ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗುಲ್-ಮೊಹರ್..
ಕವಿ
ನಿಸಾರ್ಗೆ
ಗೌರವ
ಸಲ್ಲಿಸುವ
ವಿನೂತನ
ಪ್ರಯತ್ನ
‘ಗುಲ್ಮೊಹರ್-
ಕಾವ್ಯೋತ್ಸವ’ಕ್ಕೆ,
‘ರಸಿಕಾ
ಕೇಳೊ’
ತಂಡ
ಮುಂದಾಗಿತ್ತು.
ಬೆಂಗಳೂರಿನ
ಯವನಿಕಾದಲ್ಲಿ
ನಡೆದ
ಈ
ಕಾರ್ಯಕ್ರಮದ
ಸಾರ್ಥಕತೆ
ಬಗ್ಗೆ
ಹೀಗೊಂದು
ಕವನ.
ಮೂರು ಘಂಟೆಗಳ ಕಾಲ
ಕಟ್ಟಿಬಿಟ್ಟಿತ್ತು..
ಭೂತ-ಭವಿಷ್-ವರ್ತಮಾನಗಳ
ಸರಾಗವಾಗಿ ಸಾಗಿತ್ತು
ಅನುಭವಾಮೃತದ ರಸಗವಳ..
ಒಂದೊಂದು
ಪದ್ಯವೂ
ಮೀದು
ಬಂದಂತಿತ್ತು
ಅತಿ
ಸರಳ-ಸುಂದರ
ಭಾವ
ಸರೋವರದಲಿ..
ಕರೆದೊಯ್ದಿತ್ತು
ನಮ್ಮೆಲ್ಲರನು
ನಮ್ಮ
ಮನದ
ಮೂಲೆ-ಮೂಲೆಯಲಿ
ತನ್ನದೇ
ಹಿಡಿತದ
ಅತಿ
ವಿರಳ
ಶೈಲಿಯಲಿ..
ಕವಿ-ರವಿಯ
ಹೋಲಿಕೆಯಲಿ
ಕವಿಯೇ
ಮೇಲೆನಿಸದನಿಂದು
ಮತ್ತೊಮ್ಮೆ
ಬಾಳ
ಚಿಕ್ಕ-ಚಿಕ್ಕ
ಚುಕ್ಕೆಗಳನಾಯ್ದು
ಹೆಣೆದ
ಪದಗಳ
ರಂಗವಲ್ಲಿಯ
ಕಂಡು
ಮನ
ಮೂಕ-ವಿಸ್ಮಿತವಾಯ್ತು
ಮಗದೊಮ್ಮೆ..
ಅದೇ
ಬಾನು
ಅದೇ
ಭೂಮಿ
ಅದೇ
ಜನ
ಅದೇ
ಮನ
ಇವುಗಳ
ಬಗೆಗಿನ
ಕವಿ-ದೃಷ್ಟಿ
ಮಾತ್ರ
ಬಲು
ಗಹನ..
ಮನ-ಮನದ
ಅಂತರಾಳವ
ತಟ್ಟಿ
ನಗಿಸಿ-ಅಳಿಸಿದ
ಕವಿಗಿದೋ
ನಮನ..
ಈ
ಗುಲ್-ಮೊಹರಿನ
ನಸುಗೆಂಪು-ನಸುಗಂಪು..
ಅಳಿಯದೇ
ಉಳಿಯುವುದು
ಎಂದೆಂದೂ..
ಆ
ಕವಿ-ಹೃದಯದ
ಮೋಡಿಗೆ
ಅದರ
ಭಾವಗಳ
ಕೋಡಿಗೆ
ಕೊಚ್ಚಿ
ಹೋಗಿದೆ
ಮನವಿಂದು..
ಕನ್ನಡದ
ಬಾನಂಗಳದಲಿ
ನೀನೆಂದೂ
ಮರೆಯಲಾರದ
ತೇಜ-ಸಿಂಧು..
Comments
Story first published: Saturday, November 16, 2002, 5:30 [IST]