ಭಾಷಣ ಮೊಟಕುಗೊಳಿಸಿ ನಾ ಡಿಸೋಜಾಗೆ ಅವಮಾನ
ಮಡಿಕೇರಿ, ಜ. 7 : ಇಪ್ಪತ್ನಾಲ್ಕು ಪುಟಗಳ ಸುದೀರ್ಘ ಭಾಷಣವನ್ನು ಮೊಟಕುಗೊಳಿಸಿರೆಂದು ಹೇಳಿ 80ನೇ ಅಖಿಲ ಕರ್ನಾಟಕ ಕನ್ನಡ ಸಾಹಿತ್ಯ ಸಮ್ಮೇಳನದ ಆಯೋಜಕರು ಅಧ್ಯಕ್ಷ ನಾ. ಡಿಸೋಜಾ ಅವರಿಗೆ ಅವಮಾನ ಮಾಡಿರುವ ಸಂಗತಿ ಮಡಿಕೇರಿಯಲ್ಲಿ ಜರುಗಿದೆ. ಮೊದಲ ದಿನವೇ ಈ ಘಟನೆಯಿಂದಾಗಿ ಸಮ್ಮೇಳನಕ್ಕೆ ಕಪ್ಪು ಚುಕ್ಕೆ ಇಟ್ಟಂತಾಗಿದೆ.
ಪಂಜೆ ಮಂಗೇಶರಾಯರ ಕವನ ವಾಚನದೊಂದಿಗೆ ನಾ. ಡಿಸೋಜಾ ಅವರು ಆರಂಭಿಸಿದ ಭಾಷಣ ಬಹು ಸುದೀರ್ಘವಾಗಿತ್ತು. ಸುಮಾರು ಹದಿನೆಂಟು ಪುಟಗಳಷ್ಟು ಭಾಷಣವನ್ನು ಅವರು ಓದಿದ್ದರು. ಅಷ್ಟರಲ್ಲಿ ಆಯೋಜಕರು ಬಂದು ಭಾಷಣವನ್ನು ಮೊಟಕುಗೊಳಿಸಬೇಕೆಂದು ಸಮ್ಮೇಳನಾಧ್ಯಕ್ಷರನ್ನು ಆಗ್ರಹಿಸಿದ್ದಾರೆ.
ಇಂಥ ಘಟನೆ ಮತ್ತೆ ಯಾವತ್ತೂ ಮರುಕಳಿಸಬಾರದು, ಇಂಥ ಅವಮಾನ ಯಾರಿಗೂ ಆಗಬಾರದು ಎಂದು 76 ವರ್ಷ ವಯಸ್ಸಿನ ಖ್ಯಾತ ಕಾದಂಬರಿಕಾರ ಮನನೊಂದು ನುಡಿದಿದ್ದಾರೆ. ಇನ್ನುಳಿದ ಪುಟಗಳಲ್ಲಿನ ಪ್ರಮುಖ ಅಂಶಗಳನ್ನು ಮಾತ್ರ ಓದುವುದಾಗಿ ಅವರು ಮನವಿ ಮಾಡಿಕೊಂಡರೂ ಆಯೋಜಕರು ಕೇಳಿಲ್ಲ. [ಡಿಸೋಜಾ ಭಾಷಣದ ಪೂರ್ಣಪಾಠ]

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರು, ನಾ ಡಿಸೋಜಾ ಅವರ ಭಾಷಣ ಮೊಟಕುಗೊಳಿಸಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ಇನ್ನು ಮುಂದಾದರೂ ಯಾವ ಸಂದರ್ಭದಲ್ಲಿ ಅಧ್ಯಕ್ಷ ಭಾಷಣದ ಕಾರ್ಯಕ್ರಮ ಆಯೋಜಿಸಬೇಕು ಎಂಬ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸಬೇಕಾಗಿದೆ ಎಂದು ಹಾಲಂಬಿ ಅವರು ನುಡಿದಿದ್ದಾರೆ.
ನಾ ಡಿಸೋಜಾ ಅವರು ಭಾಷಣ ಮಾಡುತ್ತಿದ್ದಾಗ ಸಭಿಕರೆಲ್ಲ ವಿಪರೀತ ಹಸಿದಿದ್ದರು, ಸಭಾಂಗಣ ಹೆಚ್ಚೂ ಕಡಿಮೆ ಖಾಲಿಯಾಗಿತ್ತು. ಅಲ್ಲದೆ, ಭಾಷಣವೂ ಸುದೀರ್ಘವಾಗಿದ್ದರಿಂದ ಗತ್ಯಂತರವಿಲ್ಲದೆ ಮೊಟಕುಗೊಳಿಸಬೇಕಾಯಿತು ಎಂದು ಹೇಳಿರುವ ಅವರು, ಇದರಿಂದಾಗಿ ಡಿಸೋಜಾ ಅವರು ನೊಂದಿದ್ದರೆ ಅವರ ಕ್ಷಮೆ ಕೇಳುವುದಾಗಿ ಹೇಳಿದ್ದಾರೆ.
ಒಟ್ಟಿನಲ್ಲಿ ಕನ್ನಡ ಹಸಿವಿಗಿಂತ ಹೊಟ್ಟೆಯ ಹಸಿವೇ ಹೆಚ್ಚಾಯಿತೆ ಎಂದು ಕನ್ನಡ ಪ್ರೇಮಿಗಳು ಆಡಿಕೊಳ್ಳುವಂತೆ ಈ ನಡೆಯಬಾರದ ಘಟನೆ ನಡೆದಿದೆ. ಮೆರವಣಿಗೆಯಲ್ಲಿ ಭಾಗವಹಿಸಿದ ನಂತರ ಕನ್ನಡಿಗರು ದಣಿದಿದ್ದರೆಂಬುದೇನೋ ನಿಜ. ಆದರೆ, ಭಾಷಣದ ಬಗ್ಗೆ ಆಯೋಜಕರು ಮೊದಲೇ ಚಿಂತಿಸಬೇಕಾಗಿತ್ತು. ಹಾಗೆಯೆ, ಸುದೀರ್ಘ ಭಾಷಣ ಮಾಡಬೇಕೋ ಬೇಡವೋ ಎಂಬ ಬಗ್ಗೆಯೂ ಡಿಸೋಜಾ ಅವರು ನಿರ್ಧರಿಸಬೇಕಾಗಿತ್ತು ಎಂದು ಸಮ್ಮೇಳನದಲ್ಲಿ ಭಾಗವಹಿಸಿದ ಕನ್ನಡಿಗರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications