ಕಳೆದುಹೋದಳು ಸಂಗಾತಿ!
- ಅ.ಮ. ಮಹೇಶ, ಬೆಂಗಳೂರು.
ತನ್ನ ದೇಹ-ಮನಸ್ಸೆಲ್ಲಾ ನನಗೇ ಅರ್ಪಿಸಿದಾಕೆ.
ಹಗಲೆಲ್ಲಾ ನನ್ನ ಜೇಬು ಎಂಬ ಮನಸಲ್ಲಿ ಪವಡಿಸುತ್ತಿದ್ದಳು.
ರಾತ್ರಿ ನನ್ನ ನಿದ್ರೆಗೆ ಬಿಟ್ಟು ಮಗ್ಗುಲಲಿ ತಾ ಎಚ್ಚರವಿರುತ್ತಿದ್ದಳು.
ನಾ ಬೇಗೇಳಬೇಕೆಂದಾಗ ತಾನು ಅಲಾರಮ್ ಆಗಿ
ಕೋಳಿಯಂತೆ ಕೂಗಿ, ಹಕ್ಕಿಯಂತೆ ಹಾಡಿ ಎಬ್ಬಿಸುತ್ತಿದ್ದಳು.
ಸಮಯವನ್ನು ತಿಳಿಸುತ್ತಿದ್ದಳು.
ತಾನಿದ್ದಷ್ಟು ಕಾಲ ಅವಳು ನನ್ನ ಸ್ನೇಹಿತರ,
ಬಂಧುಗಳ ಜೊತೆ ಚೆನ್ನಾಗಿದ್ದಳು-
ಅವರ ಸಂಪರ್ಕವನ್ನು ನನಗೆ ಕಲ್ಪಿಸಿಕೊಡುತ್ತಿದ್ದಳು.
ಅವಳೇನು ಬಲ್ಲಳು ಪಾಪ!
ಪರಿಚಯವಿಲ್ಲದವರೂ ತಪ್ಪಿ ಮಾತನಾಡಿದರೂ
ಅವರೊಡನೆಯೂ ಮಾತಿಗಿಳಿಸುತ್ತಿದ್ದಳು.
ನನಗೆ ಬೇಜಾರಾದಾಗ ನನ್ನೊಂದಿಗೆ ಕೇರಂ ಆಡುತ್ತಿದ್ದಳು,
ಇಷ್ಟಪಟ್ಟರೆ ಸಿನಿಮಾದ ಹಾಡಿನ ಸಾಹಿತ್ಯವಲ್ಲ
ಅದರ ರಾಗದ ತುಣುಕೊಂದನ್ನು ಅಂದವಾಗಿ ಹಾಡಿಬಿಡುತ್ತಿದ್ದಳು.
ಆಕೆ ನನ್ನಿಂದ ಏನೂ ನಿರೀಕ್ಷಿಸುತ್ತಿರಲಿಲ್ಲ;
ಸಂಬಳ ಬಂದಾಗಲೂ- ಬರೀ ಖರ್ಚು-ವೆಚ್ಚದ
ಲೆಕ್ಕ ಮಾಡಿಕೊಡುತ್ತಿದ್ದಳು ಅಷ್ಟೆ.
ನಾನೇ ತಿಂಗಳು ಒಂದಕ್ಕೋ-ಎರಡಕ್ಕೋ
ಇಪ್ಪತ್ತೈದು ರೂಪಾಯಿಗೆ ಅವಳನ್ನು ತೃಪ್ತಿಪಡಿಸುತ್ತಿದ್ದೆ!
ಆಜೀವನ ಪರ್ಯಾಂತ ನನಗೆ ಸಂಗಾತಿಯಾಗಿ ಬಂದವಳಾಕೆ,
ನನ್ನ ಖಾಲಿ ಕಿಸೆಗೆ ಬಹುಶ: ಮನಸ್ಸಲ್ಲೇ ಬೇಜಾರುಪಟ್ಟುಕೊಂಡಿರಬಹುದು.
ಬಸ್ಸಿನ ರಸ್ಸಿನಲಿ ನನ್ನ ಕೈಬಿಟ್ಟು ಮತ್ತೊಬ್ಬನ ಕೈಸೇರಿಹೋಗಿದ್ದಳು.ಅಲ್ಲ! ಆತ ನನ್ನ ಯಾಮಾರಿಸಿ ಅವಳನ್ನು ಕದ್ದೊಯ್ದ!
ಬೇಜಾರಾಯಿತು, ಕಳೆದುಹೋದದ್ದು ಸಿಗುವುದಿಲ್ಲವೆಂದು
ಕಣ್ಣೊರೆಸಿ ಸುಮ್ಮನಾದೆ.
ಅವಳು ಸಾಮಾನ್ಯಳಲ್ಲ, ಕುಬೇರನ ಮಗಳು!
ನೋಕಿಯಾ ಎಂಬ ಹೆಸರು ಹೊತ್ತ
ದೊಡ್ದ ಕಂಪನಿಯ ಮಾಲೀಕನ ಪುತ್ರಿ-
ಕೇವಲ ಎರಡು ಸಾವಿರಕ್ಕೆ ನನಗೆ ಒಲಿದಿದ್ದಳು!!!
ಅವಳ ಹೆಸರು ನೊಕಿಯಾ 1110
ಅವಳ ಸಂಪರ್ಕದ ಸಂಖ್ಯೆ 9945128967.
More From
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications