‘ಸರ್ಕಾರದ ಮನವಿಗೆ ನಾವು ಜಗ್ಗೋದಿಲ್ಲ, 28ಕ್ಕೆ ಬಂದ್ ಗ್ಯಾರಂಟಿ’
ಬೆಂಗ-ಳೂ-ರು : ಸೆ-ಪ್ಟಂ-ಬ-ರ್ 28 ರ ಬಂದ್ ಕೈ ಬಿಡು-ವಂ-ತೆ ರಾಜ್ಯ ಸರ್ಕಾ-ರ ಮಾಡಿ-ದ್ದ ಮನವಿ-ಯ-ನ್ನು -ತಿ-ರ-ಸ್ಕ-ರಿ-ಸಿ-ರು-ವ ಕನ್ನ-ಡ ಚಲ-ನ-ಚಿ-ತ್ರ ಉದ್ಯ-ಮ ಗುರು-ವಾ-ರ-ದಂ-ದು 12 ಗಂಟೆ-ಗ-ಳ ಬಂದ್ ನಡೆ-ಯು-ವು-ದು ಖಚಿ-ತ ಎಂದು ಘೋಷಿ-ಸಿ-ದೆ.
ಬಂದ್-ನಿಂ-ದ ಹಿಂದೆ ಸರಿ-ಯು-ವ ಮಾತೇ ಇಲ್ಲ . ರಾಜ್ಕುಮಾ-ರ್ ಅವ-ರ ಶೀಘ್ರ ಬಿಡು-ಗ-ಡೆ-ಗೆ ಸೂಕ್ತ ಕ್ರಮ-ಗ-ಳ-ನ್ನು ಕೈಗೊ-ಳ್ಳು-ವಂ-ತೆ ಕೇಂದ್ರ ಸರ್ಕಾ-ರವನ್ನು ಒತ್ತಾ-ಯಿ-ಸು-ವು-ದು ಬಂದ್-ನ ಉದ್ದೇ-ಶ-ವಾಗಿ-ದೆ ಎಂದು ಸೋಮ-ವಾ-ರ ಸಂಜೆ ಸುದ್ದಿ-ಗೋ-ಷ್ಠಿ-ಯ-ಲ್ಲಿ ಮಾತ-ನಾ-ಡಿ-ದ ಚಲ-ನ-ಚಿ-ತ್ರ ವಾಣಿ-ಜ್ಯ ಮಂಡ-ಳಿ-ಯ ಅಧ್ಯ-ಕ್ಷ ಕೆ.ಸಿ.ಎನ್. ಚಂದ್ರ-ಶೇ-ಖ-ರ್ ಹೇಳಿ-ದರು. ಬಂ-ದ್-ಗೆ ವಿವಿ-ಧ ಸಂಘ-ಟ-ನೆ-ಗ-ಳು ಹಾಗೂ ರಾಜ-ಕೀ-ಯ ಪಕ್ಷ-ಗ-ಳು ಬೆಂಬ-ಲ ವ್ಯಕ್ತ-ಪ-ಡಿ-ಸಿ-ವೆ ಎಂದ-ರು.
-ಶಾಂ-ತಿ-ಯು-ತ-ವಾ-ಗಿ ಬಂದ್ ಆಚ-ರಿ-ಸು-ವಂ-ತೆ ಸಾ-ರ್ವ-ಜ-ನಿ-ಕ-ರಿ-ಗೆ ಮನ-ವಿ ಮಾಡಿ-ದ ಅವ-ರು, --ಗು-ರು-ವಾ-ರ-ದಂ-ದೇ ದಸರೆ ಉದ್ಘಾ-ಟ-ನೆ-ಗೆ ಸಜ್ಜಾ-ಗಿ-ರು-ವ ಮೈ-ಸೂರು ನಗ-ರ, ಅಗ-ತ್ಯ ನಾಗ-ರಿ-ಕ ಸೇವೆ-ಗ-ಳು ಹಾಗೂ ಸುದ್ದಿ ಸಂಸ್ಥೆ-ಗ-ಳು ಬಂದ್-ನಿಂ-ದ ಹೊರ-ತಾ-ಗಿ-ರು-ತ್ತ-ವೆ ಎಂದ-ರು.
ಹೀರೋಗಳೇ ಗಡ್ಡ ಬೋಳಿಸದಿದ್ದರೆ ಶೂಟಿಂಗ್ ಹೇಗೆ ಶುರುವಾಗುತ್ತೆ?
ಸೋಮವಾರದಿಂದ ಚಲನಚಿತ್ರ ಚಟುವಟಿಕೆಗಳು ಪುನರಾರಂಭವಾಗುತ್ತವೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹೇಳಿದ್ದರೂ, ಚಿತ್ರೋದ್ಯಮ ಬಂದ್ಗೆ ತೆರೆ ಬಿದ್ದಿಲ್ಲ. ಗಡ್ಡ ಬಿಟ್ಟಿರುವ ನಾಯಕರೇ ಇದಕ್ಕೆ ಅಡ್ಡಿಯಾಗಿದ್ದಾರಂತೆ.
ರಾಜ್ಕುಮಾರ್ ಅಪಹರಣವಾದಾಗಿನಿಂದ ಗಡ್ಡ ಬೋಳಿಸದ ಚಿತ್ರ ದಿಗ್ಗಜಗಳು ಅನೇಕ. ಅಂಬರೀಶ್, ವಿಷ್ಣುವರ್ಧನ್, ರವಿಚಂದ್ರನ್... ಪಟ್ಟಿ ಶುರುವಾಗೋದೇ ಹೀಗೆ. ಇನ್ನು ಬ್ಯುಸಿ ಆಗಿದ್ದ ಹೀರೋ ಶಿವರಾಜ್ ಅಪ್ಪ ಬರೋತನಕ ಸಿನಿಮಾದಲ್ಲಿ ನಟಿಸೋಕಾಗುತ್ತದೆಯೇ ? ಜೊತೆಗೆ ಇದ್ದಕ್ಕಿದ್ದಂತೆ ಶೂಟಿಂಗ್ ನಿಂತುಹೋಗಿ, ಕೈ ಸುಟ್ಟುಕೊಂಡವರು ಕಳಕೊಂಡದ್ದನ್ನು ಲೆಕ್ಕ ಹಾಕುತ್ತಲೇ ಇದ್ದಾರೆ. ಮತ್ತೆ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿಲ್ಲ. ಹೀಗಾಗಿ ಯಾವುದೇ ಚಿತ್ರೋದ್ಯಮ ಚಟುವಟಿಕೆ ಶುರುವಾಗಿಲ್ಲ.
ಕೆಲಸ ಮಾಡೋದು ಬಿಡೋದು ನಿರ್ಮಾಪಕರಿಗೆ ಬಿಟ್ಟಿದ್ದು ಎನ್ನುತ್ತಾರೆ ಮಂಡಲಿ ಅಧ್ಯಕ್ಷ ಕೆ.ಸಿ.ಎನ್.ಚಂದ್ರು. ಈ ನಡುವೆ ಟಿವಿ ಧಾರಾವಾಹಿ ಕೆಲಸಗಳು ಪ್ರಾರಂಭವಾಗಿವೆ. ಇನ್ನು ಅಂಬಿಕಾ, ಸಂಕ್ರಾಂತಿ.... ಮುಂದುವರೆದ ಭಾಗಗಳನ್ನು ನಿರೀಕ್ಷಿಸಬಹುದು.
(ಯುಎನ್ಐ/ಇನ್ಫೋ ವಾರ್ತೆ)