ಬಡ ರೋಗಿಗಳ ಹೃದಯಕ್ಕೆ ಹತ್ತಿರವಾದ ಪೇಸ್ಮೇಕರ್
ಬೆಂಗಳೂರು : ಬಡ ಹೃದ್ರೋಗಿಗಳ ಪಾಲಿಗೆ ವರದಾನ ಎಂದು ಬಣ್ಣಿಸಲಾಗಿರುವ ಪೇಸ್ಮೇಕರ್ ಬ್ಯಾಂಕನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಎ.ಬಿ. ಮಲಕರೆಡ್ಡಿ ನಗರದ ಮಣಿಪಾಲ್ ಹಾರ್ಟ್ ಫೌಂಡೇಶನ್ನಲ್ಲಿ ಮಂಗಳವಾರ ಉದ್ಘಾಟಿಸಿದರು.
ಹಾರ್ಟ್ ಫೌಂಡೇಶನ್ನ ವೈದ್ಯ ಡಾ. ದೇವಿ ಪ್ರಸಾದ್ ಶೆಟ್ಟಿ ಅವರಿಗೆ ಪೇಸ್ಮೇಕರ್ಗಳನ್ನು ಸಾಂಕೇತಿಕವಾಗಿ ನೀಡುವ ಮೂಲಕ ಮಲಕರೆಡ್ಡಿ ಬ್ಯಾಂಕ್ಗೆ ಚಾಲನೆ ನೀಡಿದರು. ಬಡ ರೋಗಿಗಳಿಗೆ ಉಚಿತವಾಗಿ ಪೇಸ್ಮೇಕರ್ಗಳನ್ನು ವಿತರಿಸಲು ನಿರ್ಧರಿಸಿರುವ ಹಾರ್ಟ್ ಫೌಂಡೇಶನ್ನ ನಿಲುವನ್ನು ಅವರು ಶ್ಲಾಘಿಸಿದರು. ಜಯದೇವ ಮುಂತಾದ ಪ್ರಮುಖ ಆಸ್ಪತ್ರೆಗಳಲ್ಲಿ ಇಂಥಾ ಬ್ಯಾಂಕ್ಗಳನ್ನು ಸ್ಥಾಪಿಸುವ ಮೂಲಕ ಬಡ ರೋಗಿಗಳಿಗೆ ದುಬಾರಿ ಬೆಲೆಯ ಪೇಸ್ಮೇಕರ್ಗಳನ್ನು ಒದಗಿಸುವಂತೆ ಮಲಕರೆಡ್ಡಿ ರೋಟರಿಕ್ಲಬ್ಗೆ ಮನವಿ ಮಾಡಿದರು.
ಹಾರ್ಟ್ಬೀಟ್ ಇಂಟರ್ನ್ಯಾಶನಲ್, ಅಮೆರಿಕ ಆಸ್ಪತ್ರೆಗಳಲ್ಲಿನ ವೈದ್ಯರ ಒಕ್ಕೂಟ, ರೋಟರಿ ಇಂಟರ್ನ್ಯಾಶನಲ್ ಹಾಗೂ ಕಾರ್ಡಿಯಾಕ್ ಪೇಸ್ಮೇಕರ್ಸ್ಗಳ ತಯಾರಕರ ಸಹಯೋಗದಲ್ಲಿ ಈ ಬ್ಯಾಂಕ್ ಸ್ಥಾಪಿತವಾಗಿದೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಬಡ ರೋಗಿಗಳಿಗೆ ಸಹಾಯ ಮಾಡುವುದು ಬ್ಯಾಂಕ್ನ ಉದ್ದೇಶ.
ಹಾರ್ಟ್ ಫೌಂಡೇಶನ್ನ ಕಾರ್ಡಿಯಾಲಜಿ ವಿಭಾಗದ ಮುಖ್ಯಸ್ಥ ಡಾ. ಸುಭಾಷ್ಚಂದ್ರ ಪೇಸ್ಮೇಕರ್ ಬಗ್ಗೆ ವಿವರಗಳನ್ನು ನೀಡಿದರು. ರೋಗಿಯಾಬ್ಬನಿಗೆ ಪೇಸ್ಮೇಕರ್ ಅಳವಡಿಸಲು 80 ಸಾವಿರ ರುಪಾಯಿ ಖರ್ಚಾಗುತ್ತದೆ. ಈಗಾಗಲೇ ನಾಲ್ವರು ರೋಗಿಗಳಿಗೆ ಉಚಿತವಾಗಿ ಪೇಸ್ಮೇಕರ್ಗಳನ್ನು ಹಾರ್ಟ್ ಫೌಂಡೇಶನ್ ಅಳವಡಿಸಿದ್ದು , ನಾಲ್ವರೂ ಆರೋಗ್ಯವಾಗಿದ್ದಾರೆ. ಪ್ರತಿ ತಿಂಗಳು 10 ರಿಂದ 15 ಪೇಸ್ ಮೇಕರ್ಗಳನ್ನು ಫೌಂಡೇಶನ್ನಲ್ಲಿ ಅಳವಡಿಸಲು ಸಾಧ್ಯವಿದೆ ಎಂದರು.
(ಯುಎನ್ಐ)
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications