ಅಂಧರಿಗೆ ಬೆಳಕಾಗಬಲ್ಲ 'ಸ್ಟೆಮ್ ಸೆಲ್' ಥೆರಪಿ

ಸ್ಟೆಮ್ಸೆಲ್ ಸಂಶೋಧನೆಗಳ ಕುರಿತಾಗಿರುವ ಒಂದು ಪ್ರತಿಷ್ಠಿತ ಆನ್ಲೈನ್ ಜರ್ನಲ್ನಲ್ಲಿ ಈ ಕುರಿತ ಸಂಶೋಧನೆಯ ವಿವರಗಳು ಜೂನ್ 15ರಂದು ಪ್ರಕಟಗೊಂಡಿವೆ. ಈ ಸಂಶೋಧನೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ತಯಾರಿಸಿದ ಇಂಡ್ಯೂಸ್ಡ್ ಪ್ಲ್ಯೂರಿಪೊಟೆಂಟ್ ಸ್ಟೆಮ್ (induced pluripotent stem) (iPS) ಸೆಲ್ಗಳನ್ನು ಬಳಸಿ ಒಂದು ವಿರಳ ಅನುವಂಶೀಯ ಖಾಯಿಲೆಯಾದ ಜೆಯ್ರೇಟ್ ಆಟ್ರಫಿ (gyrate atrophy) ಅನ್ನು ಗುಣಪಡಿಸಲಾಗಿದೆ. ಈ ಕಾಯಿಲೆಯು 'ರೆಟಿನಲ್ ಪಿಗ್ಮೆಂಟ್ ಎಪಿಥೀಲಿಯಮ್' (retinal pigment epithelium) (RPE) ಸೆಲ್ಗಳನ್ನು ನಾಶಪಡಿಸಿ ಅಂಧತ್ವವನ್ನುಂಟು ಮಾಡುತ್ತದೆ. ಇವುಗಳು ರೆಟಿನಾದಲ್ಲಿನ 'ಫೋಟೋ ರಿಸೆಪ್ಟಾರ್' ಸೆಲ್ಗಳ ಕಾರ್ಯನಿರ್ವಹಣೆಯಲ್ಲಿ ತುಂಬಾ ಮಹತ್ವದ ಪಾತ್ರ ವಹಿಸುತ್ತವೆ.
ಈ ಫೋಟೋ ರಿಸೆಪ್ಟಾರ್ ಸೆಲ್ಗಳು ರೆಟಿನಾದ ಮೇಲೆ ಬಿದ್ದ ಬೆಳಕನ್ನು ಸಂಕೇತ ರೂಪಕ್ಕೆ ಪರಿವರ್ತಿಸಿ ಮೆದುಳಿಗೆ ಕಳಿಸುವಲ್ಲಿ ನೆರವಾಗುತ್ತವೆ. ಈ ಸಂಕೇತಗಳನ್ನು ಮೆದುಳು ಗ್ರಹಿಸಿ ಅವುಗಳನ್ನು ಅರ್ಥೈಸಿಕೊಳ್ಳುತ್ತದೆ. ಆದರೆ 'ರೆಟಿನಲ್ ಪಿಗ್ಮೆಂಟ್ ಎಪಿಥೀಲಿಯಮ್' ಸೆಲ್ಗಳ ತೊಂದರೆಯಿಂದಾಗಿ ಫೋಟೋ ರಿಸೆಪ್ಟಾರ್ ಸೆಲ್ಗಳು ಸರಿಯಾಗಿ ಕೆಲಸ ಮಾಡದೇ ಕುರುಡತ್ವ ಉಂಟಾಗುತ್ತದೆ. ಹಾಳಾದ 'ರೆಟಿನಲ್ ಪಿಗ್ಮೆಂಟ್ ಎಪಿಥೀಲಿಯಮ್' ಸೆಲ್ಗಳನ್ನು ಪುನರ್ನಿರ್ಮಾಣ ಮಾಡುವುದರಿಂದ ಈ ಕಾಯಿಲೆಯಿಂದಾಗಿ ಅಂಧನಾದ ವ್ಯಕ್ತಿಯ ಜೀವನದಲ್ಲಿ ಮತ್ತೆ ಬೆಳಕು ಮೂಡಿಸಬಹುದು.
