Get Updates
Get notified of breaking news, exclusive insights, and must-see stories!

ಪಶ್ಚಿಮ ಘಟ್ಟದ ಬಸಿರಿಗೆ ಕನ್ನ: ಕೇಂದ್ರದ ತಂಡಕ್ಕೆ ಪರಿಸರವಾದಿಗಳ ದೂರು

ಸಾಗರ : ಹೊಸನಗರ ತಾಲ್ಲೂಕಿನಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಕ್ವಾರಿ ಕೆಲಸಗಳಿಂದ ಲಿಂಗನಮಕ್ಕಿ ಜಲಾಶಯ, ಮಾವಿನಹೊಳೆ ಬ್ರಹ್ಮೇಶ್ವರ ಬೆಟ್ಟಗಳು ಅವಸಾನದ ಅಂಚಿಗೆ ತಲುಪಿರುವುದಾಗಿ ಇಲ್ಲಿನ ವೃಕ್ಷ ಲಕ್ಷ ಆಂದೋಲನದ ಕಾರ್ಯಕರ್ತರು , ಕೇಂದ್ರ ಪರಿಸರ ಅರಣ್ಯ ಸಚಿವಾಲಯದ ಅರಣ್ಯಾಧಿಕಾರಿಗಳ ತಂಡಕ್ಕೆ ದೂರು ನೀಡಿದ್ದಾರೆ.

ಪಶ್ಚಿಮ ಘಟ್ಟದ ವೃಕ್ಷ ಲಕ್ಷ ಆಂದೋಲನ ಪರಿಸರ ನಾಶದ ಕುರಿತು ಕೇಂದ್ರ ಪರಿಸರ ಸಚಿವರಿಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ಪಶ್ಚಿಮಘಟ್ಟಕ್ಕೆ ಭೇಟಿ ನೀಡಿತ್ತು. ಈ ಸಂದರ್ಭದಲ್ಲಿ ಶೆಟ್ಟಿ ಹಳ್ಳಿ ಅಭಯಾರಣ್ಯ, ಬಿಸಗೋಡ, ದಾಂಡೇಲಿ ಅಭಯಾರಣ್ಯಗಳ ನಡುವೆ ಅನಧಿಕೃತ ಗಣಿ ವಸತಿ ಕ್ಯಾಂಪ್‌ಗಳು ಕೆಲಸ ನಡೆಸುತ್ತಿದ್ದು, ಅವುಗಳನ್ನು ಖಾಲಿ ಮಾಡಿಸಬೇಕೆಂದು ಆಂದೋಲನದ ಸದಸ್ಯರು ತಂಡವನ್ನು ಆಗ್ರಹಿಸಿದರು . ವೃಕ್ಷ ಲಕ್ಷ ಆಂದೋಲನದ ಮುಖಂಡ ಅನಂತ ಹೆಗಡೆ ಅಶೀಸರ , ಸರಕಾರದ ಯೋಜನೆಗಳಿಂದ ಮತ್ತು ಅನಧಿಕೃತವಾಗಿ ಕ್ವಾರಿ ಕೆಲಸ ನಡೆಸುತ್ತಿರುವವವರಿಂದ ಪರಿಸರದ ಮೇಲಾಗುವ ಹಾನಿಯನ್ನು ವಿವರಿಸಿ, ಪಶ್ಚಿಮ ಘಟ್ಟವನ್ನು ಅದರ ಪಾಡಿಗೆ ಬಿಟ್ಟಲ್ಲಿ ಕರ್ನಾಟಕದ ಅಮೂಲ್ಯ ಸಂಪತ್ತನ್ನು ಉಳಿಸಿದಂತಾಗುತ್ತದೆ ಎಂದರು.

ವಿವಾದಿತ ಕೊಲ್ಲಿ ಬಚ್ಚಲು ನೀರಾವರಿ ಅಣೆಕಟ್ಟು ಯೋಜನೆಗೆ ಸಂಬಂಧಿಸಿ ಸಮಗ್ರ ಮಾಹಿತಿ ಸಂಗ್ರಹಿಸಿ, ಈ ಯೋಜನೆಯಿಂದ ಆಗುವ ಪರಿಸರ ಹಾನಿಯ ಕುರಿತು ಪರಿಸರವಾದಿಗಳೊಂದಿಗೆ ಚರ್ಚೆ ನಡೆಸಿತು. ಕೊಲ್ಲಿ ಬಚ್ಚಲು ಕಣಿವೆ ರಕ್ಷಣೆಗೆಂದೇ ಕೊಲ್ಲಿ ಬಚ್ಚಲು ಕಣಿವೆ ಸಂರಕ್ಷಣಾ ಸಮಿತಿಯಾಂದು ಕೆಲಸ ಮಾಡುತ್ತಿದ್ದು, ಸಮಿತಿಯ ಅಧ್ಯಕ್ಷ ಚಂದ್ರಪ್ಪ, ಈ ಯೋಜನೆಯಿಂದಾಗಿ ಸೂಕ್ಷ್ಮ ಪರಿಸರ ಹೇಗೆ ಕರಗಲಿದೆ ಎಂದು ಅಧಿಕಾರಿಗಳಿಗೆ ವಿವರಿಸಿದರು.

ಶಿವಮೊಗ್ಗಾ ಜಿಲ್ಲೆಯ ದಟ್ಟ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ಶುಂಠಿ ಕೃಷಿಯಿಂದಾಗಿ ನಡೆಯುತ್ತಿರುವ ಅರಣ್ಯ ಹಾನಿಯ ಬಗ್ಗೆ ಪರಿಸರವಾದಿಗಳು ಅರಣ್ಯಾಧಿಕಾರಿಗಳ ತಂಡಕ್ಕೆ ವಿವರಿಸಿದರು. ಈ ಭೇಟಿಯ ಸಂದರ್ಭದಲ್ಲಿ , ಸಾಗರ, ಹೊಸನಗರ, ಶಿವಮೊಗ್ಗ ತಾಲ್ಲೂಕು ಅರಣ್ಯ ಪ್ರದೇಶಗಳಲ್ಲಿ ಅರಣ್ಯಾಧಿಕಾರಿಗಳ ತಂಡ ನಡೆಸಿದ ಅಧ್ಯಯನವನ್ನು ಕೇಂದ್ರ ಪರಿಸರ ಸಚಿವಾಲಯಕ್ಕೆ ನೀಡಲಾಗುವುದು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+