ಈ ಹೊತ್ತು ವಿಶ್ವ ಪ್ರವಾಸ ದಿನ ನಿಮ್ಮ ಪ್ರಯಾಣ ಸುಖಕರವಾಗಿರಲಿ
ವಿಶ್ವವೆಲ್ಲ ಸೆಪ್ಟೆಂಬರ್ 27ನ್ನು ಪ್ರವಾಸ ದಿನ ಎಂದು ಆಚರಿಸುತ್ತದೆ. ಕರ್ನಾಟಕವೂ ಸಂಭ್ರಮದಿಂದ ಈ ದಿನವನ್ನು ಆರಿಸುತ್ತಿತ್ತು. ಸಾಮಾನ್ಯವಾಗಿ ವಿಶ್ವ ಪ್ರವಾಸ ದಿನದ ಹಿಂದೆ ಮುಂದೆಯೇ ಮೈಸೂರು ದಸರ. ದೇಶ ವಿದೇಶಗಳಿಂದ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದರು. ಒಂದರ್ಥದಲ್ಲಿ ವಿಶ್ವವನ್ನೇ ಈ ಸಂದರ್ಭದಲ್ಲಿ ಮೈಸೂರು ತನ್ನತ್ತ ಸೆಳೆಯುತ್ತಿತ್ತು. ರಾಜ್ಯದಲ್ಲಿ ವಿಶ್ವ ಪ್ರವಾಸ ದಿನಕ್ಕೆ ವಿಶೇಷ ಅರ್ಥ ಬರುತ್ತಿತ್ತು.
ಸಂಭ್ರಮಕ್ಕೆ ಅಡ್ಡಿಯಾದ ವೀರಪ್ಪ : ಆದರೆ, ಈ ಬಾರಿ ವಿಶ್ವ ಪರಿಸರ ದಿನದ ಮಾರನೆ ದಿನವೇ ವಿಶ್ವ ವಿಖ್ಯಾತ ದಸರೆ ಆರಂಭವಾಗುವ ಹಿನ್ನೆಲೆಯಲ್ಲಿ ಸಾವಿರಾರು ವಿದೇಶೀ ಪ್ರವಾಸಿಗರು, ನಗರಕ್ಕೆ ಬರುತ್ತಾರೆ. ಪ್ರವಾಸೋದ್ಯಮದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ಲಾಭ ಆಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ರಾಜ್ ಅಪಹರಣದ ಕರಿನೆರಳು ವಿಶ್ವ ಪ್ರವಾಸದ ದಿನದ ಮೇಲೆ ಚಾಚಿಕೊಂಡಿದೆ.
28ರಂದೇ ಕರ್ನಾಟಕ ಬಂದ್ಗೂ ಕರೆ ನೀಡಿರುವ ಕಾರಣ ವಿಶ್ವದ ಪ್ರವಾಸಿಗರು, ರಾಜ್ಯಕ್ಕೆ ಬರಲೂ ಹಿಂದೇಟು ಹಾಕುತ್ತಿದ್ದಾರೆ. ಭಾರತದ ಇನ್ನಿತರ ಪ್ರವಾಸ ಧಾಮಗಳಲ್ಲಿ ಸಂಭ್ರಮ, ಸಡಗರ ಕಂಡು ಬಂದಿದೆ. ವಿದೇಶೀ ಪ್ರವಾಸಿಗರನ್ನು ಕೈಬೀಸಿ ಕರೆಯುವ ಸಂಭ್ರಮ - ಸಡಗರ ಈ ವರ್ಷ ಕರ್ನಾಟಕದ ಪಾಲಿಗೆ ಇಲ್ಲವಾಗಿದೆ. ರಮ್ಯವಾದ ಕೆ.ಆರ್.ಎಸ್.ನಲ್ಲಿ ಬಿಗಿ ಪೊಲೀಸ್ ಕಾವಲು ಹಾಕಲಾಗಿದೆ.