ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀರಪ್ಪನ್‌ ಹಿಡಿಯಲು ಅವರ್ನ್‌ಬಿಟ್‌, ಇವರ್ನಬಿಟ್‌ ಅವರ್ಯಾರು?

By Staff
|
Google Oneindia Kannada News

ಬೆಂಗಳೂರು : ಕಾಡುಗಳ್ಳ ವೀರಪ್ಪನ್‌ನನ್ನು ಹಿಡಿಯಲು ರಾಜ್ಯ ಮೀಸಲು ಪೊಲೀಸ್‌ ಪಡೆಯ ಡಿಐಜಿ ಕೆಂಪಯ್ಯ ಅವರನ್ನು ನೇಮಿಸಲಾಗಿದೆ. ಈಗ ಕೆಂಪಯ್ಯ ಅವರು ಐಜಿಪಿ ಸ್ಥಾನಕ್ಕೆ ಬಡ್ತಿ ಪಡೆದು, ನರಹಂತಕ ವೀರಪ್ಪನ್‌ ವಿರುದ್ಧದ ಕಾರ್ಯಪಡೆಯ (ಎಸ್‌.ಟಿ.ಎಫ್‌) ಕಮಾಂಡೆಂಟ್‌ ಆಗಿ ನೇಮಕಗೊಂಡಿದ್ದಾರೆ.

ಈವರೆಗೆ ವಿಶೇಷ ಕಾರ್ಯಪಡೆಯ ಮುಖ್ಯಸ್ಥರಾಗಿದ್ದ ಹರ್ಷವರ್ಧನ ರಾಜು ಅವರು ಕೇಂದ್ರಕ್ಕೆ ಎರವಲು ಸೇವೆಯ ಮೇಲೆ ತೆರಳಿದ್ದಾರೆ. ತೆರವಾಗಿರುವ ಆ ಸ್ಥಾನಕ್ಕೆ ಕೆಂಪಯ್ಯ ಅವರನ್ನು ಸರಕಾರ ನೇಮಕ ಮಾಡಿದೆ. ಅಲ್ಲದೆ ರಾಜ್ಯ ಗೃಹ ರಕ್ಷಕ ದಳದ ಡಾ. ವಿಶ್ವನಾಥನ್‌ ಅವರನ್ನು ಗುಲ್ಬರ್ಗಾದಲ್ಲಿ ನಡೆದ ಹೆಣ್ಣು ಶಿಶುಗಳ ಮಾರಾಟ ಪ್ರಕರಣದ ವಿಚಾರಣಾಧಿಕಾಗಳನ್ನಾಗಿ ನೇಮಿಸಲಾಗಿದೆ. ಕರ್ನಾಟಕ ಪೊಲೀಸ್‌ ವಸತಿ ನಿರ್ಮಾಣ ಮಂಡಳಿ ವ್ಯವಸ್ಥಾಪಕರಾಗಿರುವ ಜೈ ಪರ್‌ಕಾಶ್‌ರಿಗೆ ರಾಜ್ಯ ಗೃಹರಕ್ಷಕ ದಳದ ಹೆಚ್ಚುವರಿ ಹೊಣೆಗಾರಿಕೆ ವಹಿಸಲಾಗಿದೆ.

ಡಿಐಜಿ ಸ್ಥಾನದಲ್ಲಿದ್ದ ಐವರು ಐಪಿಎಸ್‌ ಅಧಿಕಾರಿಗಳಿಗೆ ಐಜಿಪಿ ಹುದ್ದೆಗೆ ಬಡ್ತಿ ನೀಡಲಾಗಿದ್ದು, ಮುಂದೆ ತಿಳಿಸಲಾದ ಹುದ್ದೆಗಳಿಗೆ ನೇಮಿಸಲಾಗಿದೆ.

ಬಿಪಿನ್‌ ಗೋಪಾಲಕೃಷ್ಣ - ಬೆಂಗಳೂರು ಮಹಾನಗರ ಸಾರಿಗೆ (ಭದ್ರತೆ), ಡಾ. ಬಿ.ಈ. ಉಮಾಪತಿ - ತರಬೇತಿ, ಓಂ ಪ್ರಕಾಶ್‌ - ಆರ್ಥಿಕ ಪ್ರಕರಣಗಳ ವಿಭಾಗ, ಎಂ. ಲಕ್ಷ್ಮಣ್‌ - ನೀರಾವರಿ ಇಲಾಖೆ (ಜಾಗೃತದಳ), ಜೀವನ್‌ಕುಮಾರ್‌ ವಿ. ಗಾಂವ್ಕರ್‌ - ಮೀಸಲು ಪಡೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X