ನನ್ನ ಕನಸಿನ ಊರು : ವಿಪಿ ಬಳಿಗಾರ್

ಎಓಎಲ್ ಪ್ರಾಯೋಜಿತ ಡಿವೈನ್ ಕರ್ನಾಟಕ ಪ್ರಾಜೆಕ್ಟ್ ವತಿಯಿಂದ ಗ್ರಾಮೀಣ ಜನರ ಜೀವನಮಟ್ಟ ಸುಧಾರಿಸುವ ಚಿಂತನ ಗೋಷ್ಠಿ ಇತ್ತು. ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಹೊರಡಿಸಲಾದ ಒಂದು ಸುತ್ತೋಲೆ "ದುಡ್ಡಿಲ್ಲದೆ ಮಾಡಬಹುದಾದ ದೊಡ್ಡ ಕೆಲಸಗಳು" ಪರಿಪತ್ರವನ್ನು ಸಭಿಕರಿಗೆ ಹಂಚಲಾಯಿತು. ಅದರ ಜತೆಗೆ , ವಿ ಪಿ ಬಳಿಗಾರರು ರಚಿಸಿದ "ನನ್ನ ಕನಸಿನ ಊರು" ಕವನವಿತ್ತು. ಆ ಕವನ ಇಲ್ಲಿ ನಿಮಗಾಗಿ- ಸಂಪಾದಕ
ನನ್ನ ಕನಸಿನ ಊರಿನಲ್ಲಿ ನೋಟಿಗೆ ಓಟುಗಳ ಮಾರಾಟವಿಲ್ಲ
ಹೆಂಡ ಸಾರಾಯಿ ಹೊಳೆ ಹರಿಯುವುದಿಲ್ಲ
ಓಣಿ ಓಣಿಗಳ ಮಧ್ಯೆ ಕಂದಕಗಳಿಲ್ಲ
ಮೇಲು ಕೀಳು ಮೈಲಿಗೆ ಭಾವಗಳಿಲ್ಲ
ಮಂದಿರದ ಪ್ರಾರ್ಥನೆ ಜಾಗಟೆಗಳು
ಮಸೀದಿಯ ನಮಾಜು ಮೈಕುಗಳು
ದ್ವೇಷ ಬಿತ್ತುವುದಿಲ್ಲ, ಶಾಂತಿ ಕದಡುವುದಿಲ್ಲ
ಹಬ್ಬ ಹರಿದಿನಗಳಲ್ಲಿ ಪ್ರಾಣಿಗಳ ಬಲಿಯಿಲ್ಲ
ಮಾಟ ಮಂತ್ರಗಳಿಗೆ ಎಳ್ಳಷ್ಟೂ ಒಲವಿಲ್ಲ
ನನ್ನೂರಿನ ಬಾಲ ಬಾಲೆಯರು ಶಾಲೆ ಬಿಟ್ಟು ಕೂಲಿ ಮಾಡುವುದಿಲ್ಲ
ಆಟಪಾಠ ಓಟಗಳಲಿ ಹಿಂದೆ ನೋಡಿಲ್ಲ
ಶಿಕ್ಷಕ ಶಿಕ್ಷಕಿಯರು ಕಲಿಸುವುದನ್ನು ಬಿಟ್ಟು ಕಾದಾಡುವುದು ಮಾಡುವುದಿಲ್ಲ
ಶಾಲೆಗಳ ಹಂಚುಗಳು ಹಾರಿ ಹೋಗಿಲ್ಲ, ಗೋಡೆಗಳು ಬಿರುಕು ಬಿಟ್ಟಿಲ್ಲ
ವೈದ್ಯ ದಾದಿಯರು ರೋಗಿಗಳ ರಕ್ತ ಹೀರುವುದಿಲ್ಲ
ಹೆಣದ ಕಿಸೆಗೆ ಕೈ ಹಾಕುವುದಿಲ್ಲ, ಮಾತ್ರೆಗಳ ಮಾರಾಟ ಮಾಡುವುದಿಲ್ಲ
ವ್ಯಾಪಾರಿಗಳು ಅನ್ಯಾಯದ ತಕ್ಕಡಿ ತೂಗುವುದಿಲ್ಲ
ಗ್ರಾಮ ಲೆಕ್ಕಿಗ ರೈತ ರೈತರ ನಡುವೆ ಜಗಳ ಹಚ್ಚುವುದಿಲ್ಲ
ಊರ ಪಂಚಾಯಿತಿಯಲ್ಲಿ ಗ್ರಾಮ ಸಭೆಗಳಿಲ್ಲದೆ ಯೋಜನೆಗಳ ರಚನೆಯಿಲ್ಲ
ನನ್ನೂರಿನಲ್ಲಿ ಬಡವರಿಗೆ ಕೊಟ್ಟ ಮನೆಗಳು ವರುಷಗಳಾದರಿನ್ನೂ ಮುರಿದು ಬಿದ್ದಿಲ್ಲ
ಎಮ್ಮೆ ಹಸುಗಳು ಬರಡಾಗಿ ನಿಂತಿಲ್ಲ
ಬೀದಿದೀಪಗಳು ಹಗಲಿನಲ್ಲಿ ಉರಿಯುವುದಿಲ್ಲ
ನಲ್ಲಿನೀರು ಪೋಲಾಗಿ ಹರಿಯುವುದಿಲ್ಲ
ಕೂಲಿಗಾಗಿ ಬಂದ ಕಾಳು ಕಾಳಸಂತೆ ಸೇರುವುದಿಲ್ಲ
ಬರ ಪರಿಹಾರದ ಕೆರೆ ಕಟ್ಟೆ ಒಡ್ಡುಗಳು
ಭಾರಿ ಮಳೆಗೂ ಒಡೆದು ಹೋಗುವುದಿಲ್ಲ
ನನ್ನ ಕನಸಿನ ಊರಿನಲ್ಲಿ ನೋಟಿಗೆ ಓಟುಗಳ ಮಾರಾಟವಿಲ್ಲ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications