ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಖಾಸಗೀಕರಣಕ್ಕೆ ವಿರೋಧ: ನ. 15ರಂದು ಬ್ಯಾಂಕ್ನೌಕರರ ಮುಷ್ಕರ
ನವದೆಹಲಿ : ಸಾರ್ವಜನಿಕ ವಲಯದ ಬ್ಯಾಂಕ್ಗಳನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರಕಾರದ ಪ್ರಯತ್ನವನ್ನು ವಿರೋಧಿಸಿ, ನವೆಂಬರ್ 15ರಂದು ದೇಶಾದ್ಯಂತ ಒಂದು ದಿನದ ಮುಷ್ಕರ ನಡೆಸಲು ಬ್ಯಾಂಕ್ನೌಕರರು ನಿರ್ಧರಿಸಿದ್ದಾರೆ.
ಬ್ಯಾಂಕ್ ನೌಕರರ 9 ಕಾರ್ಮಿಕ ಸಂಘಟನೆಗಳನ್ನೊಳಗೊಂಡ ಸಂಯುಕ್ತ ವೇದಿಕೆ ಮುಷ್ಕರ ನಡೆಸುವ ನಿರ್ಧಾರ ಕೈಗೊಂಡಿದೆ. ಈ ಸಾಂಕೇತಿಕ ಮುಷ್ಕರಕ್ಕೆ ಕೇಂದ್ರ ಸರಕಾರ ಬೆಲೆ ನೀಡದಿದ್ದಲ್ಲಿ ಮುಂದಿನ ಕ್ರಮಗಳೇನು ಎಂಬುದನ್ನು ನ. 15ರಂದು ನಿರ್ಧರಿಸಲಾಗುವುದು ಎಂದೂ ರಾಷ್ಟ್ರೀಕೃತ ಬ್ಯಾಂಕ್ ನೌಕರರ ಒಕ್ಕೂಟದ ಜಂಟಿ ಕಾರ್ಯದರ್ಶಿ ವಿ.ಕೆ. ಗುಪ್ತ ತಿಳಿಸಿದ್ದಾರೆ. ಅನಿರ್ದಿಷ್ಟ ಕಾಲಾವಧಿ ಮುಷ್ಕರಕ್ಕೂ ತಾವು ಹಿಂಜರಿಯುವುದಿಲ್ಲ ಎಂದು ಹೇಳುವ ಮೂಲಕ ಸರ್ಕಾರಕ್ಕೆ ಅವರು ಎಚ್ಚರಿಕೆಯನ್ನೂ ನೀಡಿದ್ದಾರೆ.
Comments
Story first published: Tuesday, October 31, 2000, 5:30 [IST]