ಹವ್ಯಕ ಬ್ರಾಹ್ಮಣ ವಿವಾಹಗಳ ಮುಖ್ಯ ವಿಧಿಗಳು

ಓಹ್ .. ಎಂಥಾ ಸುಂದರ ಮಾತುಗಳು. ವಧುವಿನ ಹೃದಯಕ್ಕೆ ಎಷ್ಟು ಸಂತೋಷ, ತೃಪ್ತಿ, ಆನಂದವನ್ನು ನೀಡಿದ ಈ ಮಾತುಗಳಿಗೆ, ನಮ್ಮ ಸಮಾಜ ಒಂದು ನಿರ್ದಿಷ್ಟ ಕಾಲಾವಧಿಯನ್ನು ನೀಡಿ, ಒಂದು ವೇಳೆ ಆಕೆ ಏಕಾಂಗಿಯಾಗಿರುವ ಸಮಯ ದುರದೃಷ್ಟದಿಂದ ಒದಗಿದರೆ, ಆ ಮಂಗಲಸೂತ್ರವನ್ನೂ, ಆಕೆಯ ಸುಮಂಗಲೀತನವನ್ನು ನಿರ್ದಯರಾಗಿ ಕಿತ್ತುಕೊಳ್ಳುವುದೇ? ವರನ ಹೇಳಿಕೆಗೆ ಬೆಲೆ ಇಷ್ಟೆಯೋ? ಇದಕ್ಕೆ ನಾನು ಎನ್ನೆನಲಿ? ಪ್ರೀತಿ, ಕರುಣೆ, ಪ್ರೇಮ, ಪರಸ್ಪರ ವಿಶ್ವಾಸದ ಸಹಜೀವನ ಗೌರವವನ್ನು ಕೊಟ್ಟು-ತೆಕ್ಕೊಳ್ಳುವುದು ಇಂಥಾ ಗುಣವುಳ್ಳ ನಮ್ಮ ಆತ್ಮ ಮತ್ತು ಪರಮಾತ್ಮ ಒಬ್ಬನೇ ಅಲ್ಲವೇ?
ನಾವು ಜ್ಞಾನವನ್ನು ಬೆಳಸಿಕೊಳ್ಳೋಣ, ಒಳ್ಳೆಯವರಾಗಿ ಬಾಳೋಣ, ಸಹಜೀವನದಲ್ಲಿ ಕಷ್ಟ ಸುಖಗಳನ್ನು ಹಂಚಿ ಕೊಳ್ಳೋಣ, ನಾವಿಬ್ಬರು ಒಂದೇ ನಿನ್ನನ್ನು ನಾನು ಎಂದೆಂದೂ ಕೈ ಬಿಡಲಾರೆ, ನೀನು ನನ್ನ ಹೃದಯ ದೇವತೆ, ನನ್ನ ಮನೆಯ ಭಾಗ್ಯಲಕ್ಷ್ಮಿ. ಇಂಥಾ ಹೃದಯಸ್ಪರ್ಶಿ ಮಾತುಗಳ ವಾಗ್ದಾನವನ್ನು ನೀಡಿ, ವರ ವಧುವಿನ ಕೈ ಹಿಡಿದುಕೊಂಡು ಸಪ್ತಪದಿಯನ್ನು ತುಳಿಯುವಲ್ಲಿ ನಮ್ಮ ಹವ್ಯಕ ವಿವಾಹದ ಮುಖ್ಯ ವಿಧಿಗಳು ಮುಗಿಯುತ್ತದೆ. ಹವ್ಯಕರ ವಿವಾಹ ಸಂಪ್ರದಾಯಕ್ಕೂ ಇತರೇ ಬ್ರಾಹ್ಮಣ ವರ್ಗಗಳ ವಿವಾಹ ಸಂಪ್ರದಾಯಕ್ಕೂ ಇರುವ ವ್ಯತ್ಯಾಸವೇನೆಂದರೆ:
(1) ಹವ್ಯಕರ ವಿವಾಹದಲ್ಲಿ ಸಾಕ್ಷಿಗೆ ಬರುವುದು 'ಜಲ', ಅಗ್ನಿ ಅಲ್ಲ.
(2) ಹವ್ಯಕರಲ್ಲಿ ಹೋಮ ನಡೆಯುವುದು ತಾಳಿ ಕಟ್ಟಿದ ನಂತರ.
(3) ಹವ್ಯಕರಲ್ಲಿ ಮಂಗಳಸೂತ್ರಕ್ಕೆ ಬಳಸುವುದು ಒಂದು ತಾಳಿ, ಆದರೆ ಇತರೇ ಬ್ರಾಹ್ಮಣ ವರ್ಗಗಳಲ್ಲಿ ಬಳಸುವುದು ಎರಡು ತಾಳಿ.
ದಕ್ಷಿಣ ಕನ್ನಡ ಮತ್ತು ಕಾಸರಗೋಡಿನ ಹವ್ಯಕರ ಮಕ್ಕಳ ವಿವಾಹದಲ್ಲಿ "ವರದಕ್ಷಿಣೆ" ಎನ್ನುವ ಪದಗಳೇ ಬಳಕೆಯಲ್ಲಿಲ್ಲ. ಇದನ್ನಂತೂ ಇಲ್ಲಿನ ಹವ್ಯಕ ಹೆಣ್ಣು ಮಕ್ಕಳು ಬಹಳ ಸಂತೋಷದಿಂದ ನೆನಪಿಸುತ್ತಾರೆ, ಗೌರವಿಸುತ್ತಾರೆ. ಇದರಿಂದಾಗಿ ಹೆಣ್ಣು ಮಕ್ಕಳಿಗೆ ತಮ್ಮ ತವರಿನ ಸಂಬಂಧಗಳು ಬಹಳ ಶಾಶ್ವತವಾಗಿ ಉಳಿಯುತ್ತದೆ.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications