ಹೊಸ ಚಿಗುರು ಭೂಮಿ ಬುಕ್ಸ್

ಹೊಸ ಪುಸ್ತಗಳು : ಅಭಿವೃದ್ಧಿಯ ಅಂಧಯುಗ, ಟಿಪ್ಪೂ ಖಡ್ಗದ ನ್ಯಾನೊ ಕಾರ್ಬನ್, ಕೊಪೆನ್ ಹೇಗನ್ ಋತು ಸಂಹಾರ.
ಮರುಮುದ್ರಣಗಳು : ಇರುವುದೊಂದೇ ಭೂಮಿ, ಪ್ರತಿದಿನ ಪರಿಸರ ದಿನ ಮತ್ತು ಸುರಿಹೊಂಡ -ಭರತಖಂಡ.
ದಿನಾಂಕ, ಸಮಯ : ಜ.31, ಭಾನುವಾರ, ಬೆಳಗ್ಗೆ 10ಕ್ಕೆ.
ಸ್ಥಳ : ಇಂಡಿಯನ್ ಇನ್ ಸ್ಟಿಟ್ಯೂಟ್ ಆಪ್ ವರ್ಲ್ಡ್ ಕಲ್ಚರ್, ಬಿಪಿ ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು.
ಕಾರ್ಯಕ್ರಮದ ವಿಶೇಷತೆಗಳು :
ಅಂದು ಉದಯವಾಗುತ್ತಿರುವ 'ಭೂಮಿ ಬುಕ್ಸ್' ಒಂದು ವಿಶೇಷ ಸಂಪ್ರದಾಯಕ್ಕೆ ನಾಂದಿ ಹಾಡಲಿದೆ. ಪರಿಹಾರ ಅನ್ನಿ ಅಥವಾ ಪಶ್ಚಾತ್ತಾಪವೇ ಅನ್ನಿ, ಭೂಮಿ ಬುಕ್ಸ್ ನಿಂದ ಪ್ರಕಟವಾಗುವ ಪ್ರತಿಯೊಂದು ಪುಸ್ತಕದ ಪ್ರತಿಯೊಂದು ಆವೃತ್ತಿಗೂ ಒಂದೊಂದು ಗಿಡವನ್ನು ನೆಟ್ಟು ಅದನ್ನು ಅರ್ಧಕ್ಕೇ ನಿಲ್ಲಿಸದೆ 'ಪೂರ್ತಿ ಬೆಳೆಸುವ' ಹೊಣೆಗಾರಿಕೆಯನ್ನು ಹೊರಲಿದೆ. ಅಷ್ಟೊಂದು ಕಾಗದವನ್ನು ವಿನಿಯೋಗಿಸಿದ್ದಕ್ಕೆ ಈ ಪ್ರಕಾಶನದವರು ಸಮಾಜಕ್ಕೆ ನೀಡುವ ವಚನ ಅದಾಗಿರುತ್ತದೆ.
ಎರಡನೆಯ ವಿಶೇಷ ಏನೆಂದರೆ ಕರ್ನಾಟಕ ಸರಕಾರದ ಇಬ್ಬರು (ನಿವೃತ್ತ) ಅಭಿವೃದ್ಧಿ ಆಯುಕ್ತರು ಅಂದು ಸಸ್ಯಸ್ವೀಕಾರದೊಂದಿಗೆ ಒಂದು ಘೋಷಣೆ ಮಾಡುವ ನಿರೀಕ್ಷೆ ಇದೆ. ನಮ್ಮ ರಾಜ್ಯದ ಬೇರೆ ಯಾವುದೇ ಪುಸ್ತಕ ಪ್ರಕಾಶಕರು ಹೀಗೇ ವಚನಬದ್ಧರಾಗುವುದಾದರೆ, ತಿಪ್ಪಗೊಂಡನಹಳ್ಳಿಯ ಜಲಾಶಯದ ಬಳಿ ಅದಕ್ಕೆಂದೇ ಒಂದು ಪ್ರತ್ಯೇಕ ಸ್ಥಳವನ್ನು ನಿಗದಿಗೊಳಿಸಿ 'ಪುಸ್ತಕವನ' ನಿರ್ಮಾಣ ಮಾಡಲು ಸರಕಾರವೇ ನೇಮಕ ಮಾಡಿದ 'ಸ್ಫೂರ್ತಿವನ' ಸಮಿತಿ ಅದಕ್ಕೆ ಅನುವು ಮಾಡಿಕೊಡುತ್ತದೆ. ಅದು ಈ ಭೂಮಿಯ ಒಂದು ವಿಶಿಷ್ಟ ತಾಣವಾಗಲಿದೆ.
ಮೂರನೆಯದಾಗಿ, 'ಅಭಿವೃದ್ಧಿಯ ಅಂಧಯುಗ' ಕೃತಿಯ ಸಂಪೂರ್ಣ ಚಿತ್ರಗಳನ್ನು ಲೇಖಕರೇ (ಸಿದ್ಧಪಡಿಸಿರುವುದು. ಕೃತಿಯ ಆರಂಭ ಮತ್ತು ಅಂತ್ಯದ ಲೇಖನಗಳು ಕಥಾಚಕ್ರದ ಮಾದರಿಯಲ್ಲಿವೆ. ಮುನ್ನುಡಿಯಲ್ಲಿ ಅದರ ಬಗೆಗೆ ವಿವರಣೆಯಿದೆ.
ಅಂದು ಬಿಡುಗಡೆಯಾಗುವ ಮೂರೂ ಕೃತಿಗಳಿಗೆ ಪ್ರಕಟನೆಯ ಮುಂಚಿನ ಯಾವ ಹಂತದಲ್ಲೂ ಒಂದೇ ಒಂದು ಹಾಳೆ ಕಾಗದವನ್ನು ಬಳಸಿಲ್ಲ. ಕೊಪೆನ್ ಹೇಗನ್ 'ಋತುಸಂಹಾರ' (ಮೂಲ ಕಾಳಿದಾಸನ ಕೃತಿಯಲ್ಲಿ 'ಸಂಹಾರ' ಅಂದರೆ ಕಟ್ಟುವುದು, ಒಂದುಗೂಡಿಸುವುದು ಎಂಬ ಅರ್ಥವಿದ್ದರೆ ಇಲ್ಲಿ ಸಂಹರಿಸುವುದು ಎಂಬ ಅರ್ಥದಲ್ಲಿ ಶಿರೋನಾಮೆ ನೀಡಲಾಗಿದೆ). ಈ ಪುಸ್ತಕ ಅಚ್ಚಿನ ಮನೆಗೆ ಹೋಗುವ ಐದು ದಿನ ಮುಂಚಿನ ಹಠಾತ್ ಬೆಳವಣಿಗೆಯನ್ನೂ ಕೃತಿಯಲ್ಲಿ ಅಳವಡಿಸಲಾಗಿದೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications