Get Updates
Get notified of breaking news, exclusive insights, and must-see stories!

ಡಬ್ಲ್ಯುಟಿಓ ಹೆಸರಲ್ಲಿ ಒಕ್ಕಲುತನಕ್ಕೆ ಕೊಡಲಿ -ಪ್ರೊ. ನಂಜುಂಡಸ್ವಾಮಿ

ಮಂಗಳೂರು : ಯುರೋಪ್‌ ದೇಶಗಳು ಹಾಗೂ ಅಮೇರಿಕಾ ತಮ್ಮ ಮಾರುಕಟ್ಟೆಗಳನ್ನು ರಕ್ಷಿಸಿಕೊಳ್ಳಲು ಹಾಗೂ ಹೆಚ್ಚುವರಿ ಉತ್ಪನ್ನಗಳನ್ನು ರಫ್ತು ಮಾಡಲು ಅನುಕೂಲವಾಗುವಂತೆ ಜಾಣ ಮಾತುಗಳಲ್ಲಿ ವಿಶ್ವ ವ್ಯಾಪಾರ ಒಪ್ಪಂದ ರೂಪಿಸಿವೆ. ಇದರ ಆಳ ಅಗಲ ತಿಳಿಯದ ಅಭಿವೃದ್ಧಿಶೀಲ ರಾಷ್ಟ್ರಗಳು ಒಪ್ಪಂದಕ್ಕೆ ಬಲಿಪಶುಗಳಾಗುತ್ತಿವೆ ಎಂದು ರಾಜ್ಯ ರೈತಸಂಘದ ಮುಖಂಡ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಹೇಳಿದ್ದಾರೆ.

ಪುರಭವನದಲ್ಲಿ ಶುಕ್ರವಾರ ನಡೆದ ರೈತರ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು, ವಿಶ್ವ ವ್ಯಾಪಾರ ಒಪ್ಪಂದದಿಂದ ಉಂಟಾಗಿರುವ ಗಂಭೀರ ಪರಿಸ್ಥಿತಿಯ ವಿಶ್ಲೇಷಣೆ ನಡೆಸಿದರು. ರೈತರು ಸಂಕಷ್ಟದಲ್ಲಿದ್ದಾರೆ, ಇಂಥಾ ಹೊತ್ತಿನಲ್ಲಿ ವಿಚಾರ ಸಂಕಿರಣಗಳ ಅಗತ್ಯವಿಲ್ಲ . ಜನರನ್ನು ಸಮಾಧಾನ ಪಡಿಸಲು ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಪ್ರೊ. ಎಂ.ಡಿ.ಎನ್‌. ಆಪಾದಿಸಿದರು.

ರೈತರ ರಕ್ಷಣೆಗೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಕೇಂದ್ರ ಜವಳಿ ಸಚಿವರು ಸಂಸತ್ತಿನ ಹೊರಗಡೆ ಸುಳ್ಳು ಹೇಳುತ್ತಿದ್ದರೆ, ಹಣಕಾಸು ಸಚಿವರು ಸಂಸತ್ತಿನೊಳಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಟೀಕಿಸಿದ ಅವರು, ರೈತರು ಸಬ್ಸಿಡಿ ಕೇಳುವ ಭಿಕ್ಷುಕರಲ್ಲ ಎಂದರು.

ಯುರೋಪಿಯನ್‌ ಒಕ್ಕೂಟದ ರೈತರು ನೇರ ಆದಾಯ ಪಾವತಿ ಮೂಲಕ ಸಬ್ಸಿಡಿ ಪಡೆಯುತ್ತಿದ್ದಾರೆ. ಆದರೆ, ಭಾರತದಲ್ಲಿ ವಿಶ್ವ ವ್ಯಾಪಾರ ಒಪ್ಪಂದದ ಹೆಸರಿನಲ್ಲಿ ಸಬ್ಸಿಡಿ ರದ್ದು ಪಡಿಸಲಾಗಿದೆ. ಒಕ್ಕಲುತನಕ್ಕೆ ಕೊಡಲಿಯೇಟು ಹಾಕಲಾಗಿದೆ. ವಿದ್ಯುತ್‌ ದರವನ್ನು ಏರಿಸುವ ಮೂಲಕ ರಾಜ್ಯ ಸರ್ಕಾರ ರೈತರನ್ನು ಶೋಷಿಸುತ್ತಿದೆ ಎಂದು ನಂಜುಂಡಸ್ವಾಮಿ ಆಪಾದಿಸಿದರು. ಡಿ.ಕೆ. ಚೌಟ, ಮಾಜಿ ಸಂಸದ ನಾರಾಯಣ ಸ್ವಾಮಿ, ಚೆನ್ನಪ್ಪ ಗೌಡ, ದ್ವಾರಕಾನಾಥ್‌ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

(ಮಂಗಳೂರು ಪ್ರತಿನಿಧಿಯಿಂದ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+