ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಆರೋಗ್ಯ ಅರಿವು ಆಂದೋಲನ, ಲೈಂಗಿಕಆರೋಗ್ಯಕ್ಕೆ ಒತ್ತು
ಬೆಂಗಳೂರು : ಲೈಂಗಿಕ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುವ ಕುಟುಂಬ ಆರೋಗ್ಯ ಅರಿವು ಆಂದೋಲನವನ್ನು ಏಪ್ರಿಲ್ 16 ರಿಂದ ಏಪ್ರಿಲ್ 30 ರವರೆಗೆ ರಾಜ್ಯ ಸರ್ಕಾರ ಹಮ್ಮಿಕೊಂಡಿದೆ.
ರಾಜ್ಯದ ಎಲ್ಲ 27 ಜಿಲ್ಲೆಗಳಲ್ಲಿ ನಡೆಯುವ ಈ ಆಂದೋಲನದ ಮೂಲ ಉದ್ದೇಶ, ಜನರಲ್ಲಿ ಲೈಂಗಿಕ ರೋಗ ನಿಯಂತ್ರಣ, ಪ್ರಜಾನಾಂಗ ಮಾರ್ಗಸೋಂಕು, ಹಾಗೂ ಏಡ್ಸ್ ಬಗೆಗೆ ತಿಳಿವಳಿಕೆ, ಸೂಕ್ತ ಚಿಕಿತ್ಸೆ ನೀಡಿ ಕುಟುಂಬದ ಆರೋಗ್ಯವನ್ನು ಕಾಪಾಡುವುದಾಗಿದೆ.
ರಾಜ್ಯಾದ್ಯಂತ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮತ್ತು ತಪಾಸಣೆ ಶಿಬಿರಗಳನ್ನು ಏರ್ಪಡಿಸಲಾಗಿದ್ದು , ಸಾರ್ವಜನಿಕರು ಆಂದೋಲನದ ಸದುಪಯೋಗವನ್ನು ಪಡೆಯುವಂತೆ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹಾಗೂ ಆರೋಗ್ಯ ಸಚಿವ ಎ.ಬಿ. ಮಲಕರೆಡ್ಡಿ ಸಾರ್ವಜನಿಕರನ್ನು ಕೋರಿದ್ದಾರೆ.
(ಇನ್ಫೋ ವಾರ್ತೆ)
Comments
Story first published: Tuesday, April 17, 2001, 5:30 [IST]