ಚಲನಚಿತ್ರ ಮಂಡಳಿಯೆದುರು ಜನಸಾಗರ, ರಾಜ್ಗೆ ಜಯಕಾರ
ಬೆಂಗಳೂರು : ರಾಜ್ಯದ ರಾಜಧಾನಿ ಬೆಂಗಳೂರೂ ಸೇರಿದಂತೆ, ನಾಡಿನ ಮೂಲೆ ಮೂಲೆಗಳಲ್ಲೂ ರಾಜ್ ಅಭಿಮಾನಿಗಳು, ರಾಜ್ಕುಮಾರ್ ಭಾವಚಿತ್ರಗಳನ್ನು ಹಿಡಿದು, ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ಸಿಹಿ ಹಂಚಿ ಜಯಕಾರ ಹಾಕುತ್ತಾ ವಿಜಯೋತ್ಸವ ಆಚರಿಸುತ್ತಿದ್ದಾರೆ.
ಡಾ. ರಾಜ್ಕುಮಾರ್ ಅವರ ಸದಾಶಿವ ನಗರ ಮನೆಯೆದರು, ಸಾ.ರಾ. ಗೋವಿಂದು ಅವರ ನೇತೃತ್ವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ಪಟಾಕಿ ಸಿಡಿಸಿ, ನೃತ್ಯ ಮಾಡಿ, ಸಿಹಿ ಹಂಚಿ, ಜಯಕಾರ ಮಾಡುತ್ತಾ ಸಂತಸವನ್ನು ಹಂಚಿಕೊಂಡರು. ರಾಜ್ ಬಿಡುಗಡೆಯ ಸುದ್ದಿ ಪ್ರಕಟವಾಗುತ್ತಿದ್ದಂತೆಯೇ ನಗರದ ಕೆಲವು ಶಾಲೆಗಳಿಗೆ ರಜೆ ಘೋಷಿಸಲಾಯಿತು.
ಬೆಂಗಳೂರಿನಲ್ಲಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಎದುರು ಬುಧವಾರ ಮಧ್ಯಾಹ್ನ ಜನಸಾಗರ. ಎಲ್ಲರ ಕೈಯಲ್ಲೂ ಡಾ. ರಾಜ್ಕುಮಾರ್ ಅವರ ವರ್ಣ ಚಿತ್ರಗಳು, ಎಲ್ಲರ ಬಾಯಲ್ಲೂ ಅಣ್ಣಾವ್ರಿಗೆ ಜೈ, ರಾಜ್ಕುಮಾರ್ಗೆ ಜೈ ಎಂಬ ಘೋಷಣೆ. ನಾಡಿನಲ್ಲಿ ಎಲ್ಲಿಲ್ಲದ ಸಂಭ್ರಮ. ಕಳೆದ 109 ದಿನಗಳಿಂದಲೂ ಮಂಕಾಗಿದ್ದ ಕರ್ನಾಟಕದಲ್ಲಿ ಒಮ್ಮೆಲೆ ವಿದ್ಯುತ್ ಸಂಚಾರವಾಗಿದೆ.
ಕಳೆಗುಂದಿದ್ದ ಹಬ್ಬಗಳೆಲ್ಲವೂ ಒಮ್ಮಿಂದೊಮ್ಮೆಲೆ ಸಂಭ್ರಮ ಸಡಗರದಿಂದ ಕಂಗೊಳಿಸಿದವು. ವಾಣಿಜ್ಯ ಮಂಡಳಿ ಎದುರು, ತಂಡೋಪತಂಡವಾಗಿ ಬಂದು ಸೇರಿದ ರಾಜ್ ಅಭಿಮಾನಿಗಳು, ಚಿತ್ರನಟಿ ಜಯಂತಿ, ರಾಜ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು, ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ.ಸಿ.ಎನ್. ಚಂದ್ರಶೇಖರ್ ಅವರಿಗೆ ಮಾಲಾರ್ಪಣೆ ಮಾಡಿ, ಸಿಹಿ ಹಂಚಿ ಸಂಭ್ರಮ ವ್ಯಕ್ತಪಡಿಸಿದರು.
ಜಯಂತಿ ಪ್ರತಿಕ್ರಿಯೆ : ಕನ್ನಡ ನಾಡಿನ ಎಲ್ಲ ಜನರ ಹರಕೆ, ಪೂಜೆ ಪುನಸ್ಕಾರಗಳು ಫಲ ನೀಡಿವೆ. ರಾಜ್ ಬಿಡುಗಡೆ ಆಗಿದೆ. ಇಂದು ಅವರು ನಮ್ಮೊಂದಿಗಿದ್ದಾರೆ. ರಾಜ್ಕುಮಾರ್ ಅವರನ್ನು ಬಿಡುಗಡೆ ಗೊಳಿಸಲು ಶ್ರಮಿಸಿದ ಕರ್ನಾಟಕ ಸರಕಾರ, ತಮಿಳುನಾಡು ಸರಕಾರ, ಸಂಧಾನಕಾರರಿಗೆಲ್ಲಾ ನಾವು ಧನ್ಯವಾದ ಅರ್ಪಿಸಬೇಕು ಎಂದ ಅವರು, ಇಡೀ ಕನ್ನಡ ಚಲನ ಚಿತ್ರೋದ್ಯಮವೇ ನಾಡಿನ ಜನತೆಗೆ ಚಿರಋಣಿಯಾಗಿದೆ ಎಂದರು.
ಇಂದೇ ನಮಗೆ ದೀಪಾವಳಿ : ರಾಜ್ಕುಮಾರ್ ಬಿಡುಗಡೆ ಆದ ಈ ದಿನವೇ ನಮಗೆ ದೀಪಾವಳಿ ಎಂದ ಜಯಂತಿ. ಇಷ್ಟು ದಿನಗಳ ಕಾಲ ಶಾಂತಿ, ತಾಳ್ಮೆಯನ್ನು ಕಾಪಾಡಿಕೊಂಡ ಬಂದ ನಾಡಿನ ಜನತೆ ಮುಂದೆಯೂ ಶಾಂತಿ ಕಾಪಾಡುವಂತೆ ಮನವಿ ಮಾಡಿದರು. ಇಂದೇ ರಾಜ್ಯೋತ್ಸವ ಆಚರಿಸುವ ಸುದಿನ ಎಂದು ಅವರು ಹೇಳಿದರು.
ನೇಪಥ್ಯಕ್ಕೆ ಸರಿದ ನಾಗೇಶ್ ಕುಟುಂಬದ ಸಂಭ್ರಮ : ನಾಡಿನ ಜನತೆ ರಾಜ್ ಬಿಡುಗಡೆಯ ಸಂಭ್ರಮ ಪಡುತ್ತಿರುವಾಗ, ರಾಜ್ ಅವರೊಂದಿಗೆ 109 ದಿನ ಒತ್ತೆಯಲ್ಲಿದ್ದ ನಾಗೇಶ್ ಬಿಡುಗಡೆಯ ಸಂಭ್ರಮ ನೇಪಥ್ಯಕ್ಕೆ ಸರಿದಿದೆ. ನಾಗೇಶ್ ಕುಟುಂಬದವ ಸಂಭ್ರಮದ ಸುದ್ದಿಗಳು ಈವರೆಗೆ ಲಭ್ಯವಾಗಿಲ್ಲ.
ವಾರ್ತಾ ಸಂಚಯ
ಮುಖಪುಟ / ರಾಜ್ ಅಪಹರಣ
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications