ಸೋಮವಾರ ಸಂಜೆ ಪೊಲೀಸ್‌ ಕಸ್ಟಡಿಯಿಂದ ಬಿಡುಗಡೆ ಆಗಿದ್ದಾರೆ. ಈ ಇಬ್ಬರು ಸಚಿವರನ್ನು ತತ್‌ಕ್ಷಣವೇ ಬಿಡುಗಡೆ ಮಾಡುವಂತೆ ಇಲ್ಲಿನ 18ನೇ ಮೆಟ್ರೋಪಾಲಿಟಿನ್‌ ನ್ಯಾಯಾಲಯ ಆದೇಶಿಸಿತ್ತು.

ಪ್ರಾಥಮಿಕ ವಿಚಾರಣೆ ಮುಗಿದಿದ್ದು ಸಚಿವರನ್ನು ಬಿಡುಗಡೆಗೊಳಿಸಲು ತಮ್ಮ ಅಭ್ಯಂತರವೇನಿಲ್ಲ ಎಂದು ತಮಿಳುನಾಡು ಪೊಲೀಸರು ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಧೀಶರಾದ ಎನ್‌. ರಾಜಲಕ್ಷ್ಮೀ ಅವರು, ಕೂಡಲೇ ಇಬ್ಬರೂ ಸಚಿವರನ್ನು ಬಿಡುಗಡೆ ಮಾಡುವಂತೆ ಆದೇಶಿಸಿದರು. ಮಾರನ್‌ ಹಾಗೂ ಟಿ.ಆರ್‌. ಬಾಲು ಅವರು ಸರಕಾರಿ ಅಧಿಕಾರಿಗಳಿಗೆ (ಪೊಲೀಸರಿಗೆ) ತಮ್ಮ ಕರ್ತವ್ಯ ಮಾಡಲು ಅಡ್ಡಿಯುಂಟು ಮಾಡಿದರು ಎಂಬ ಆರೋಪದ ಮೇಲೆ ಶನಿವಾರ ಅವರನ್ನು ಬಂಧಿಸಲಾಗಿತ್ತು.

ಮಾರನ್‌ ಅವರು ಅಪೊಲೋ ಆಸ್ಪತ್ರೆಯಲ್ಲೂ, ಟಿ.ಆರ್‌. ಬಾಲು ಅವರು ವೆಲ್ಲೂರು ಜೈಲಿನಲ್ಲೂ ಬಂಧಿಗಳಾಗಿದ್ದರು. ಮಾರನ್‌ ಅವರ ವಿರುದ್ಧ ಪೊಲೀಸರು ಮೂರು ವಿವಿಧ ಮೊಕದ್ದಮೆಗಳನ್ನು ದಾಖಲಿಸಿಕೊಂಡಿದ್ದರೆ, ಬಾಲು ಅವರ ವಿರುದ್ಧ ಎರಡು ಮೊಕದ್ದಮೆಗಳು ದಾಖಲಾಗಿವೆ. ಈ ಮಧ್ಯೆ ಜಾಮೀನಿನ ಮೇಲೆ ಬಿಡುಗಡೆಯಾಗಲು ಕರುಣಾನಿಧಿ ಅವರು ನಿರಾಕರಿಸಿದ್ದಾರೆ. ಜೈಲಿನಲ್ಲಿದ್ದುಕೊಂಡೇ ತಮ್ಮ ವಿರುದ್ಧ ಇರುವ ಎಲ್ಲ ಮೊಕದ್ದಮೆಗಳನ್ನು ನ್ಯಾಯಾಲಯದಲ್ಲಿ ಎದುರಿಸಲು ತಾವು ಸಿದ್ಧರಾಗಿರುವುದಾಗಿ ಅವರು ಪ್ರಕಟಿಸಿದ್ದಾರೆ.

ಇಬ್ಬರು ಕೇಂದ್ರ ಸಚಿವರನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದನ್ನು ಗಂಭೀರವಾಗಿ ಪರಿಗಣಿಸಿದ್ದ ಕೇಂದ್ರ ಸರಕಾರವು ಎರಡು ನಿಯೋಗಗಳನ್ನು ಸತ್ಯಶೋಧನೆಗಾಗಿ ಚೆನ್ನೈಗೆ ಕಳುಹಿಸಿತ್ತು. ಈ ಮಧ್ಯೆ ಕೇಂದ್ರಕ್ಕೆ ಸೂಕ್ತ ಸಮಯದಲ್ಲಿ ಸರಿಯಾದ ವರದಿ ನೀಡದ ತಮಿಳುನಾಡು ರಾಜ್ಯಪಾಲರನ್ನೂ ಪದಚ್ಯುತಗೊಳಿಸಲಾಯಿತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಮುಖಪುಟ / ಇವತ್ತು... ಈ ಹೊತ್ತು...
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+