ಬಿ.ಸಿ. ರೋಡಿನ ಟ್ರಾಫಿಕ್ ಜ್ಯಾಮ್ ಸಮಸ್ಯೆ
-ಮಂ-ಗ-ಳೂ-ರು : ಬೆಂಗಳೂರಿನಿಂದ ನಿಮ್ಮನ್ನು ಮಂಗಳೂರಿಗೆ ಹೊತ್ತೊಯ್ಯುವ ಎಲ್ಲಾ ಬಸ್ಗಳು ಬಿ.ಸಿ. ರೋಡು ಹತ್ತಿರಾಗುತ್ತಿರುವಂತೆ ಗಕ್ಕನೆ ನಿಂತು ಬಿಡುತ್ತವೆ. ಅಲ್ಲಿಯವರೆಗೆ ಟ್ರಾಫಿಕ್ ಜ್ಯಾಮ್ನ ತೊಂದರೆ ಇಲ್ಲದೆ ಓಡಿದ ನಿಮ್ಮ ಬಸ್ಸಿಗೇನಾಯಿತು ಎಂದು ಗಮನಿಸಿದರೆ ವಾಹನಗಳ ದೊಡ್ಡ ಕ್ಯೂ ಕಾಣುತ್ತದೆ. ಬಿ.ಸಿ. ರೋಡಿನಲ್ಲಿರುವ ನೇತ್ರಾವತಿ ಸೇತುವೆಯಲ್ಲಿ ಏಕ ಕಾಲಕ್ಕೆ ವಾಹನಗಳು ಎರಡೂ ಕಡೆಯಿಂದಲೂ ಪ್ರವೇಶಿಸಲಾರವು. ಸೇತುವೆಯ ಆ ತುದಿಯಿಂದ ವಾಹನಗಳು ಬರುತ್ತಿರಬೇಕಾದರೆ ಈ ಕಡೆಯಲ್ಲಿ ವಾಹಗಳು ಕೆಂಪು ದೀಪ ಉರಿಸಿಕೊಂಡು ನಿಂತಿರಬೇಕು. ಈ ಸಮಸ್ಯೆ ನಿವಾರಿಸಲು ಪಕ್ಕದಲ್ಲಿಯೇ ಹೊಸ ಸೇತುವೆ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಡಿಸೆಂಬರ್ ಹೊತ್ತಿಗೆ ವಾಹನಗಳು ಹೊಸ ಸೇತುವೆಯ ಮೇಲೆ ಓಡಬಹುದೆಂದು ನಿರ್ಮಾಣದ ಹೊಣೆ ಹೊತ್ತವರು ಹೇಳುತ್ತಾರೆ.
ಮಂಗಳೂರು- ಬೆಂಗಳೂರು ಬಸ್ಗಳು ಓಡಾಡುವ ರಾಷ್ಟ್ರೀಯ ಹೆದ್ದಾರಿ 48ರ ಮೇಲೆ ಈ ಸೇತುವೆಯನ್ನು ಕಟ್ಟಲಾಗಿದೆ. ಕುಮಾರಧಾರ ನದಿಗೆ ಕಟ್ಟಲಾಗಿರುವ ಸೇತುವೆ ಅತೀ ದೊಡ್ಡದೆಂಬ ಹೆಗ್ಗಳಿಕೆ ಪಡೆದರೆ, ಎರಡನೆಯ ಸ್ಥಾನ ಈ ಹೊಸ ಸೇತುವೆಗೆ ಸಲ್ಲುತ್ತದೆ. ಹೊಸ ಸೇತುವೆಯ ನಿರ್ಮಾಣ ಕಾಮಗಾರಿ 1996ರಲ್ಲಿಯೇ ಆರಂಭವಾಗಿತ್ತು . ಕುಮಾರಧಾರ ನದಿಗೆ ದಕ್ಷಿಣ ಕನ್ನಡದ ಉಪ್ಪಿನಂಗಡಿಯಲ್ಲಿ ಕಟ್ಟಿರುವ ಸೇತುವೆ ನಿರ್ಮಾಣಕ್ಕೆ 14 ವರ್ಷಗಳು ಸವೆದಿದ್ದರೆ, ಈ ಸೇತುವೆಗೆ ಕೆಲಸಗಾರರು ನಾಲ್ಕು ವರ್ಷಗಳಿಂದ ಮಣ್ಣು ಹೊರುತ್ತಿದ್ದಾರೆ. 1986ರಲ್ಲಿ ಸೇತುವೆ ನಿರ್ಮಾಣಕ್ಕೆ ಅನುಮತಿ ನೀಡಿದಾಗ ಇದು 7 ಮಿಲಿಯನ್ ರೂಪಾಯಿಗಳ ಯೋಜನೆಯಾಗಿತ್ತು. ಆದರೆ ಸೇತುವೆ ನಿರ್ಮಾಣ ಕಾರ್ಯ ಮುಗಿಯುವ ಹೊತ್ತಿಗೆ 20. 6 ಮಿಲಿಯನ್ ರೂಪಾಯಿಗಳು ಖರ್ಚಾಗಿವೆ ಎಂದು ರಾಷ್ಟ್ರೀಯ ಹೆದ್ದಾರಿ ಮೂಲಗಳು ತಿಳಿಸುತ್ತವೆ.
