ಅರ್ಧ ಸತ್ಯದ ಹುಡುಗಿ
- ಜಾನಕೀಸುತ(ಸೌಜನ್ಯ ಎಚ್.ಪಿ.)

ಅರ್ಧಂಬರ್ಧ ಬದುಕಿ,
ಬದುಕು ಪೂರ್ತಿಯಾಗುವ
ಮೊದಲೇ, ಖಾಲಿಯಾಗಿಬಿಟ್ಟದ್ದು ಸತ್ಯ
ಬ್ರಿಟೀಷ್ ರಾಜವಂಶದ
ಬೀಜವನ್ನು ಉದರದಲ್ಲಿಟ್ಟು,
ಹೆತ್ತು, ಹೊತ್ತು, ಮಕ್ಕಳ್ಳಿನ್ನು
ಮಡಿಲು ಬಿಡುವ ಮೊದಲೇ
ಮಗ್ಗುಲಾದಳು, ಪ್ರಿಯಕರನೆಡೆಗೆ,
ಅವನೆಡೆಗೆ ದಿಗಂತದೆಡೆಗೆ!
ಕಂಡು, ಗಂಡನ ಕಾಮಕೇಳಿ,
ಇನ್ನೊಬ್ಬಳೊಡನೆ ಕೆರಳಿ.
ಅಣು ಬಾಂಬ್ನ ಸ್ಫೋಟದಂತೆ
ಸಿಡಿದುಹೋಯ್ತು ರಾಜಮನೆತನದ
ಮರ್ಯಾದೆ, ಒಳಗುಟ್ಟು,
ಒಳಗಿನ ಹುಳುಕು,
ಅದರ ಮೇಲೆ ರತ್ನಗಂಬಳಿ
ಹಾಸಿದ ವೈಭವೋಪೇತ ಬದುಕು,
ಎಲ್ಲವೂ ಒಮ್ಮೆಲೆ.
ಸುದ್ದಿಗೊಂದು ವಸ್ತುವಾಗಿ,
ಸುದ್ದಿ ಸುಬ್ಬಕ್ಕನಾಗಿ,
ಯಾರದೋ ಕೈ ಕುಲುಕಿದ್ದು,
ಯಾರೆಡೆಗೋ ಕಣ್ ಮಿಟುಕಿಸಿದ್ದು,
ಎಲ್ಲವೂ ಸುದ್ದಿಯಾಗಿ
ಸುದ್ದಿಗೊಂದು ಗುದ್ದಿಯಾಯ್ತು,
ಪಾಪರಾತ್ಸಿಗಳು ಬೆನ್ನಟ್ಟಿ.
ಇಲ್ಲಿ ಕಾಣದ ಉಳಿದರ್ಧ
ಬದುಕ ಕಾಣುವ,
ಇಲ್ಲಿ ಸಿಗದ ಪ್ರೇಮ
ಎಲ್ಲೋ ಹುಡುಕುವ,
ತುಡಿತ ಹೆಚ್ಚಾದವಳಂತೆ
ಹೇಳದೆ, ಕೇಳದೆ ಹೋಗಿಬಿಟ್ಟಳು
ಪ್ರೇಮ ವಂಚಿತೆ ರಾಜಕುಮಾರಿ.
ಜೀವವಿದ್ದಾಗ ಬದುಕಲಿಲ್ಲ;
ಜೀವ ಹೋದ ಮೇಲೆ ಸಾಯಲಿಲ್ಲ,
ಎನ್ನುವುದು ಮಾತ್ರ ಪೂರ್ತಿ ಸತ್ಯ!
(*ಮೈಸೂರಿನ ಸಿರಿಗನ್ನಡ ವೇದಿಕೆಯವರು ನಡೆಸಿದ ರಾಜ್ಯಮಟ್ಟದ ಯುಗಾದಿ ಕವನ ಸ್ಫರ್ಧೆ-2004ರಲ್ಲಿ ಪ್ರಥಮ ಬಹುಮಾನ ಪಡೆದ ಕವಿತೆ)
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications