ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗುಲ್ಬರ್ಗಾದಲ್ಲಿ ಹೈಕೋರ್ಟ್ಪೀಠ ಸ್ಥಾಪಿಸಲು ಮನವಿ
ಗುಲ್ಬರ್ಗಾ : ರಾಜ್ ಅಪಹರಣದ ಹಿನ್ನೆಲೆಯಲ್ಲಿ ತಣ್ಣಗಾಗಿದ್ದ ಹೈಕೋರ್ಟ್ ಪೀಠದ ವಿಷಯ ಮತ್ತೆ ಸುದ್ದಿಯಾಗಿದೆ. ಹಿಂದುಳಿದಿರುವ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಅದರಲ್ಲೂ ಗುಲ್ಬರ್ಗಾದಲ್ಲೇ ಪೀಠ ಸ್ಥಾಪಿಸುವಂತೆ ರಾಜ್ಯ ವಿಧಾನ ಪರಿಷತ್ನ ಮಾಜಿ ಸಭಾಪತಿ ಡಿ.ಬಿ. ಕಲ್ಮಣ್ಕರ್ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರನ್ನು ಕೋರಿದ್ದಾರೆ.
ಸರ್ವೋನ್ನತ ನ್ಯಾಯಾಲಯ ಉತ್ತರ ಕರ್ನಾಟಕ ಭಾಗದಲ್ಲಿ ಹೈಕೋರ್ಟ್ ಪೀಠ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳಾದ ತಾವು ಮಧ್ಯ ಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ನಾರಾಯಣನ್ ಅವರನ್ನು ಕಲ್ಮಣ್ಕರ್ ಪ್ರಾರ್ಥಿಸಿದ್ದಾರೆ.
ರಾಷ್ಟ್ರಪತಿಗಳಿಗೆ ಈ ಸಂಬಂಧ ಮನವಿ ಪತ್ರ ಕಳುಹಿಸಿರುವುದಾಗಿ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
Comments
Story first published: Friday, September 15, 2000, 5:30 [IST]