ಈಗಿರುವ ಸೇತುವೆ, ಎಂಆರ್ಎಲ್, ಕೆಐಓಸಿಎಲ್, ಮಂಗಳೂರು ಬಂದರಿನಿಂದ ಭಾರಿ ಲಗ್ಗೇಜ್ಗಳನ್ನು ಹೊತ್ತು ಕೊಂಡು ಬರುವ ವಾಹನಗಳ ಭಾರವನ್ನು ತಡೆದುಕೊಳ್ಳುವ ಸ್ಥಿತಿಯಲ್ಲಿಲ್ಲ . ಅಲ್ಲದೆ, 30 ಟನ್ಗಳಿಗೂ ಅಧಿಕ ಭಾರದ ಎಲ್ಪಿಜಿ ಗ್ಯಾಸ್, ಗ್ರಾನೈಟ್ ಶಿಲೆಗಳನ್ನು, ಮರದ ದಿಮ್ಮಿಗಳನ್ನು ಹೊತ್ತು ಸಾಗುವ ವಾಹನಗಳು ರಸ್ತೆಯಲ್ಲಿ ಚಲಿಸುವುದು ಸಾಧ್ಯವಾಗುತ್ತಿಲ್ಲ. ತಜ್ಞರ ಪ್ರಕಾರ 50 ಟನ್ಗಳಿಗಿಂತ ಹೆಚ್ಚು ಭಾರ ಹೊತ್ತ ವಾಹನಗಳು ಚಲಿಸಿದಲ್ಲಿ ಸೇತುವೆ ಕುಸಿದುಬಿಡುತ್ತದೆ. ಕೈಗಾರಿಕೆ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಕರಾವಳಿಯ ಪ್ರವೇಶಕ್ಕೆ ಉತ್ತಮವಾದ, ದ್ವಿಮುಖ ಸಂಚಾರಕ್ಕೆ ಅನುಕೂಲವಿರುವ ಸೇತುವೆಯ ಅಗತ್ಯವಿದೆ. ನಿರ್ಮಾಣವಾಗುತ್ತಿರುವ ಹೊಸ ಸೇತುವೆ ಈ ಎಲ್ಲಾ ಅಗತ್ಯಗಳನ್ನು ಪೂರೈಸಲಿದೆ. ವಿದ್ಯುತ್, ಪೆಟ್ರೋಲ್ ಉತ್ಪನ್ನಗಳಿಗೆ ಸಂಬಂಧಿಸಿದ ಕಾರ್ಖಾನೆಗಳು ಮಂಗಳೂರು ಸಮುದ್ರಕ್ಕೆ ತಾಕಿಕೊಂಡಿರುವುದರಿಂದ ಮಂಗಳೂರಿಗೆ ರಸ್ತೆ ವ್ಯವಸ್ಥೆಯ ಅಗತ್ಯವಿದೆ. ಮಂಗಳೂರಿನ ಆರ್ಥಿಕ ಚಟುವಟಿಕೆಗಳಿಗೆ ವೇಗವರ್ಧಕವಾಗಿ ಎದ್ದು ನಿಲ್ಲುವ ನೇತ್ರಾವತಿ ಸೇತುವೆ ಮಂಗಳೂರು ಉದ್ಯಮ ಕ್ಷೇತ್ರದ ಅಡಿಪಾಯದಲ್ಲಿರುವ ಕಲ್ಲು ಎಂದರೆ ತಪ್ಪಲ್ಲ .
-
ಏರ್ ಕೂಲರ್ vs ಏರ್ ಕಂಡಿಷನರ್: ಬೇಸಿಗೆಯಲ್ಲಿ ನಿಮ್ಮ ಸರಿಯಾದ ಆಯ್ಕೆ ಯಾವುದು? -
Language Row: ಉತ್ತರ ಭಾರತದಲ್ಲಿ ಯಾಕೆ ತಮಿಳು - ಕನ್ನಡ ಇಲ್ಲ ಎಂದ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟ: 23 ಚಿನ್ನದ ಪದಕ ಗೆದ್ದು ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿದ ಕರ್ನಾಟಕ -
ನಿಮ್ಮ ಮನೆಯ ಸೀಲಿಂಗ್ ಫ್ಯಾನ್ನಲ್ಲಿ ಧೂಳು ತುಂಬಿದೆಯೇ? ನಿಮಿಷಗಳಲ್ಲಿ ಸ್ವಚ್ಛಗೊಳಿಸಲು ಇಲ್ಲಿವೆ 'ಸೀಕ್ರೆಟ್' ಟಿಪ್ಸ್ -
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO -
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
ಇಂಧನ ಪೂರೈಕೆ ಕೊರತೆ ಭೀತಿ: 2026ರಲ್ಲಿ ನೀವು ಖರೀದಿಸಬಹುದಾದ ಟಾಪ್ ಎಲೆಕ್ಟ್ರಿಕ್ ಸ್ಕೂಟರ್ ಗಳು ಇಲ್ಲಿವೆ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ












Click it and Unblock the Notifications