ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಭಿಕ್ಷೆ ಬೇಡಿಕೊಂಡೇ ಎಸ್ಸೆಸ್ಸೆಲ್ಸಿಪಾಸಾದ ಹುಡುಗಿಗೆ ಜಯಲಲಿತಾರಿಂದ ಲಕ್ಷ ರು.
ಚೆನ್ನೈ : ಭಿಕ್ಷಾಟನೆ ಮಾಡಿಕೊಂಡೂ ಎಸ್ಸ್ಸೆಸೆಲ್ಸಿ ಪಾಸಾಗಿರುವ ಮೈಸೂರಿನ ನಾಗರತ್ನಮ್ಮನ ಮುಂದಿನ ವಿದ್ಯಾಭ್ಯಾಸಕ್ಕಾಗಿ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ 1 ಲಕ್ಷ ರುಪಾಯಿ ನೆರವು ನೀಡಿದ್ದಾರೆ.
ಅಂದಹಾಗೆ ಈ ನೆರವನ್ನು ಅವರ ಸ್ವಂತ ದುಡ್ಡಿನಿಂದ ಕೊಡುತ್ತಿಲ್ಲ. ಎಂಜಿಆರ್ ಟ್ರಿಸ್ಟ್ನಿಂದ 1 ಲಕ್ಷ ರುಪಾಯಿ ಮಂಜೂರು ಮಾಡಿದ್ದಾರೆ. ಇದೇನಪ್ಪಾ ಕರ್ನಾಟಕದ ಹುಡುಗಿಗೆ ತಮಿಳಿನಾಡಿನ ನೆರವು ಅಂದುಕೊಂಡಿರಾ ? ‘ಅಮ್ಮ’ ಜಯಲಲಿತಾ ಈ ನೆರವನ್ನು ಕೊಡಲು ಕಾರಣ, ನಾಗರತ್ನಮ್ಮನ ಅಪ್ಪ- ಅಮ್ಮ ತಮಿಳುನಾಡಿನ ಡಿಂಡಿಗಲ್ ಮೂಲದವರು .
ಮಾಧ್ಯಮಗಳಲ್ಲಿ ನಾಗರತ್ನಮ್ಮನ ಸಾಧನೆ ಬಗ್ಗೆ ಪ್ರಕಟವಾದ ವರದಿಗಳನ್ನೋದಿಯೇ ಜಯಲಲಿತಾ ಕರಳು ಚುರ್ರಂದಿತಂತೆ. ಏನೇ ಆಗಲಿ, ಜಯಲಲಿತಾ ಅವರಿಂದ ಒಂದು ಒಳ್ಳೆ ಕೆಲಸ ಆಗಿದೆ ಅನ್ನೋದು ಹೆಮ್ಮೆಯ ವಿಷಯ.
(ಇನ್ಫೋ ವಾರ್ತೆ)
Story first published: Friday, May 25, 2001, 5:30 [IST]