ಕರ್ಫ್ಯೂ ವಿಧಿಸಿದ ದಿನ
- ಜಾನಕೀಸುತ(ಸೌಜನ್ಯ ಎಚ್.ಪಿ.)
ಬೆಳಬೆಳಗ್ಗಿನವಿವಾಹಿತರ ರಸಿಕತೆಗೆ,
ವಿವಾಹೇತರರ ಕನಸಿಗೆ
ರಸಭಂಗ ತಂದೊಡ್ಡುವ
ಕಾಮಧೇನುವಿನ ವರ್ತಕನ ಸದ್ದಿಲ್ಲ.
ಸುದ್ದಿ ಹಂಚುವ ಪ್ರವರ್ತಕನ
ಸುದ್ದಿಯೇ ಇಲ್ಲ!
ಸದ್ದುಗಳಿಲ್ಲ ಎನ್ನುವಂತಿಲ್ಲ
ಇವೆ,
ಗಡಿಭದ್ರತಾ ಪಡೆಗಳ, ವಿಶೇಷ
ಪೋಲೀಸ್ ರೆಜಿಮೆಂಟ್ಗಳ
ಬೂಟುಗಳ ಶಬ್ದ.
ಎಲ್ಲೋ ದೂರದಲ್ಲಿ
ಗುಂಡು ಹಾರಿದೊಡನೆ
ಅವು ಕೂಡ ನಿಶ್ಯಬ್ದ!
ಇನ್ನೂ ಆರಿಲ್ಲ ಅಂತರಾಳದೊಳಗಿನ
ಕೋಮು ದಳ್ಳುರಿಯ ಕೊಂಡ,
ಸದ್ಯಕ್ಕೀಗ ಅದು
ಬೂದಿ ಮುಚ್ಚಿದ ಕೆಂಡ!
ದಿಕ್ಕು ತಪ್ಪಿ ಇತ್ತ ಬೀಸಿದರೆ ಗಾಳಿ,
ಕಿಡಿ, ಕಿಡಿ ಸ್ಫೋಟಿಸಿ
ಅದು ದಹದಹಿಸಲು ಸಿದ್ಧ.
ಅದಕ್ಕೆ ತುಪ್ಪ ಸುರಿಯಲು
ಕೆಲವರು ಸದಾ ಸನ್ನದ್ಧ.
ಹತ್ತುರಿದರೆ ಪ್ರಕಾಶಮಾನ ಜ್ವಾಲೆ,
ಹಲವರು ಪತಂಗಗಳಾಗಲು ಬದ್ಧ!
ರಸ್ತೆ ಪೂರಾ ನಿರ್ಜನ
ಅಲ್ಲಲ್ಲಿ ನಿಂತು,
ಮೆಷಿನ್ ಗನ್ ಹೊತ್ತು
ಗಸ್ತು ತಿರುಗುವ
ಪಹರೆಯ ಜನ!
ಸಂತ್ರಸ್ತ ಸಂಸಾರಗಳ,
ಸಮಾಧಿಗಳೇ ತುಂಬಿದ
ಸ್ಮಶಾನದಲ್ಲಿ ಶಾಂತಿ,
ನೆಲೆಸಿದ ಭ್ರಾಂತಿ!
(ಸಂಕ್ರಮಣ ಪ್ರಕಾಶನದವರು ನಡೆಸುವ ರಾಜ್ಯ ಮಟ್ಟದ ಸಂಕ್ರಮಣ ಕಾವ್ಯ-2003ರ ಸ್ಫರ್ಧೆಯಲ್ಲಿ ಬಹುಮಾನ ಪಡೆದ ಕವಿತೆ)
More From
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications