ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಡಿ.30 : ಹುಬ್ಬಳ್ಳಿಗೆ ಖಭೌತ ವಿಜ್ಞಾನಿ ನಾರ್ಳೀಕರ
ಹುಬ್ಬಳ್ಳಿ: ಪ್ರಸಿದ್ಧ ಖಗೋಳ ವಿಜ್ಞಾನಿ ಡಾ. ಜಯಂತ ನಾರ್ಳೀಕರ ಅವರು ಡಿಸೆಂಬರ್ 30ರಂದು ಹುಬ್ಬಳ್ಳಿ ನಗರಕ್ಕೆ ಆಗಮಿಸಲಿದ್ದಾರೆ.
ಡಾ. ಜಯಂತ ವಿಷ್ಣು ನಾರ್ಳೀಕರ ಅವರು ತಮ್ಮ ಎರಡು ದಿನಗಳ ಪ್ರವಾಸದ ಸಂದರ್ಭದಲ್ಲಿ ವಿವಿಧೆಡೆಗಳಲ್ಲಿ ಉಪನ್ಯಾಸಗಳನ್ನು ನೀಡಲಿದ್ದಾರೆ. ಚಿನ್ಮಯ ವಿದ್ಯಾಲಯ ಹಾಗೂ ಇತರ ಸಂಸ್ಥೆಗಳು ಸಂಯುಕ್ತವಾಗಿ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ಆಯೋಜಿಸುವ ಕಾರ್ಯಕ್ರಮದಲ್ಲಿ ಮತ್ತು ಚೇಂಬರ್ ಆಫ್ ಕಾಮರ್ಸ್ ಮತ್ತು ಪಿ. ಸಿ. ಜಾಬಿನ್ ಕಾಲೇಜುಗಳಲ್ಲಿ ಉಪನ್ಯಾಸ ನೀಡಲಿದ್ದಾರೆ.
ನಾರ್ಳೀಕರ ಅವರು ಭಟ್ನಾಗರ್ ಪ್ರಶಸ್ತಿ, ರಾಷ್ಟ್ರ ಭೂಷಣ ಪ್ರಶಸ್ತಿ ಮತ್ತು ಬಿರ್ಲಾ ಪ್ರಶಸ್ತಿಗಳನ್ನು ಪಡೆದುಕೊಂಡಿರುವುದಲ್ಲದೆ, ಇಂದಿರಾ ಗಾಂಧಿ ಮತ್ತು ಯುನೆಸ್ಕೋದ ಕಳಿಂಗ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
Comments
English summary
Scientist visits hubli