ಯೂಸುಫ್
- ಇಂಗ್ಲೀಷ್ ಮೂಲ: ಐ. ಆರ್. ಲೋವೆಲ್ ಬರೆದ ‘’
- ಕನ್ನಡಾನುವಾದ : ಬಿ.ಎನ್.ವಿಶ್ವನಾಥರಾವ್, ರಾಮಕೃಷ್ಣ ನಗರ, ಮೈಸೂರು
[email protected]
ಆಗಂತುಕನೊಬ್ಬ ಬಂದಿಂತು ಮೊರೆಯಿಟ್ಟ :
‘ಕಾಪಾಡಿ, ನಾನೋರ್ವ ಭಯಭೀತ, ಬಹಿಷ್ಕೃತ.
ಆಡಳಿತಶಾಹಿಯಿಂದೆನ್ನ ಪ್ರಾಣಕೆರವಹುದು.
ಜೀವಭಯದಿಂದೋಡುತಲೆ ನಿನ್ನ ಬಳಿ ಬಂದಿಹೆನು,
ಎಮ್ಮ ಜನತೆಯ ದೈವಾಂಶ ಸಂಭೂತ ಯೂಸುಫನ ಬಳಿಗೆ,
ಪ್ರಾಣರಕ್ಷಣೆಗಂತು ಜಠರಾಗ್ನಿ ಶಮನಕ್ಕೆ.’
ಇದ ಕೇಳಿ, ಯೂಸುಫನಿಂತೆಂದ: ‘ಈ ಡೇರೆ ಎನ್ನ-
ದೆನುವುದಕಿಂತ ಭಗವದನುಗ್ರಹವಲ್ತೆ !
ಜೀವಭಯವನು ತೊರೆದು, ಶಾಂತಿಯಲಿ ವಿಶ್ರಮಿಸು.
ನಿರ್ಭಿಡೆಯಿಂದಿರುವ ಆಹಾರದಲಿ ನಿನ್ನ ಹಸಿವನು ಹಿಂಗಿಸು.
ಇರುಳು ಹಗಲೆಂಬ ಸೂರನ್ನು ಕರುಣಿಸಿಹ ಸೃಷ್ಟಿಕರ್ತನ
ಸೇವಕನು ನಾನು. ಅವನ ದ್ವಾರದ ಮುಂದೆ
ಹಾದುಹೋದವರಾರು ‘ಇಲ್ಲ’ವೆಂಬ ಸೊಲ್ಲು ಕೇಳಿಲ್ಲ !’
ಇಂತೆಂದು ಆ ರಾತ್ರಿ ಅತಿಥಿಗಾಶ್ರಯವಿತ್ತು ಯೂಸುಫನು
ಸತ್ಕರಿಸಿದನು. ಮರುದಿನ ಕೋಳಿ ಕೂಗುವ ಮುನ್ನ
ಅವನನೆಬ್ಬಿಸಿ ಇಂತೆಂದ: ‘‘ಇಗೋ ಹೊನ್ನು, ಎನ್ನ ತೇಜವಾಜಿಯು
ನಿನ್ನ ಪಲಾಯನಕೆ ಸಿದ್ಧವಾಗಿಹುದು. ಬೆಳಕು ಹರಿಯುವ ಮುನ್ನ
ಇಲ್ಲಿಂದ ಹೊರಡು.’ ಜ್ಯೋತಿ ಜ್ಯೋತಿಯ ಬೆಳಗೆ ತಾನದು ಕುಂದದು;
ಅಂತೆ, ಸದ್ಗುಣವಿನ್ನೊಬ್ಬರಲಿ ಸದ್ಗುಣವ ಬೆಳಗಿಪುದು.
ಆಗಂತುಕಗೆ ಜ್ಞಾನೋದಯವಾಗಿ, ಮನದೊಳಗೆ ಪರಿತಪಿಸಿ,
ಮಂಡಿಯೂರಿ, ಶಿರವ ಬಾಗಿಸಿ, ಯೂಸುಫನ ಹಸ್ತವ ಪಿಡಿದು,
ಕಂಬನಿಗರೆಯುತಿಂತೆಂದ: ‘ಓ ದೊರೆಯೆ, ಈ ತೆರದಿ ನಿಮ್ಮಿಂದ ಬೀಳ್ಕೊಳ್ಳಲಾರೆ.
ನೀವೆನಗೆ, ಇವಗೆ, ನಿಮ್ಮ ಕುವರನ ಕೊಲೆಗೈದ ಕಡುಪಾಪಿ ಇಬ್ರಾಹಿಮ್ಗೆ,
ತೋರಿದ ಕರುಣೆಗೆ, ಮಾಡಿದುಪಕಾರಕ್ಕೆ ಪ್ರತ್ಯುಪಕಾರ ಎಸಗುವೆನು, ನನ್ನಾಣೆ!’
‘ಮೂರ್ಪಟ್ಟು ಹೊನ್ನ ತೆಗೆದುಕೋ,’ ಮಾರುತ್ತರಿಸಿದ,
‘ಇದ ಕೊಂಡು ಮರುಭೂಮಿಯಲಿ ದೂರ ನಡೆ, ಹೋಗು ಮರಳಿ ಬಾರದೆಡೆ!
ನನ್ನ ಕೆಟ್ಟ ಯೋಚನೆಯಾಂದು ನಿನ್ನೊಡನೆ ತೊಲಗುವುದು.
ಓ ನನ್ನ ಜೇಷ್ಠಪುತ್ರನೇ, ನಿನಗಾಗಿ ಹಗಲಿರುಳು ಪರಿತಪಿಸುತಿರುವೆ.
ನಿನ್ನ ಮರಣವು ದೈವೇಚ್ಛೆಯಲ್ತೆ ! ಇಂದು ನಿನ್ನ ಸಾವಿನ ಸೇಡು ತೀರಿತು.
ಓ ಕುವರ, ಚಿರಶಾಂತಿಯಲಿ ನಿದ್ರಿಸು!’
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications