ಅಮೂಲ್ಯ ಆತ್ಮಗಳ ಬಂಧ ಸಾರುವ 'ಪ್ರೀಶಿಯಸ್ ಸೋಲ್ಸ್'
ಪುಸ್ತಕಗಳೇ ಹಾಗೆ, ಒಮ್ಮೆ ನಮ್ಮನ್ನು ಹಿಡಿದುಕೊಂಡರೆ ಬಿಡುವುದೆ ಇಲ್ಲ. ಒಬ್ಬ ಮಾನವ ನಿಜವಾದ ಮನುಷ್ಯನಾಗಲು ಏನು ಬೇಕು ಅಥವಾ ಏನು ಮಾಡಬೇಕು ಎಂಬುದನ್ನು ತಿಳಿಸುವ, ಅರಿಕೆ ಮಾಡುವ ಕೃತಿಯೇ "ಪ್ರೀಶಿಯಸ್ ಸೋಲ್ಸ್". ಇದನ್ನು ಕನ್ನಡಕ್ಕೆ ತಂದರೆ ಅಮೂಲ್ಯ ಆತ್ಮಗಳು ಎಂದು ಕರೆದುಕೊಳ್ಳಬಹುದು.
ಬರಹಗಾರ ಡಾ. ಅನಂತ್ ಕೃಷ್ಣನ್ ಆರಂಭದಿಂದಲೂ ಓದುಗನನ್ನು ಹಿಡಿದಿಟ್ಟುಕೊಳ್ಳುತ್ತಾರೆ. ದಿವಾಕರ, ಸುಶ್ಮಿತಾ, ಅಭುಬವಾಸ್ ಅವರ ಪಾತ್ರಗಳ ಮೂಲಕ ಹರಿದು ಬರುವ ಪ್ರತಿಯೊಂದು ಮಾತುಗಳು ಜೀವನದ ಬೆಳಕನ್ನು ಸಾರುತ್ತ ಸಾಗುತ್ತವೆ. [ದ್ವಾಪರ: ಮಹಾಭಾರತಕ್ಕೊಂದು ವಾಸ್ತವದ ವಿಶ್ಲೇಷಣೆ]
ಚಿಕ್ಕ ಚಿಕ್ಕ ತ್ಯಾಗಗಳು ಬೇರೆಯವರ ಬದುಕಿನಲ್ಲಿ ಎಂಥ ಬದಲಾವಣೆಯನ್ನು ತರಬಲ್ಲದು? ಸಂದರ್ಭಗಳನ್ನು ಸರಿಯಾಗಿ ನಿರ್ವಹಿಸುವ ಕಲೆ ಹೇಗೆ? ಎಂಬಂಥ ವಿಚಾರಗಳ ಆಧಾರದಲ್ಲಿಯೇ ಪುಸ್ತಕ ಇಷ್ಟವಾಗುತ್ತದೆ.[ತೆರೆದ ಕಿಟಕಿ' ಬಗ್ಗೆ ಒಂದಿಷ್ಟು]
ನರೆಶನ್ ಸುಲಭ, ಸರಳ ಮತ್ತು ಭಾವನಾತ್ಮಕವಾಗಿದೆ. ದೆವರ ಮಕ್ಕಳು ಎಂದು ಕರೆದಿರುವ ಶಬ್ದ ಅದಕ್ಕೆ ಅನುರೂಪವಾಗಿ ಮಾತನಾಡುವ ಮೂರು ಮಕ್ಕಳ ಸುತ್ತಲಿನ ಕಥೆಗೆ ಸಂಗೀತದ ಟಚ್ ಸಹ ನೀಡಲಾಗಿದೆ.