ನಲ್ಮೆಯ ಅಪ್ಪನ ಬಗ್ಗೆ ಬರೆಯಲೊಂದು ಅದ್ಭುತ ಅವಕಾಶ!
ಮೈತ್ರಿ ಪ್ರಕಾಶನದ ವತಿಯಿಂದ 'ಅಪ್ಪ' ಈ ಅದ್ಭುತದ ಎರಡನೇ ಆವೃತ್ತಿ ಸದ್ಯದಲ್ಲಿಯೇ ಹೊರಬರಲಿದೆ. ಇದಕ್ಕಾಗಿ ಸಹೃದಯ ಕನ್ನಡಿಗರಿಂದ ಲೇಖನಗಳನ್ನು ಆಹ್ವಾನಿಸಲಾಗಿದೆ. ಖ್ಯಾತ ನಾಮರು ಕೂಡ ಲೇಖನಗಳ ಕೊಡುಗೆ ನೀಡಲಿದ್ದಾರೆ.
ಈ ಮೊದಲು ಸಂಪಾದಕ ಹಾಗೂ ಮಿತ್ರ ಗುರುಪ್ರಸಾದ ಕುರ್ತಕೋಟಿ ಅವರ ಸಂಪಾದಕತ್ವದಲ್ಲಿ "ಎಲ್ಲರಂಥವನಲ್ಲ ನನ್ನಪ್ಪ" ಕೃತಿ ತಂದಿದ್ದು, ಅದು ಅಭೂತಪೂರ್ವ ಯಶಸ್ಸು ಗಳಿಸಿದೆ. ಇದರಿಂದ ಸ್ಫೂರ್ತಿಗೊಂಡು ಎರಡನೇ ಆವೃತ್ತಿ ಹೊರಬರುತ್ತಿದೆ.
ಆವಾಗ "ನಾನೂ ಬರೀತಿದ್ದೆ", "ನನಗೂ ಏನೋ ಹೇಳುವುದಿತ್ತು" ಅಂತೆಲ್ಲ ಹಲಬಿ ನಿರಾಶರಾದವರಿಗೆ ಈ ಅವಕಾಶ ತೆರೆದಿದೆ. ಇದು ನಿಮ್ಮ ಪುಸ್ತಕ. ನಿಮ್ಮ ಅಪ್ಪನ ಬಗ್ಗೆ, ಅವನೊಡನೆ ಕಳೆದ ಕ್ಷಣಗಳ ಬಗ್ಗೆ, ಅವನೊಡನೆ ಹಂಚಿಕೊಳ್ಳದೇ ಉಳಿದ ಅನಿಸಿಕೆಗಳ ಬಗ್ಗೆ, ಅವನೊಡನೆ ಆಡದೇ ಉಳಿದು ಹೋದ ಮಾತುಗಳ ಬಗ್ಗೆ..

ಹಾಗೆಯೇ, ಅಪ್ಪನೊಂದಿಗೆ ಸಮಯ ಕಳೆಯಲಾಗಲಿಲ್ಲವೆಂಬ ಪಶ್ಚಾತ್ತಾಪಗಳ ಕುರಿತು, ಕಳೆದ ಪ್ರತಿ ಸಂತಸದ ಘಳಿಗೆಗಳ ಕುರಿತು ನಿಮಗೆ ಅನಿಸಿದ ಭಾವನೆಗಳನ್ನು ದಾಖಲಿಸಿ ನಮಗೆ ಕಳುಹಿಸಿ.. ಅಪ್ಪನ ಕುರಿತು ಸಂಭ್ರಮಿಸಿ.. ಇದೋ ನಿಮಗೆ ಪ್ರೀತಿಯ ಕರೆಯೋಲೆ.
ಹೋದಸಲ 37 ಲೇಖನಗಳು ಬಂದಿದ್ದವು. ಈ ಸಲ 50 ಲೇಖನಗಳಿಗೆ ಅವಕಾಶವಿದೆ. ಅಂತೆಯೇ ಈ ಸಲ ಕೆಲವು ಖ್ಯಾತ ಲೇಖಕರು ಕೂಡ ತಮ್ಮ ಅಪ್ಪಂದಿರ ಕುರಿತು ಬರೆಯಲಿದ್ದಾರೆ. ಅಂತಹ ಖ್ಯಾತನಾಮರ ಜೊತೆ ನಿಮ್ಮ ಲೇಖನವೂ ಇದ್ದರೆ ಎಷ್ಟು ಛಂದ ಅಲ್ಲವೆ?
ನಿಮ್ಮ ಅನಿಸಿಕೆ 1,000 ಪದಗಳ ಒಳಗಿರಲಿ, ನುಡಿ ಅಥವಾ ಯುನಿಕೋಡ್ ಬಳಸಿ ಟಂಕಿಸಿ. ಹೊರದೇಶದ ಕನ್ನಡ ಲಿಪಿ ಮರೆತು ಹೋದವರೂ ಕೂಡ ಇಂಗ್ಲಿಷಿನಲ್ಲಿ ಬರೆದು ಕಳಿಸಿ (ಅನುವಾದ ನಮ್ಮದಾಗಿರುತ್ತದೆ).
ನಿಮ್ಮ ಲೇಖನ ಫೆಬ್ರವರಿ 28ರ ಒಳಗೆ ತಲುಪಿಸಿ. ಕಳುಹಿಸಬೇಕಾದ ವಿಳಾಸ : [email protected]
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications