ತೇಜಸ್ವಿನಿ ಹೆಗಡೆ ಸಣ್ಣಕಥೆ : ಜೀವತಂತು (ಭಾಗ 3)
(ಕಥೆ ಮುಂದುವರಿದಿದೆ...)
'ಮಾನಸ, ಶುಭಾಳ ಮಗುವಿಗೆ ಸೀರಿಯಸ್... ಅವ್ಳ ಸ್ಥಿತೀನೂ ಚೆನ್ನಾಗಿಲ್ಲ. ತುಂಬಾ ಅಪ್ಸೆಟ್ ಆಗಿದ್ದಾಳೆ. ನಿನ್ನ ನೋಡ್ಬೇಕು ಅಂತಿದ್ದಾಳೆ. ಪ್ಲೀಸ್ ಕೂಡ್ಲೇ ಹೊರ್ಟು ಬಾ..." ಎಂದಷ್ಟೇ ಹೇಳಿ ಫೋನ್ ಕಟ್ ಮಾಡಿದ ಸುಮತಿ ಮೇಡಮ್ ಧ್ವನಿಯೊಳಗಿದ್ದ ಆತಂಕ ಅವಳನ್ನು ಅಲುಗಾಡಿಸಿಬಿಟ್ಟಿತು. ಒಂದೇ ಉಸಿರಿಗೆ ಒಳಗೋಡಿದವಳನ್ನು ಅಷ್ಟೇ ಗಾಬರಿಯಿಂದ ಹಿಂಬಾಲಿಸಿದರು ವೆಂಕಜ್ಜಿ.
"ಅಮ್ಮಾ, ಸುಮತಿ ಮೇಡಮ್ ಕಾಲ್ ಇತ್ತು... ಶುಭಾ ಕೂಸಿಗೆ ರಾಶಿ ಹುಶಾರಿಲ್ಯಡ... ಆನು ಈಗ್ಲೇ ಹೊರ್ಡವು... ರಾತ್ರಿ ಒಂಭತ್ಗಂಟೆ ಬಸ್ಸಿಗೆ ಹೋಗ್ತಿ... ಪ್ಲೀಸ್ ನೀ ಎಂತೂ ಅಡ್ಡ ಮಾತಾಡಡ... ಅಪ್ಪಂಗೆ ನಾನೇ ಆಮೇಲೆ ಕಾಲ್ ಮಾಡಿ ಎಲ್ಲಾ ಹೇಳ್ತಿ." ಅಮ್ಮನ ಪ್ರತಿಕ್ರಿಯೆಗೂ ಕಾಯದೆ ತನ್ನಷ್ಟಕ್ಕೇ ಹಲುಬುತ್ತಾ ಸಿಕ್ಕ ನಾಲ್ಕು ಬಟ್ಟೆಗಳನ್ನು ಬ್ಯಾಗಿಗೆ ತುರುಕುತ್ತಿದ್ದಳು ಮಾನಸ. ಮಗಳಿಗೆ ಏನನ್ನೋ ಹೇಳಹೊರಟ ಸೊಸೆ ಸಾವಿತ್ರಿಯನ್ನು ಕಣ್ಸನ್ನೆಯಲ್ಲೇ ತಡೆದ ವೆಂಕಜ್ಜಿ, ಮೊಮ್ಮಗಳ ಬಳಿ ಹೋಗಿ ತಲೆ ಸವರಲು, ಅವರ ಹೆಗಲಿಗೊರಗಿ ಹಾಗೇ ಕಣ್ಮುಚ್ಚಿ ಕುಳಿತಳು.

***
ಸೀಟಿಗೊರಗಿ ಕುಳಿತವಳಿಗೆ ಎಷ್ಟೇ ಒದ್ದಾಡಿದರೂ ನಿದ್ದೆ ಬರುತ್ತಿಲ್ಲ. ಅಪ್ಪ, ಅಮ್ಮನ ಮುದ್ದಾಗಿದ್ದ ಶುಭಾಳ ಅಶುಭ ಘಳಿಗೆ ಅವಳ ಕಾಲೇಜು ಮುಗಿಯುತ್ತಲೇ ಶುರುವಾದಂತಿತ್ತು. ಅಪಘಾತದಲ್ಲಿ ಗತಿಸಿದ ಹೆತ್ತವರು, ಸ್ವಭಾವತಃ ಒರಟಾಗಿದ್ದ ಅಣ್ಣನ ಅಂಕೆ, ಅತ್ತಿಗೆಯ ಉದಾಸೀನ, ಬದುಕೇ ಕಡುಗತ್ತಲಂತಾಗಿದ್ದಾಗ ಅಚಾನಕ್ಕಾಗಿ ಬೆಳಕು ತಂದವ ಸೌರಭ್ ಶರ್ಮ. ಬಿಹಾರ್ ಮೂಲದ ಸೌರಭನ ಆಕರ್ಷಕ ವ್ಯಕ್ತಿತ್ವ, ಮಾತಿಗೆ ಮರುಳಾದ ಶುಭ ಅಣ್ಣನ ಆಕ್ಷೇಪಣೆಯ ನಡುವೆಯೂ ಕೈ ಹಿಡಿದಿದ್ದಳು.
ಅವಳ ಸಂತಸಕ್ಕೆ ಮನಃಪೂರ್ತಿ ಸಾಥ್ ನೀಡಿದವರೆಂದರೆ ಆತ್ಮದ ಸಖಿ ಮಾನಸ ಮತ್ತು ಅವರಿಬ್ಬರ ಅಕ್ಕರೆಯ ಪ್ರೊಫೆಸರ್, ಸುಮತಿ ರಾವ್. ಮದುವೆಯಾದ ತಿಂಗಳಿಗೇ ಸೌರಭನಿಗೆ ದೆಹಲಿಗೆ ವರ್ಗವಾಗಲು, ಗೆಳತಿಯರಿಬ್ಬರೂ ಅಗಲಬೇಕಾಯಿತು. ಮೊದಮೊದಲು ವಾರಕ್ಕೊಮ್ಮೆ ಹರಟುತ್ತಿದ್ದ ಗೆಳತಿಯರು ಕ್ರಮೇಣ ತಿಂಗಳಿಗೊಮ್ಮೆ ಮಾತನಾಡುವುದೂ ಅಪರೂಪವಾಗಿಹೋಯ್ತು. ಈಗ ಕೆಲವು ತಿಂಗಳ ಹಿಂದಷ್ಟೇ ಹೆರಿಗೆಗಾಗಿ ಅಣ್ಣನ ಮನೆಗೆ ಬಂದ ಸುದ್ದಿ ತಿಳಿದು, ಓಡಿಬಂದಿದ್ದಳು ಮಾನಸ.
ಸಖಿಯ ಕಂತಿದ ಮೊಗ, ಸೊರಗಿದ ದೇಹ ನೋಡಿ ಪರಿಪರಿಯಾಗಿ ಕೇಳಿದ್ದಳು. ಅವಳದೋ ಬರೀ ಹಾರಿಕೆಯ ಉತ್ತರ, ತೋರಿಕೆಯ ನಗು. ಶುಭಾಳ ಈ ವೈಖರಿ ನೋಡಿ, ಅಸಮಾಧಾನದಲ್ಲೇ ಅಲ್ಲಿಂದ ಹಿಂತಿರುಗಿದ್ದಳು. 'ಛೇ... ತಾನೊಮ್ಮೆ ಹೋಗಿ ನೋಡಬೇಕಿತ್ತು. ತನ್ನದೇ ತಪ್ಪು. ಹೇಗೂ ಮದುವೆ ಖರೀದಿಗೆ ಮುಂದಿನ್ವಾರ ಆ ಕಡೆ ಹೋಗೋದಿದೆ ಅಂತ ಸುಮ್ನಾದೆ. ದೇವ್ರೇ.. ಏನೂ ಆಗ್ದೇ ಇರ್ಲಪ್ಪಾ... ಬರೀ ಹದಿನೈದು ದಿನದ ಎಳೆಗೂಸು ಅದು.' ಮನದಲ್ಲೇ ಪ್ರಾರ್ಥಿಸುತ್ತಾ, ಅರ್ಧಂಬರ್ಧ ನಿದ್ದೆಯಲ್ಲೇ ಬೆಂಗಳೂರನ್ನು ತಲುಪಿದಳು.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications