ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಂಡ್ಯ : ಮದುವೆ ದಿಬ್ಬಣದಟೆಂಪೋ- ಸ್ಕೂಟರ್ ಡಿಕ್ಕಿ, 2 ಸಾವು
ಮಂಡ್ಯ : ಇಂಡುವಾಳು ಸಮೀಪದ ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿ ಭಾನುವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಸತ್ತು , 15 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರನ್ನು ಕಾಳೇನಹಳ್ಳಿ ಕಲ್ಯಾಣ ಮಂಟಪ ಹಾಗೂ ರೈಸ್ಮಿಲ್ ಮಾಲೀಕ ನಾಗೇಶ್ಕುಮಾರ್ ಮತ್ತು ಬೆಂಗಳೂರಿನ ಜಯಕೃಷ್ಣಪ್ಪ (25) ಎಂದು ಗುರ್ತಿಸಲಾಗಿದೆ. ಮಡಿಕೇರಿಯಿಂದ ಬೆಂಗಳೂರಿಗೆ ಮದುವೆ ದಿಬ್ಬಣ ಒಯ್ಯುತ್ತಿದ್ದ ಟೆಂಪೋ ಹಾಗೂ ಮಂಡ್ಯದಿಂದ ಕಾಳೇನಹಳ್ಳಿಗೆ ಹೋಗುತ್ತಿದ್ದ ಸ್ಕೂಟರ್ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಈ ದುರಂತ ಸಂಭವಿಸಿದೆ.
(ಇನ್ಫೋ ವಾರ್ತೆ)
Comments
Story first published: Monday, May 21, 2001, 5:30 [IST]