ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೃಷಿ ವಿಶ್ವ ವಿದ್ಯಾಲಯದ ಕುಲಪತಿಗಳಾಗಿ ಡಾ. ಎ.ಎಂ. ಕೃಷ್ಣಪ್ಪ
ಬೆಂಗಳೂರು : ಡಾ.ಎ.ಎಂ. ಕೃಷ್ಣಪ್ಪ ಅವರನ್ನು ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ ನೂತನ ಕುಲಪತಿಗಳನ್ನಾಗಿ ನೇಮಿಸಲಾಗಿದ್ದು , ಈ ಕುರಿತಾದ ಅಧಿಸೂಚನೆಯನ್ನು ವಿಶ್ವ ವಿದ್ಯಾಲಯದ ಕುಲಾಧಿಪತಿಗಳಾದ ರಾಜ್ಯಪಾಲೆ ವಿ.ಎಸ್. ರಮಾದೇವಿ ಹೊರಡಿಸಿದ್ದಾರೆ.
ಪ್ರಸ್ತುತ ಕುಲಪತಿಗಳಾಗಿರುವ ಡಾ. ಎಸ್. ಬಿಸಲಯ್ಯ ಅವರ ಅಧಿಕಾರವಧಿ ಏಪ್ರಿಲ್ 19 ಕ್ಕೆ ಕೊನೆಗೊಳ್ಳಲಿದ್ದು , ಏಪ್ರಿಲ್ 20 ರಂದು ಅಧಿಕಾರ ಸ್ವೀಕರಿಸುವ ಕೃಷ್ಣಪ್ಪನವರು ಮೂರು ವರ್ಷಗಳ ಕಾಲ ಕುಲಪತಿಗಳ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಕೃಷ್ಣಪ್ಪನವರು ಕೃಷಿ ವಿವಿಯಲ್ಲಿ ಮಣ್ಣು ವಿಜ್ಞಾನದ ಪ್ರಾಧ್ಯಾಪಕರಾಗಿ ಕರ್ತವ್ಯದಲ್ಲಿದ್ದಾರೆ.
(ಇನ್ಫೋ ವಾರ್ತೆ)
Comments
Story first published: Sunday, April 1, 2001, 5:30 [IST]