"ನಾವು ಇಂಡ್ಯೂಸ್ಡ್ ಪ್ಲ್ಯೂರಿಪೊಟೆಂಟ್ ಸ್ಟೆಮ್ ಸೆಲ್ಗಳನ್ನು ತಯಾರಿಸಿ, ಈ ಕಾಯಿಲೆಗೆ ಕಾರಣವಾದ ಒಂದು ಬಗೆಯ ವಂಶವಾಹಿ ತೊಂದರೆಯನ್ನು ಸರಿಪಡಿಸಿ, ಈ ಇಂಡ್ಯೂಸ್ಡ್ ಪ್ಲ್ಯೂರಿಪೊಟೆಂಟ್ ಸ್ಟೆಮ್' ಸೆಲ್ಗಳು ರೆಟಿನಲ್ ಪಿಗ್ಮೆಂಟ್ ಎಪಿಥೀಲಿಯಮ್' ಸೆಲ್ಗಳಾಗಿ ಬೆಳೆಯುವಂತೆ ಮಾಡಿದಾಗ ಈ ಸೆಲ್ಗಳು ಸ್ವಾಬಾವಿಕವಾಗಿ ಕಾರ್ಯನಿರ್ವಹಿಸಿದವು. ಈ ಫಲಿತಾಂಶವು ತುಂಬಾ ಉತ್ತೇಜನಕಾರಿಯಾದುದು ಯಾಕೆಂದರೆ ಸರಿಯಾಗಿಲ್ಲದ ಒಂದು ಸಂಕೀರ್ಣ ವ್ಯವಸ್ಥೆಯನ್ನೂ ಸಹ ನಾವು ಸರಿಪಡಿಸಬಹುದು, ಅಲ್ಲದೇ ಭವಿಷ್ಯದಲ್ಲಿ ಸರಿಯಾಗಿ ಕಾರ್ಯನಿರ್ವಹಿಸದ ಅಥವಾ ನಿಶ್ಪ್ರಯೋಜಕವಾಗಿರುವ ರೆಟಿನಾದ ಸೆಲ್ಗಳನ್ನೂ ಈ ಚಿಕಿತ್ಸೆಯಿಂದ ಸರಿಪಡಿಸಬಹುದು" ಎಂದು ಅಧ್ಯಯನದ ನೇತೃತ್ವ ವಹಿಸಿರುವ ಕೋಷ ಜೀವಶಾಸ್ತ್ರಜ್ಞ ಹಾಗು ಇಂಡ್ಯಾನ ವಿಶ್ವವಿದ್ಯಾನಿಲಯದ 'ಸ್ಕೂಲ್ ಆಫ್ ಸೈನ್ಸ್'ನ ಜೀವಶಾಸ್ತ್ರದ ಸಹಾಯಕ ಪ್ರೊಫೆಸರ್ ಡಾ|| ಜೇಸನ್ ಮೇಯರ್ ತಿಳಿಸಿದರು.
ಮ್ಯಾಕ್ಯುಲಾರ್ ಡಿಜನರೇಶನ್ ಒಂದು ಸಾಮಾನ್ಯ ಕಣ್ಣಿನ ಕಾಯಿಲೆಯಾಗಿದ್ದು ವಿಶ್ವದಲ್ಲಿನ ಸುಮಾರು 25-30 ಮಿಲಿಯನ್ ಜನರು ಈ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಸುಮಾರು 1.5 ಮಿಲಿಯನ್ ಜನರು ರೆಟಿನೈಟಿಸ್ ಪಿಗ್ಮೆಂಟೋಸ ರೋಗದಿಂದ ಬಳಲುತ್ತಿದ್ದಾರೆ. ಈ 'ಇಂಡ್ಯೂಸ್ಡ್ ಪ್ಲ್ಯೂರಿಪೊಟೆಂಟ್ ಸ್ಟೆಮ್' ಸೆಲ್ಗಳನ್ನು ಅದೇ ರೋಗಿಗಳಿಂದ ಪಡೆದುಕೊಳ್ಳುವುದರಿಂದಾಗಿ ಮುಂದೆ ಯಾವುದೇ 'ಟ್ರಾನ್ಸ್ಪ್ಲಾಂಟ್ ರಿಜಕ್ಷನ್' ಅಂತಹ ಸಮಸ್ಯೆಗಳು ತಲೆದೋರುವುದಿಲ್ಲ. ಒಟ್ಟಿನಲ್ಲಿ ಹೇಳುವುದಾದರೆ ವಿಜ್ಞಾನದ ಇಂತಹ ಅವಿಷ್ಕಾರಗಳು ಮನುಕುಲದ ಅನೇಕ ಸಮಸ್ಯೆಗಳನ್ನು ಬಹುಮಟ್ಟಿಗೆ ನಿವಾರಿಸುವಲ್ಲಿ ಮಹತ್ವದ ಕೊಡುಗೆ ನೀಡುತ್ತಿವೆ. ಇನ್ನೂ ಹೆಚ್ಚು ಹೆಚ್ಚು ಇಂತಹ ಸಂಶೋಧನೆಗಳು ನಡೆದು ಬೆಳಕನ್ನೇ ಕಾಣದವರ ಬಾಳನ್ನು ಬೆಳಗಲಿ ಎಂದು ಆಶಿಸೋಣ ಅಲ್ಲವೇ? (ಕೃಪೆ : ©Science Daily.com)
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications