ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಾದಾಪುರ : ಮದುವೆ ದಿಬ್ಬಣದಲಾರಿ ಮಗುಚಿ 6 ಸಾವು
ಮಂಡ್ಯ : ಮದುವೆ ದಿಬ್ಬಣ ಹೊತ್ತು ಸಾಗುತ್ತಿದ್ದ ಲಾರಿ ಕೆ.ಆರ್. ಪೇಟೆಯ ಮಾದಾಪುರ ಗೇಟ್ ಬಳಿ ಮಗುಚಿ ಬಿದ್ದು ಆರು ಜನರು ಸಾವಿಗೀಡಾಗಿದ್ದರೆ, ಮದುಮಗ ಮತ್ತು ಮದುಮಗಳು ಸೇರಿದಂತೆ 25 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಸೋಮವಾರ ಸಂಭವಿಸಿದ ಈ ಅಪಘಾತದಲ್ಲಿ ಸ್ವಾಮಿ ಎಂಬ 12 ವರ್ಷದ ಬಾಲಕ ಮತ್ತು ನಂಜು(25), ದೇವರಾಜು (35), ರವಿ (33) , ಚಂದ್ರೇಗೌಡ(25) ಹಾಗೂ ರಾಜೇಗೌಡ ಎಂಬುವರು ಮೃತರಾಗಿದ್ದಾರೆ. ಇನ್ನೊಬ್ಬ ಮೃತ ವ್ಯಕ್ತಿಯ ಗುರುತು ಸಿಕ್ಕಿಲ್ಲ . ಆತ ಲಾರಿಯ ಕ್ಲೀನರ್ ಆಗಿರಬಹುದು ಎಂದು ಶಂಕಿಸಲಾಗಿದೆ.
ಮೈಸೂರಿನ ನಂಜೇಗೌಡರ ಮಗ ಕಾಳೇಗೌಡರ ವಿವಾಹ ಹೊಳೆನರಸೀಪುರದ ಮೆಣಸಿನಕೊಪ್ಪಲು ಗ್ರಾಮದಲ್ಲಿ ನಡೆದಿತ್ತು . ಮದುವೆ ಮುಗಿಸಿ ಸಂಜೆ ಲಾರಿಯಲ್ಲಿ ಹಿಂದಿರುಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
(ಇನ್ಫೋ ವಾರ್ತೆ)
Comments
Story first published: Tuesday, April 17, 2001, 5:30 [IST]