ಭಾರತ ರತ್ನ ಸರ್ ಎಂವಿ.. ಬಗ್ಗೆ ಕವನ
ಹೆಸರಲ್ಲೆ ತುಂಬಿ ತುಳುಕೊ ಶಿಸ್ತೆ
ಬದುಕಿರುವಾಗಲೆ ಆಗಿ ದಂತಕಥೆ
ನಮ್ಮ ಶತಾಯುಷಿ ವಿಶ್ವೇಶ್ವರಯ್ಯ
ಹುಟ್ಟಿಗೆ ಅಭಿಯಂತರ ದಿನ ನ್ಯಾಯ ||
ಮೋಕ್ಷಗುಂಡುಂ ವಿಶ್ವೇಶ್ವರಯ್ಯ ಹಟ್ಟಿ
ಕೋಲಾರದ ಮುದ್ದೇನಹಳ್ಳಿಯ ಜಟ್ಟಿ
ಬಡತನಕು ಶಿಸ್ತ ಲೇಪಿಸಿದ ಜೀವನ
ಕಾಪಿಟ್ಟ ದಿವಾನ, ವಿದ್ಯಾರ್ಥಿ ವೇತನ ||
ಸಿವಿಲೆಂಜಿನಿಯರುಗಾರಿಕೆ ಬೊಂಬಾಯಿ
ಸರ್ಕಾರವೆ ಬೆರಗು ಬಿಟ್ಟಂತೆ ಬಿಟ್ಟ ಬಾಯಿ
ಸ್ವನಿಯಂತ್ರಿ ಖಡಕ್ವಾಸ್ಲಾ ಕವಾಟ ಬೆಕ್ಕಸ
ಸುಕ್ಕೂರ ನೀರು ಚರಂಡಿ ವ್ಯವಸ್ಥೆ ಪರುಷ || [ವಿಶ್ವೇಶ್ವರಯ್ಯ ಜನ್ಮದಿನ: ಉಸಿರಾಡುವ ಅಂಚೆಚೀಟಿ ಕಂಡ ಕನ್ನಡಿಗ]

ಸ್ವಯಂಚಾಲಿತ ಜಲನಿಯಂತ್ರಿತ ದ್ವಾರದಾನ್ವೇಷಾ
ಏಡನ್ ನೀರ ಯೋಜನೆ ಹೈದ್ರಾಬಾದ್ ಪ್ರವಾಹ
ಪೇಟೆಂಟಿತ ಫ್ಲಡ್ ಗೇಟ್ ಗ್ವಾಲಿಯರ್ ಕೆಆರೆಸ್ಸುಗಳಲ್ಲಿ
ಗರಿಷ್ಠ ನೀರು ಶೇಖರಿಸಿಡೆ ಅಣೆಕಟ್ಟಿಗಾಗಿಸಿ ಖಯಾಲಿ ||
ಕಡೆಗೂ ಕರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕಣ್ಣು
ಮನಗಂಡು ಪ್ರತಿಭೆ ಹೊರನಾಡಿನ ಭಾಗ್ಯ ಸಾಕಿನ್ನು
ಮುಖ್ಯ ಎಂಜಿನಿಯರಾದರು ತಾಯ್ನಾಡಿನ ದಿವಾನ
ಆರ್ಥಿಕ ಅಭಿವೃದ್ಧಿ ಸರ್ವತೋಮುಖ ಪ್ರಗತಿ ಯಾನ ||
ಮೈಸೂರ ವಿಶ್ವವಿದ್ಯಾಲಯ, ಭದ್ರಾವತಿಗೆ ಉಕ್ಕು
ಹಿಂದುಸ್ತಾನ್ ಏರೊನಾಟಿಕ್ಸು, ಮೈಸೂರು ಬ್ಯಾಂಕು
ನ್ಯಾಯ ವಿಧಾಯಕ ಸಭೆ, ಪ್ರಜಾ ಪ್ರತಿನಿಧಿ ಸಭೆಗೂ
ಅಡಿಪಾಯ ಹಾಕಿದ ಶಿಲ್ಪಿ, ಒಂದೆ ಎರಡೆ? ಪುನುಗು ||
ಶಿಕ್ಷಣ ಮಹತ್ವ ಅರಿತು ವಿದ್ಯಾಸಂಸ್ಥೆಗಳ ಸ್ಥಾಪಿಸುತ
ರೈಲುಬಂಡಿ ಹಳಿಗಳ, ನಾಡಿನತ್ತ ಬರಿಸಿದದೇ ಚಿತ್ತ
ಹೋಟೆಲು, ಪುಸ್ತಕ ಭಂಢಾರ, ಸಾಬೂನ ಕಾರ್ಖಾನೆ
ಮೈಸೂರ ವಾಣಿಜ್ಯ ಮಂಡಳಿ, ಕಾಗದ, ಗಂಧದ ಎಣ್ಣೆ ||
ಗ್ರಾಮೀಣ ನ್ಯಾಯಾಲಯ, ಗ್ರಾಮಪಂಚಾಯತಿ,ರೇಷ್ಮೆ
ಮಲೆನಾಡಭಿವೃದ್ಧಿ ಮಂಡಳಿ, ಚರ್ಮ ಹದ ಕಾರ್ಖಾನೆ
ಆರೇ ವರ್ಷಗಳ ಸಾಧನೆ, ಅರವತ್ತಕು ಆಗದ ಸಮಸ್ತ
ಕನ್ನಡಕೆ ಮೊದಲ ಭಾರತ ರತ್ನ, ಸರ್ ಎಂವಿ ದೈವದತ್ತ ||
ನೂರೆರಡು ವಸಂತಗಳು, ಶಿಸ್ತೇ ಪ್ರತಿ ಗಳಿಗೆ ಬದುಕಲು
ಕೇಳಿದ್ದರಂತವರ ತಲೆಯ ಸಾವಿನ ತರುವಾಯದಲೂ !
ನಾಡ ಸರ್ವಾಂಗೀಣ ಪ್ರಗತಿ, ಅಸ್ತಿಭಾರ ಹಾಕಿದ ರೀತಿ
ಬದುಕೆ ಅನ್ವರ್ಥನಾಮ, ನಮ್ಮ ನಡುವೆ ಬದುಕಿದ ಪ್ರಭೃತಿ ||
- ನಾಗೇಶ
(ಮಾಹಿತಿ ಕೃಪೆ: ಶೈಲಜಾ ಕೇಕಣಾಜೆಯವರ ಸರ್ ಎಂವಿ ಕುರಿತ ಬರಹದಿಂದ ಆಯ್ದುಕೊಂಡಿದ್ದು)
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications