ನಿಮ್ಮೂರ ರಸ್ತೆಗೆ ದೊಡ್ಡವರ ಹೆಸರಿಡುತ್ತೀರಾ! ಸ್ವಲ್ಪ ತಾಳಿ ...
ಬೆಂಗಳೂರು : ಇದು ಓಣಿಯ ರಸ್ತೆಯಾ, ಸಾಯಿಸುತೆ ಹೆಸರಾಗಬಹುದು. ರಸ್ತೆಯ ಉದ್ದ ಮೂರು ಮೀಟರ್ರಾ, ದೊಡ್ಡರಂಗೇಗೌಡರ ಹೆಸರು ಅಡ್ಡಿಯಿಲ್ಲ . ಕಿಲೋ ಮೀಟರ್ ಉದ್ದದ ರಸ್ತೆಯಾ, ಅನಂತಮೂರ್ತಿ ಹೆಸರು ಆದೀತು .. ಈ ಎಲ್ಲ ಮೀಮಾಂಸೆಗೆ ಕಾರಣವೇನಪ್ಪಾ ಅಂದರೆ-
ದೊಡ್ಡವರ ಹೆಸರನ್ನು ಚಿಕ್ಕಪುಟ್ಟ ರಸ್ತೆಗಳಿಗಿಡಬೇಡಿ. ಒಂದೆರಡು ಕಿಮೀ ಉದ್ದವಿರುವ ರಸ್ತೆಗಳಿಗಾದರೂ ಹೆಸರಿಟ್ಟರೆ ದೊಡ್ಡವರ ಮರ್ಯಾದೆ ಉಳಿದೀತು ಎಂದು ನಗರದ ಮಾಜಿ ಮೇಯರ್ ಜಿ. ನಾರಾಯಣ, ನಾಮಕರಣ ನಾಯಕರಿಗೆ ಅಪ್ಪಣೆ ಕೊಡಿಸಿರುವುದು.
ಹನುಮಂತ ನಗರದಲ್ಲಿನ ಬಡಾವಣೆಯ ತಿರುವಿನ ರಸ್ತೆಯಾಂದಕ್ಕೆ ಗೋಕಾಕ್ ಅವರ ಹೆಸರನ್ನಿಟ್ಟಿರುವ ಬಗ್ಗೆ ನಾರಾಯಣ ಅಸಮಾಧಾನ ವ್ಯಕ್ತಪಡಿಸಿದರು. ಚಿಕ್ಕರಸ್ತೆಗಳಿಗೆ ನಾಡಿನ ಗಣ್ಯರ ಹೆಸರನ್ನಿಡುವುದು ಸರಿಯಲ್ಲ ಅನ್ನುವುದು ಅವರ ಸ್ಪಷ್ಟ ಅಭಿಪ್ರಾಯ. ಡಾ.ಸಿದ್ಧಯ್ಯ ಪುರಾಣಿಕ ಮಾರ್ಗ, ಡಾ.ಎಂ.ಸಿ. ಮೋದಿ ರಸ್ತೆ ಹಾಗೂ ಸ್ವಾಮಿ ವಿವೇಕಾನಂದ ಉದ್ಯಾನವನ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ರೆಸಿಡೆನ್ಸಿ ರಸ್ತೆಗೆ ಕಾರಿಯಪ್ಪನವರ ಹೆಸರನ್ನಿಟ್ಟಿರುವುದೂ ಪ್ರಯೋಜನವಾಗಿಲ್ಲ . ಎಲ್ಲ ಆಹ್ವಾನ ಪತ್ರಿಕೆಗಳಲ್ಲೂ ರೆಸಿಡೆನ್ಸಿ ರಸ್ತೆ ಎಂದೇ ಇರುತ್ತೆ . ಇಂಥಾ ಸೂಕ್ಷ್ಮ ವಿಚಾರ ಮಹಾನಗರ ಪಾಲಿಕೆಗೆ ಯಾಕರ್ಥವಾಗುತ್ತಿಲ್ಲ ಎಂದು ನಾರಾಯಣ ಪ್ರಶ್ನಿಸಿದರು. ಮಾಜಿ ಮೇಯರ್ ಅವರ ಮಾತುಗಳನ್ನು ಹಾಲಿ ಮೇಯರ್ ಪ್ರೇಮಾ ಕಾರ್ಯಪ್ಪ ಮೌನವಾಗಿ ಆಲಿಸುತ್ತ ಕೂತಿದ್ದರು.
ನಾರಾಯಣ ಅವರ ನಂತರ ಮಾತನಾಡಿದ ಜನಪ್ರಿಯ ಸಂಶೋಧಕ ಎಂ.ಚಿದಾನಂದ ಮೂರ್ತಿ, ರಸ್ತೆಗಳಿಗಿಟ್ಟಿರುವ ದೊಡ್ಡವರ ಹೆಸರುಗಳು ಅಧ್ವಾನವಾಗುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿದರು. ಮಹಾಕವಿ ಕುವೆಂಪು ರಸ್ತೆಯನ್ನು ಎಂ.ಕೆ.ಕೆ. ರಸ್ತೆ ಎಂದು ಕರೆಯಲಾಗುತ್ತಿದೆ. ಕನ್ನಡಕ್ಕಾಗಿ ಕೈ ಎತ್ತು ಎಂದ ಕುವೆಂಪು ಅವರಿಗೆ ಸಿಕ್ಕ ಬಹುಮಾನವಿದು ಎಂದು ಚಿದಾನಂದಮೂರ್ತಿ ವಿಷಾದಿಸಿದರು.
ರೇಷ್ಮೆ ಸಚಿವ ಎಂ.ಮಹದೇವ್, ಶಾಸಕ ರಾಮಲಿಂಗಾರೆಡ್ಡಿ , ಉಪ ಮಹಾಪೌರ ಬಿ.ಎಸ್.ಪುಟ್ಟರಾಜು, ಮಾಜಿ ಮೇಯರ್ ಜೆ.ಹುಚ್ಚಪ್ಪ ಹಾಗೂ ಪಾಲಿಕೆ ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications