ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತದಡಿ ಬಂದರು ನಿರ್ಮಾಣ ಕಾಮಗಾರಿಗೆ ರಾಜ್ಯಸರಕಾರ ಅಸ್ತು

By Staff
|
Google Oneindia Kannada News

ಬೆಂಗಳೂರು : ಪಶ್ಚಿಮ ಕರಾವಳಿಯಲ್ಲಿ 755 ಕೋಟಿ ರೂಪಾಯಿ ವೆಚ್ಚದ ತದಡಿ ಬಂದರು ನಿರ್ಮಾಣಕ್ಕೆ ರಾಜ್ಯ ಸರಕಾರ ಗುರುವಾರ ಒಪ್ಪಿಗೆ ನೀಡಿದೆ.

ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ ಅವರ ಸಮ್ಮುಖದಲ್ಲಿ ತದಡಿ ಬಂದರು ನಿರ್ಮಾಣ ಕೂಟ ಮತ್ತು ರಾಜ್ಯ ಸರಕಾರದ ನಡುವಿನ ಒಪ್ಪಂದಕ್ಕೆ ಸಹಿಹಾಕಲಾಯಿತು. ಬಂದರು ನಿರ್ಮಾಣ ಕೂಟವು, ದಕ್ಷಿಣ ಕೊರಿಯಾದ ಹಂಜಿನ್‌ ಎಂಜಿನಿಯರಿಂಗ್‌ ಆ್ಯಂಡ್‌ ಕನಸ್ಟ್ರಕ್ಷನ್ಸ್‌ ಕಂಪೆನಿ ಹಾಗೂ ಮುಂಬೈನ ಜ್ಹೂಮ್‌ ಡೆವಲಪ್‌ಮೆಂಟ್‌ ಕಂಪೆನಿಗಳನ್ನು ಒಳಗೊಂಡಿದೆ.

ಬಂದರು ನಿರ್ಮಾಣ ಕಾಮಗಾರಿಗೆ ಹಸಿರು ನಿಶಾನೆ ಪತ್ರ ಸ್ವೀಕರಿಸಿ ಮಾತನಾಡಿದ ನಿರ್ಮಾಣ ಕೂಟದ ಸುರೇಂದ್ರ ವಾಕಿಲ್‌, ಮೊದಲ ಹಂತದ ಕಾಮಗಾರಿ ತಕ್ಷಣವೇ ಆರಂಭವಾಗುವುದು ಮತ್ತು ಸ್ಥಳೀಯ ಮೀನುಗಾರರ ಹಿತಾಸಕ್ತಿಗೆ ಯಾವುದೇ ರೀತಿಯ ಧಕ್ಕೆಯಾಗದಂತೆ ನೋಡಿಕೊಳ್ಳಲಾಗುವುದು ಎಂದರು. ಈ ಸಂದರ್ಭದಲ್ಲಿ ರಾಜ್ಯ ಲೋಕೋಪಯೋಗಿ ಸಚಿವ ಧರ್ಮಸಿಂಗ್‌, ಮೂಲಭೂತ ಸೌಲಭ್ಯ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬಿ.ಕೆ. ರಾಮದಾಸ್‌ ಹಾಜರಿದ್ದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X