ನನ್ನ ಕನಸಿನ ಊರು : ವಿಪಿ ಬಳಿಗಾರ್

ಎಓಎಲ್ ಪ್ರಾಯೋಜಿತ ಡಿವೈನ್ ಕರ್ನಾಟಕ ಪ್ರಾಜೆಕ್ಟ್ ವತಿಯಿಂದ ಗ್ರಾಮೀಣ ಜನರ ಜೀವನಮಟ್ಟ ಸುಧಾರಿಸುವ ಚಿಂತನ ಗೋಷ್ಠಿ ಇತ್ತು. ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಹೊರಡಿಸಲಾದ ಒಂದು ಸುತ್ತೋಲೆ "ದುಡ್ಡಿಲ್ಲದೆ ಮಾಡಬಹುದಾದ ದೊಡ್ಡ ಕೆಲಸಗಳು" ಪರಿಪತ್ರವನ್ನು ಸಭಿಕರಿಗೆ ಹಂಚಲಾಯಿತು. ಅದರ ಜತೆಗೆ , ವಿ ಪಿ ಬಳಿಗಾರರು ರಚಿಸಿದ "ನನ್ನ ಕನಸಿನ ಊರು" ಕವನವಿತ್ತು. ಆ ಕವನ ಇಲ್ಲಿ ನಿಮಗಾಗಿ- ಸಂಪಾದಕ
ನನ್ನ ಕನಸಿನ ಊರಿನಲ್ಲಿ ನೋಟಿಗೆ ಓಟುಗಳ ಮಾರಾಟವಿಲ್ಲ
ಹೆಂಡ ಸಾರಾಯಿ ಹೊಳೆ ಹರಿಯುವುದಿಲ್ಲ
ಓಣಿ ಓಣಿಗಳ ಮಧ್ಯೆ ಕಂದಕಗಳಿಲ್ಲ
ಮೇಲು ಕೀಳು ಮೈಲಿಗೆ ಭಾವಗಳಿಲ್ಲ
ಮಂದಿರದ ಪ್ರಾರ್ಥನೆ ಜಾಗಟೆಗಳು
ಮಸೀದಿಯ ನಮಾಜು ಮೈಕುಗಳು
ದ್ವೇಷ ಬಿತ್ತುವುದಿಲ್ಲ, ಶಾಂತಿ ಕದಡುವುದಿಲ್ಲ
ಹಬ್ಬ ಹರಿದಿನಗಳಲ್ಲಿ ಪ್ರಾಣಿಗಳ ಬಲಿಯಿಲ್ಲ
ಮಾಟ ಮಂತ್ರಗಳಿಗೆ ಎಳ್ಳಷ್ಟೂ ಒಲವಿಲ್ಲ
ನನ್ನೂರಿನ ಬಾಲ ಬಾಲೆಯರು ಶಾಲೆ ಬಿಟ್ಟು ಕೂಲಿ ಮಾಡುವುದಿಲ್ಲ
ಆಟಪಾಠ ಓಟಗಳಲಿ ಹಿಂದೆ ನೋಡಿಲ್ಲ
ಶಿಕ್ಷಕ ಶಿಕ್ಷಕಿಯರು ಕಲಿಸುವುದನ್ನು ಬಿಟ್ಟು ಕಾದಾಡುವುದು ಮಾಡುವುದಿಲ್ಲ
ಶಾಲೆಗಳ ಹಂಚುಗಳು ಹಾರಿ ಹೋಗಿಲ್ಲ, ಗೋಡೆಗಳು ಬಿರುಕು ಬಿಟ್ಟಿಲ್ಲ
ವೈದ್ಯ ದಾದಿಯರು ರೋಗಿಗಳ ರಕ್ತ ಹೀರುವುದಿಲ್ಲ
ಹೆಣದ ಕಿಸೆಗೆ ಕೈ ಹಾಕುವುದಿಲ್ಲ, ಮಾತ್ರೆಗಳ ಮಾರಾಟ ಮಾಡುವುದಿಲ್ಲ
ವ್ಯಾಪಾರಿಗಳು ಅನ್ಯಾಯದ ತಕ್ಕಡಿ ತೂಗುವುದಿಲ್ಲ
ಗ್ರಾಮ ಲೆಕ್ಕಿಗ ರೈತ ರೈತರ ನಡುವೆ ಜಗಳ ಹಚ್ಚುವುದಿಲ್ಲ
ಊರ ಪಂಚಾಯಿತಿಯಲ್ಲಿ ಗ್ರಾಮ ಸಭೆಗಳಿಲ್ಲದೆ ಯೋಜನೆಗಳ ರಚನೆಯಿಲ್ಲ
ನನ್ನೂರಿನಲ್ಲಿ ಬಡವರಿಗೆ ಕೊಟ್ಟ ಮನೆಗಳು ವರುಷಗಳಾದರಿನ್ನೂ ಮುರಿದು ಬಿದ್ದಿಲ್ಲ
ಎಮ್ಮೆ ಹಸುಗಳು ಬರಡಾಗಿ ನಿಂತಿಲ್ಲ
ಬೀದಿದೀಪಗಳು ಹಗಲಿನಲ್ಲಿ ಉರಿಯುವುದಿಲ್ಲ
ನಲ್ಲಿನೀರು ಪೋಲಾಗಿ ಹರಿಯುವುದಿಲ್ಲ
ಕೂಲಿಗಾಗಿ ಬಂದ ಕಾಳು ಕಾಳಸಂತೆ ಸೇರುವುದಿಲ್ಲ
ಬರ ಪರಿಹಾರದ ಕೆರೆ ಕಟ್ಟೆ ಒಡ್ಡುಗಳು
ಭಾರಿ ಮಳೆಗೂ ಒಡೆದು ಹೋಗುವುದಿಲ್ಲ
ನನ್ನ ಕನಸಿನ ಊರಿನಲ್ಲಿ ನೋಟಿಗೆ ಓಟುಗಳ ಮಾರಾಟವಿಲ್ಲ
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications