ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈ 29 ರಂದು ಚೌಡಿಕೆ ಹಾಗೂ ತಮಟೆ ಕಲಾವಿದರ ಸಮಾವೇಶ

By Staff
|
Google Oneindia Kannada News

ಬೆಂಗಳೂರು : ದಲಿತರ ಪ್ರಾಚೀನ ಕಲೆಗಳಾದ ತಮಟೆ ಹಾಗೂ ಚೌಡಿಕೆ ಕಲಾವಿದರಿಗೆ ಪುನರ್ವಸತಿ ಕಲ್ಪಿಸುವಂತೆ ಸರ್ಕಾರವನ್ನು ಒತ್ತಾಯಿಸುವ ‘ರಾಜ್ಯಮಟ್ಟದ ಚೌಡಿಕೆ ಹಾಗೂ ತಮಟೆ ಕಲಾವಿದರ ಸಮಾವೇಶ’ ಜುಲೈ 29 ರಂದು ನಡೆಯಲಿದೆ.

ಕಲಾವಿದರ ಸ್ಥಿತಿಗತಿಗಳನ್ನು ಕುರಿತು ಸಮಾವೇಶದಲ್ಲಿ ಚರ್ಚಿಸಲಾಗುವುದು. ನಶಿಸಿ ಹೋಗುತ್ತಿರುವ ಚೌಡಿಕೆ- ತಮಟೆ ಜಾನಪದ ಕಲೆಗಳನ್ನು ಪೋಷಿಸಲು ಹಾಗೂ ಈ ಕಲಾವಿದರಿಗೆ ಪುನರ್ವಸತಿ ಕಲ್ಪಿಸುವಂತೆ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಸ್ಮಮೇಳನದಲ್ಲಿ ಕೈಗೊಳ್ಳಲಾಗುವುದು.

ಸಮ್ಮೇಳನದಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವವರು- ಕಾರ್ಯದರ್ಶಿ, ಕರ್ನಾಟಕ ಯುವ ಆದಿಜಾಂಬವ ಅಭಿವೃದ್ಧಿ ಸಂಘ, ಮೊದಲನೇ ಮಹಡಿ, ಬಾಪೂಜಿ ವಿದ್ಯಾರ್ಥಿ ನಿಲಯ, ಬೆಂಗಳೂರು - 23 ಈ ವಿಳಾಸವನ್ನು ರಜೆದಿನಗಳನ್ನು ಹೊರತುಪಡಿಸಿ ಇತರ ದಿನಗಳಲ್ಲಿ ಸಂಪರ್ಕಿಸಬಹುದು. ಅಥವಾ ವಿವರಗಳಿಗೆ ನಾಲ್ಕು ರುಪಾಯಿ ಅಂಚೆ ಚೀಟಿ ಲಗತ್ತಿಸಿದ ಸ್ವ ವಿಳಾಸದ ಲಕೋಟೆ ಕಳುಹಿಸಬಹುದು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X