ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂದು ಹೋಗುವುದಕ್ಕೆ ಮಾತ್ರ ಸರಿ ಹೀಗೆ

By ರವಿಕುಮಾರ .ವೈ.ಎಂ., ಬೆಂಗಳೂರು
|
Google Oneindia Kannada News

ವಿದೇಶದಲ್ಲಿಯ ಕೆಲಸ ಹಣದ ಕೊರತೆಯ ನೀಗಿಸಿ
ಕೆಲಕಾಲ ಕನಸಿನ ಉಲ್ಲಾಸದಿ ನಮ್ಮ ಮೆರೆಸಿ
ಹುಟ್ಟೂರ ಬಂಧು ಬಳಗದ ನೆನಪುಗಳಲ್ಲಿ ಅಲೆಸಿ
ಕೆದಕುತಿದೆ ಮನಸ್ಸಿನ ಶಾಂತಿಯ ಸತತ ದಾಳಿ ನಡೆಸಿ

ತಾಯ್ತಂದೆ ತಾಯ್ನಾಡು ಗೆಳೆಯರು ಬಲುದೂರ
ಎಂದು ಸೇರುವುದೋ ಈ ಜೀವ ಚೆಲುವಾದ ನಮ್ಮೂರ
ಐಶಾರಾಮ ಜೀವನವಿದ್ದರೂ ಏಕೋ ಮನಸ್ಸು ಭಾರ
ಸಹಿಸದು ಮನವು ಏಕಾಂಗಿಯಾಗಿ ಅನುಭವಿಸಲು ಜೀವನಸಾರ

ಮನದಲ್ಲಿತ್ತು ಒಂದೇ ಒಂದು ಸಣ್ಣ ಬಯಕೆ
ವಿದೇಶ ನೋಡಿ ಸುತ್ತುವ ಸಣ್ಣ ಹರಕೆ
ಹಣಗಳಿಸುವ ಉದ್ದೇಶವಿಲ್ಲ ನನಗೆ
ಹೋದ್ರೆ ಸಾಕು ಮಾರಾಯ ಬೇಗ ನಮ್ಮೂರ್‍ಗೆ

ಮತ್ತೆ ಬರುವ ಯೋಚನೆ ಇದೆ ವಿದೇಶಕ್ಕೆ
ಆದ್ರೆ ಅದು ಅನಿವಾರ್ಯವಾದರೆ ಮಾತ್ರ ಓಕೆ
ಏನೇ ಹೇಳಿ ಇಲ್ಲಿನ ಸೌಕರ್ಯಗಳ ಬಗ್ಗೆ
ಬಂದು ಹೋಗುವುದಕ್ಕೆ ಮಾತ್ರ ಸರಿ ಹೀಗೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X