''ಸವ್ಯಸಾಚಿ'' ಡಾ ಕೃಷ್ಣಾನಂದ ಕಾಮತರ ಕೃತಿಗಳು ಆನ್ಲೈನಲ್ಲೇ ಲಭ್ಯ
ಶಿಕ್ಷಣತಜ್ಞ, ವಿದ್ವಾಂಸ, ಬರಹಗಾರ, ಛಾಯಾಚಿತ್ರಗ್ರಾಹಕ, ಚಿತ್ರಕಾರ... ಎಲ್ಲವೂ ಆಗಿದ್ದ ಕೃಷ್ಣಾನಂದ ಲಕ್ಷ್ಮಣ ಕಾಮತ್ ಅವರು ಸೃಜನಶೀಲತೆಯ ಪ್ರತಿಬಿಂಬ. ಅವರೊಬ್ಬ ಚಿಕಿತ್ಸಕ ಮನಸ್ಸಿನ ಆಲ್ ರೌಂಡರ್ ಆಗಿದ್ದರು. ಅಪಾರ ಜೀವನಾನುಭವ ತುಂಬಿಕೊಂಡಿದ್ದ ಕಾಮತ್ ಅವರ ನೆನಪಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಗ್ರಂಥಾಲಯವೊಂದು ದಶಕದ ಹಿಂದೆ ಆರಂಭಿಸಲಾಗಿದೆ. ಈಗ ಅವರ ಸಮಗ್ರ ಕೃತಿಗಳು ಆನ್ಲೈನ್ ನಲ್ಲಿ ಲಭ್ಯವಾಗಿದೆ. ಅನುಭವ ಸಮೃದ್ಧವಾದ ಶ್ರೀಮಂತ ಸಾಹಿತ್ಯವನ್ನು ಕ್ರಿಯೇಟೀವ್ ಕಾಮನ್ಸ್ ಅಡಿಯಲ್ಲಿ ವಾಣಿಜ್ಯೇತರ ಉಪಯೋಗಕ್ಕೆ ಬಳಸಬಹುದು.
ಲೇಖಕ- ವಿಜ್ಞಾನಿಯಾಗಿ ಮಾತ್ರವಲ್ಲದೆ ಛಾಯಾಗ್ರಾಹಕರಾಗಿ, ಚಿತ್ರಕಾರರಾಗಿ, ಸಾಂಸ್ಕೃತಿಕ ರಾಯಭಾರಿ, ಪರಿಸರ-ಪ್ರಾಣಿ ಜಗತ್ತು ಪರಿಚಯಿಸಿದ ಸಾಹಿತಿ ಎನಿಸಿಕೊಂಡವರು. ಡಾಟ್ಕಾಂ ಜಗತ್ತಿನಲ್ಲಿ ಕಾಮತ್.ಕಾಂ ದೊಡ್ಡ ಹೆಸರು. ಸಾಂಸ್ಕೃತಿಕ ಜಾಲ ತಾಣವಾಗಿ ತನ್ನದೇ ಆದ ಛಾಪನ್ನು ವೆಬ್ ಲೋಕದಲ್ಲಿ ಮೂಡಿಸಿದೆ.
ಕೃಷ್ಣಾನಂದ ಕಾಮತ್ ಅವರು ವಿಭಿನ್ನ ವಿಷಯಗಳ ಮೇಲೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಪ್ರವಾಸ ಕಥನ, ಕಲೆ, ಪರಿಸರ, ಪ್ರಬಂಧ, ಕಾದಂಬರಿ, ಪ್ರಾಣಿ ಪಕ್ಷಗಳ ಬಗ್ಗೆ ಕೂಡ ಅನೇಕ ಪುಸ್ತಕಗಳನ್ನು ಅವರು ಬರೆದಿದ್ದಾರೆ. ಅವರು ತಮ್ಮ ಹೆಂಡತಿ ಜ್ಯೋತ್ಸ್ನಾ ಮತ್ತು ಮಗ ವಿಕಾಸ್ ಅವರಿಗೆ ಬರೆದ ಪತ್ರಗಳ ಸಂಕಲನಗಳನ್ನೂ ತಂದಿದ್ದಾರೆ.

ಅವರು ಬರೆದಿರುವ ಪುಸ್ತಕಗಳ ಪಟ್ಟಿ ಇಂತಿದೆ
* ನಾನೂ ಅಮೆರಿಕಾಗೆ ಹೋಗಿದ್ದೆ (ಪ್ರವಾಸ ಕಥನ)
* ಭಗ್ನ ಸ್ವಪ್ನ (ಕಾದಂಬರಿ)
* ವಂಗ ದರ್ಶನ (ಪ್ರವಾಸ ಕಥನ)
* ನಾ ರಾಜಸ್ತಾನದಲ್ಲಿ (ಪ್ರವಾಸ ಕಥನ)
* ಪ್ರಾಣಿ ಪರಿಸರ (ಪರಿಸರ)
* ಕಲಾರಂಗ (ಪ್ರವಾಸ ಕಥನ)
* ಪ್ರೇಯಸಿಗೆ ಪತ್ರಗಳು (ಪತ್ರಗಳು)
* ಪಶು-ಪಕ್ಷಿ ಪ್ರಪಂಚ (ಪ್ರಾಣಿ ಜೀವನ)
* ಬಸ್ತಾರ ಪ್ರವಾಸ (ಪ್ರವಾಸ ಕಥನ)
* ಕೀಟ ಜಗತ್ತು (ಕೀಟಶಾಸ್ತ್ರ)
* ಸಸ್ಯ ಪ್ರಪಂಚ (ಪರಿಸರ)
* ಕವಿಕಲೆ (ಕಲೆ)
* ಮಧ್ಯಪ್ರದೇಶದ ಮಡಿಲಲ್ಲಿ (ಪ್ರವಾಸ ಕಥನ)
* ಸಸ್ಯ ಪರಿಸರ (ಪರಿಸರ)
* ಅಕ್ಷತಾ (ಪ್ರಬಂಧ)
* ದಿ ಟೈಮ್ ಲೆಸ್ ಥಿಯೇಟರ್ (ಮಲ್ಟಿಮೀಡಿಯಾ)
* ಇರುವೆಯ ಇರುವು (ಕೀಟಶಾಸ್ತ್ರ)
* ಕಾಗೆಯ ಕಾಯಕ (ಪ್ರಾಣಿ ಜೀವನ)
* ಕೊಂಕಣ್ಯಗಳೆ ಕವಿಕಾಲ (ಕಲೆ)
* ಪ್ರವಾಸಿಯ ಪ್ರಬಂಧಗಳು (ಪ್ರವಾಸ ಕಥನ)
* ಮರು ಪಯಣ (ನಿರೂಪಣೆ)
* ಸರ್ಪ ಸಂಕುಲ (ಪ್ರಾಣಿ ಜೀವನ)
* ಪತ್ರ ಪರಚಿ (ಪತ್ರಗಳು)
* ನಾ ಕಂಡ ಕರ್ನಾಟಕ (ಪ್ರಬಂಧ)

ಈಗ ಡಿಜಿಟಲ್ ರೂಪದಲ್ಲಿಕೃತಿಗಳು:
ಶಿಕ್ಷಣತಜ್ಞ, ವಿದ್ವಾಂಸ, ಬರಹಗಾರ, ಛಾಯಾ ಚಿತ್ರಗ್ರಾಹಕ, ಚಿತ್ರಕಾರ ಹೀಗೆ ಅವರ ಆಸಕ್ತಿ ಮತ್ತು ತಜ್ಞತೆಯ ಕ್ಷೇತ್ರಗಳು ಹಲವು. ಹವ್ಯಾಸ ಮಟ್ಟದಲ್ಲಿ ತೊಡಗಿಸಿಕೊಂಡ ಕ್ಷೇತ್ರಗಳಲ್ಲಿಯೂ ಅವರು ಗಳಿಸಿದ ಪರಿಣತಿ ಅಪಾರ. ಅವರ 25ಕ್ಕೂ ಹೆಚ್ಚು ಪುಸ್ತಕಗಳ ವೈವಿಧ್ಯಮಯ ವಿಷಯವೇ ಅವರ ವ್ಯಕ್ತಿತ್ವವನ್ನು ಹೇಳಿಬಿಡುತ್ತದೆ. ಇದರಾಚೆಗೆ ಅವರು ತೆಗೆದ ಛಾಯಾಚಿತ್ರಗಳ ಕತೆ ಮತ್ತೊಂದು. ಜೊತೆಗೆ ಅವರೇ ಚಿತ್ರಕಾರರೂ ಆಗಿದ್ದರಿಂದ ಅಲ್ಲಿನ ವಿಸ್ಮಯ ಮತ್ತೊಂದು. ಸಾಹಿತ್ಯ, ಶಿಕ್ಷಣ, ಜೀವ ವಿಜ್ಞಾನ ಹೀಗೆ ಹಲವು ದಿಕ್ಕುಗಳಲ್ಲಿ ಹರಡಿಕೊಂಡಿರುವ ಕೃಷ್ಣಾನಂದ ಕಾಮತರ ಬರೆಹ ಮತ್ತು ಛಾಯಾಚಿತ್ರಗಳನ್ನು ಅವರ ಕುಟುಂಬ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸುತ್ತಿದೆ.

ಅವರ ಪತ್ನಿ ಜ್ಯೋತ್ಸ್ನಾ ಕಾಮತ್ ಮತ್ತು ಪುತ್ರ ವಿಕಾಸ್ ಕಾಮತ್ ಅವರ ತುಂಬು ಹೃದಯದ ಸಹಕಾರದಿಂದಾಗಿ ಡಿಜಿಟಲ್ ರೂಪಕ್ಕಿಳಿಸಲಾಗಿದೆ.ಆ ಪುಸ್ತಕಗಳು ಕ್ರಿಯೇಟೀವ್ ಕಾಮನ್ಸ್ ಅಡಿ ವಾಣಿಜ್ಯೇತರ ಉಪಯೋಗಕ್ಕೆ ಲಭ್ಯವಿರಲಿದೆ ಎಂದು ಸಂಚಯ ಮತ್ತು ಸಂಚಿ ಫೌಂಡೇಶನ್ ಪರವಾಗಿ ಓಂಶಿವಪ್ರಕಾಶ್ ಅವರು ಒನ್ಇಂಡಿಯಾಕ್ಕೆ ತಿಳಿಸಿದರು. ಸಾಹಿತ್ಯ ಆಸಕ್ತರು ಕಾಮತರ ಕೃತಿಗಳನ್ನು ಈ ಲಿಂಕ್ (https://books.kamat.com) ಮೂಲಕ ಓದಬಹುದು.
-
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು












Click it and Unblock the Notifications