ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮೂಲಭೂತ ಸೌಕರ್ಯ ಅಭಿವೃದ್ಧಿ ಖಾತೆ ಕಳೆದುಕೊಂಡ ದೇಶಪಾಂಡೆ
ಬೆಂಗಳೂರು : ಶುಕ್ರ-ವಾ-ರ ಅನಿ-ರೀ-ಕ್ಷಿ-ತ-ವಾ-ಗಿ ನಡೆ-ದ ಸಣ್ಣ ಪ್ರಮಾ-ಣ-ದ ಮಂತ್ರಿ-ಮಂ-ಡ-ಲ ಖಾತೆ ಬದ-ಲಾ-ವ-ಣೆ-ಯ-ಲ್ಲಿ , ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಆರ್. ವಿ. ದೇಶಪಾಂಡೆ ಬಳಿಯಿದ್ದ ಮೂಲಭೂತ ಅಭಿವೃದ್ಧಿ ಖಾತೆಯನ್ನು ಟಿ. ಜಾನ್ ಅವರಿಗೆ ಹಸ್ತಾಂತರಿಸಲಾಗಿದ್ದು, ಈ ಖಾತೆಯನ್ನು ಜಾನ್ ಸ್ವತಂತ್ರವಾಗಿ ನಿರ್ವಹಿಸಲಿದ್ದಾರೆ.
ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಶುಕ್ರವಾರ ಈ ಬದಲಾವಣೆಯನ್ನು ಪ್ರಕಟಿಸಿದ್ದು , ಈ ಬದಲಾವಣೆಗೆ ಕಾರಣವೇನೆಂಬುದು ತಿಳಿದುಬಂದಿಲ್ಲ. ಖಾತೆ ಬದಲಾವಣೆಯ ವಿಚಾರದ ಬಗ್ಗೆ ದೇಶಪಾಂಡೆಗೂ ತಿಳಿದಿಲ್ಲ ಎನ್ನ-ಲಾ-ಗಿ-ದೆ. ರಾಜಭವನದಿಂದ -ಶು-ಕ್ರ-ವಾ-ರ ಅಧಿಕೃತ ಪ್ರಕಟಣೆ ಹೊರಬಿದ್ದ ನಂತರವಷ್ಟೇ ಖಾತೆ ಬದಲಾವಣೆಯ ವಿಷಯ ಅವರ ಗಮನಕ್ಕೆ ಬಂದಿರುವುದಾಗಿ ವರದಿಯಾಗಿದೆ. ಇತ್ತೀಚೆಗಷ್ಟೇ ಆರ್. ವಿ. ದೇಶಪಾಂಡೆ ವಿಶ್ವಬಂಡವಾಳ ಹೂಡಿಕೆದಾರರ ಸಮಾವೇಶದ ಮೂಲಕ ಕೈಗಾರಿಕಾ ವಲಯಕ್ಕೊಂದು ಹೊಸ ತಿರುವು ನೀಡಿದ್ದರು. ಈ ನಡುವೆ ಈಗ ನಡೆದಿರುವ ಬದಲಾವಣೆಗೆ ಕಾರಣ ತಿಳಿದಿಲ್ಲ.
Comments
English summary
Deshpande looses ministry