122623jayanthiಸ್ಯಾಂಡಲ್‌ವುಡ್ 2008 ಗೋಚಾರಫಲ/movies/headlines/2009/01/01-kannada-movies-2008-birds-eye-view.html*ಜಯಂತಿಸೆನ್ಸಾರ್ ಆದ ಚಿತ್ರಗಳ ಸಂಖ್ಯೆ ನೂರಾ ಐವತ್ತೆರಡು. ತೆರೆಕಂಡ ಚಿತ್ರಗಳು 118. ಸೆನ್ಸಾರ್ ಮಂಡಳಿ ಅಧ್ಯಕ್ಷ ಚಂದ್ರಶೇಖರ್ ಅವರ ಲ್ಯಾಪ್‌ಟಾಪ್‌ನಲ್ಲಿನ ಅಂಕಿಅಂಶಗಳ ಪ್ರಕಾರ ಹೇಳುವುದಾದರೆ- ಯಶಸ್ಸಿನ ಪ್ರಮಾಣ ಶೇ.8-9ರ ನಡುವೆ ಗಿರಕಿ ಹೊಡೆಯುತ್ತಿದೆ. ಹಳೆಯ ಮುಖಗಳಿಗೆ 2008 ಹೇಳಿಕೊಳ್ಳುವಂಥ ವರ್ಷವೇನಲ್ಲ. ತಾರೆಗಳ ಗ್ರಹಗತಿ ಹೀಗಿದೆ ನೋಡಿ: ವಿಷ್ಣುವರ್ಧನ್: 2008ರಲ್ಲಿ ಒಂದೂ ಸಿನಿಮಾ ತೆರೆಕಾಣಲಿಲ್ಲ. ಶಿವರಾಜ್‌ಕುಮಾರ್: ಸತ್ಯ ಇನ್ 33815http://kannada.oneindia.com/img/2009/01/01-vishnu-yejamanru1e.jpg122623jayanthiರಾಜ್ ನಲ್ಲಿ ಬೆಳ್ಳಿತೆರೆಯ ಬಂಗಾರಿಯರ ಥೈಥೈ/movies/hero/2009/01/09-puneet-rajkumar-dance-with-rajkumar-heroines.htmlನಿರ್ದೇಶಕ ಪ್ರೇಮ್ ಚಿತ್ರಗಳೆಂದರೆ ಏನೋ ಹೊಸತನ ಇದ್ದೇ ಇರುತ್ತದೆ. ಥರಾವರಿ ಗಿಮಿಕ್ ಗಳನ್ನುಮಾಡಿಕೊಂಡೆ ಜನಪ್ರಿಯರಾದವರು. ಚಿತ್ರೀಕರಣವಾಗುತ್ತಿರುವ ಅವರ ಹೊಸ ಚಿತ್ರ 'ರಾಜ್ ದಿ ಶೋ ಮ್ಯಾನ್'ನಲ್ಲೂ ಅವರ ಗಿಮಿಕ್ ಮುಂದುವರಿದೆ.ರಾಜ್ ಕುಮಾರ್ ಅವರೊಂದಿಗೆ ನಟಿಸಿದ್ದ ಒಂದು ಕಾಲದ ನಟಿಯರಾದ ಖ್ಯಾತ ನಟಿಯರಾದ ಜಯಂತಿ, ಭಾರತಿ, ಜಯಪ್ರದಾ,ಡಾ.ಜಯಮಾಲಾ ಹಾಗೂ ಊರ್ವಶಿ ಈಗ ಪುನೀತ್ ರೊಂದಿಗೆ 'ರಾಜ್' ಚಿತ್ರದಲ್ಲಿ ಹೆಜ್ಜೆ 33984http://kannada.oneindia.com/img/2009/03/17-puneet4.jpg122623jayanthiಹೊಸ ನಿರ್ದೇಶಕರೆಲ್ಲಾ ಅಡ್ಡಕಸುಬಿಗಳು: ರಾಜೇಂದ್ರ ಸಿಂಗ್ ಬಾಬು/movies/headlines/2009/01/20-piece-of-advice-to-young-movie-directors.html*ಜಯಂತಿಹಳೆ ತಲೆಗಳ ಕಾಲ ಮುಗೀತು ಸ್ವಾಮಿ. ಹೊಸ ತಂತ್ರಜ್ಞಾನ ಬಂದಿದೆ. ಮಾರುಕಟ್ಟೆ ಸ್ಟ್ರಾಟಜಿ ಬದಲಾಗಿದೆ. ಪಿಕ್ಚರ್ ಆಯುಸ್ಸು ಈಗ ಮೂರೇ ತಿಂಗಳು. ಅಷ್ಟರಲ್ಲಿ ಹಣ ಮಾಡಿಕೋಬೇಕು. ನಮ್ಮ ಹಳೆ ತಲೆಗಳಿಗೆ ಅದು ಗೊತ್ತೇ ಇಲ್ಲ. ಅವರೆಲ್ಲಾ ಇಂಡಸ್ಟ್ರಿಯಿಂದ ಜಾಗ ಖಾಲಿ ಮಾಡೋದು ವಾಸಿ: ಶಶಾಂಕ್ಗಾಂಧಿನಗರದಲ್ಲಿ ಈಗ ಮೇಕರ್ಸ್ ಅಂತ ನಾಲ್ಕೇ ಜನ ಇದ್ವಿ. ಈಗ ನೀನು ಸೇರಿಕೊಂಡಿದೀಯ 34173http://kannada.oneindia.com/img/2009/01/20-yogarajbhat2e.jpg122623jayanthiಭಕ್ತ ಸಿರಿಯಾಳ ಖ್ಯಾತಿ ಚಂದೂಲಾಲರ ಹೊಸ ಚಿತ್ರ/movies/headlines/2009/01/23-chandulal-jains-new-kannada-movie-videshi.htmlಸಾವಿನ ಕದ ತಟ್ಟಿ ಬದುಕಿ ಬಂದ ನಿರ್ಮಾಪಕ ಚಂದೂಲಾಲ್ ಜೈನ್ ಕೈಲಿ ಗುಟ್ಕಾ ಹಿಡಿದಿದ್ದರು. ಅನತಿ ದೂರದಲ್ಲಿ ಅವರ ಮಡದಿ. ಆಕೆ ಎಲ್ಲಿ ನೋಡಿಯಾರೋ ಎಂಬ ಧಾವಂತದಲ್ಲಿಯೇ ಗುಟ್ಕಾವನ್ನು ಬಾಯಿಗೆ ಇಳಿಸಿದರು. ಅದು, ಅವರ ಎಪ್ಪತ್ತನಾಲ್ಕನೇ ಹುಟ್ಟುಹಬ್ಬದ ಔತಣಕೂಟ. ದಾಂಪತ್ಯ ಜೀವನಕ್ಕೆ ಕಾಲಿಟ್ಟು ಐವತ್ತು ವರ್ಷ ಸರಿದ ಸಂತೋಷವೂ ಬೆರೆತಿತ್ತು. ಯುಗಳ ಸಂಭ್ರಮದ ಕಾರ್ಯಕ್ರಮ ನಡೆದದ್ದು, ಗುರುವಾರ 34249http://kannada.oneindia.com/img/2009/01/23-chandulal-jain1.jpg122623jayanthiನಾಯಕ ನಟರಿಗೆ ದ್ವಾರಕೀಶ್ ಛೀಮಾರಿ/movies/controversy/2009/01/30-dwarakish-blames-kannada-heroes-for-down-fall.html*ಜಯಂತಿಒಂದಲ್ಲ ಎರಡಲ್ಲ ಮೂರಲ್ಲ, ಸರೀಗೆ ಐದು ವರ್ಷ ಆಯಿತು. ನೆನಪಿಟ್ಟುಕೊಳ್ಳುವಂಥ ಇನ್ನೊಂದು ಚಿತ್ರನವನ್ನು ವಿಷ್ಣುವರ್ಧನ್ ಕೊಟ್ರಾ? ಆಪ್ತಮಿತ್ರನಂಥ ಯಶಸ್ವಿ ಚಿತ್ರದ ನಂತರವೂ ಅವರು ಸುಮ್ಮನಾದರಲ್ಲ, ಯಾಕೆ? ಯಾಕೆ ? ಈ ಕನ್ನಡದ ನಟರೇ ಹೀಗೆ. ಹಿರಿಯ ನಟರೇ ಹೀಗೆ ವರ್ತಿಸಿದರೆ ಇನ್ನು ಕಿರಿಯರ ಗತಿಯೇನು ? ಸೂಪರ್ ಹಿಟ್ ಚಿತ್ರ ಕೊಟ್ಟರೂ ಕೂಡ 34379http://kannada.oneindia.com/img/2009/01/30-dwarakish3e.jpg37312ಮೈಸೂರುಬರುತ್ತಿದೆ : ಜನಾನು'ರಾಗಿ' ಮುದ್ದೆ ಮಿಶಿನ್ನು/recipe/culture/2008/0701-ragi-ball-vending-machine.htmlಬರುತ್ತಿದೆ ರಾಗಿ ಮುದ್ದೆ ಮಾಡೊ ಟೇಬಲ್ ಚಾಪ್ ಮಿಶಿನ್..! ಹೌದು ಹೌದೂ, ಈ ಸುದ್ದಿ ಕೇಳಿದ ಹೆಂಗಸರು ಹೌದಾ ಹೌದಾ ಅಂತ ಸುಮ್ಮಸುಮ್ಮನೆ ಆಶ್ಚರ್ಯ ಪಡ್ತಾಯಿದ್ದಾರಂತೆ ರೀ. ಹೌದೇನ್ರೀ ಮುದ್ದೇ ಮಾಡಕ್ಕೂ ಮಿಶಿನ್ ಬಂದ್ ಬುಡ್ತಾ? ಏನ್ ಕಾಲ ಬಂತ್ರೀ ಅಂತ ಮೇಲ್ನೋಟಕ್ಕೆ ಡೂಪ್ಲಿಕೇಟ್ ಹುಬ್ಬು ಹಾರಿಸಿದರೂ ಒಳಗೊಳಗೆ ಕೆಲಸ ಕಮ್ಮಿ ಆಯ್ತಲ್ಲ ಅಂತ ಖುಷಿ ಬೀಳ್ತಾಯಿದ್ದಾರೇಂತಲೂ 1996http://kannada.oneindia.com/img/2009/07/28-raagimudde-machine1.jpg37312ಮೈಸೂರುಮೈಸೂರು: ತುರ್ತು ಅಗತ್ಯಕ್ಕೆ ತಕ್ಷಣ ಮಾಹಿತಿ/news/2009/01/04/yeddyurappa-helpline-crisis-management-mysore.htmlಮೈಸೂರು, ಜ. 4 : ಮೈಸೂರು ಜಿಲ್ಲೆಯಲ್ಲಿ ತುರ್ತು ನಿರ್ವಹಣೆಗಾಗಿ ನಿಯಂತ್ರಣ ಸಹಾಯವಾಣಿ ಕೊಠಡಿಯೊಂದನ್ನು ಮುಖ್ಯಮಂತ್ರಿ ಡಾ ಬಿ ಎಸ್ ಯಡಿಯೂರಪ್ಪ ಇಂದು ಉದ್ಘಾಟಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು ಜಿಲ್ಲೆಯ ತುರ್ತು ಅಗತ್ಯಗಳ ಸಂದರ್ಭದಲ್ಲಿ ಎಲ್ಲ ಪ್ರದೇಶಗಳಿಂದ ತಕ್ಷಣ ಮಾಹಿತಿ ಈ ವ್ಯವಸ್ಥೆಯಿಂದ ಲಭ್ಯವಾಗಲಿದೆ. ಶೀಘ್ರಗತಿಯಿಂದ ನಿರ್ವಹಣೆ ಸಾಧ್ಯವಾಗುವುದು. ಈ ನಿರ್ವಹಣೆಯಲ್ಲಿ ಎಲ್ಲ ಇಲಾಖೆಗಳ ಸಹಯೋಗವಿದೆ. 33868http://kannada.oneindia.com/img/2009/01/04-helpline-mysore.jpg37312ಮೈಸೂರುರಾಕ್ ಪ್ರಿಯರೇ ಸ್ವರಾತ್ಮ ಅಲ್ಬಂ ಕೇಳಿ: ಮನೋಮೂರ್ತಿ/movies/music/2009/01/06-manomurthy-launches-swarathma-band-debut-album.htmlಬೆಂಗಳೂರು ಮೂಲದ ಸ್ವರಾತ್ಮ ರಾಕ್/ಫ್ಯೂಷನ್ ಬ್ಯಾಂಡ್ ತನ್ನ ಮೊತ್ತಮೊದಲ ಮ್ಯೂಸಿಕ್ ಅಲ್ಬಂ ಅನ್ನು ಹೊರತಂದಿದೆ. ಸೋಮವಾರ ನಗರದ ಪ್ಯಾಲೇಸ್ ಮೈದಾನದ ಬಳಿಯ ಒಪಾಸ್ ನಲ್ಲಿ ನಡೆದ ವರ್ಣರಂಜಿತ ಕಾರ್ಯಾಕ್ರಮದಲ್ಲಿ ಸ್ವರಾತ್ಮ ತಂಡದ ಅಲ್ಬಂ ಅನ್ನು ಅನಾವರಣಗೊಳಿದವರು ಮುಂಗಾರು ಮಳೆ ಖ್ಯಾತಿಯ ಸಂಗೀತ ನಿರ್ದೇಶಕ ಮನೋಮೂರ್ತಿ. ತಂಡಕ್ಕೆ ಶುಭ ಹಾರೈಸಲು ಮತ್ತೊಬ್ಬ ಜನಪ್ರಿಯ ಸಂಗೀತ ನಿರ್ದೇಶಕ ಗುರುಕಿರಣ್ ಆಗಮಿಸಿದ್ದರು.ಸ್ವರಾತ್ಮ 33919http://kannada.oneindia.com/img/2009/01/06-swarathma-mano-murthy1.jpg37312ಮೈಸೂರುಸತ್ಯಂ ರಾಜುಗಿಂತ ಖೇಣಿ ದೊಡ್ಡ ವಂಚಕ :ಗೌಡ್ರು /news/2009/01/09/kheni-is-big-fraud-than-satyam-raju-devegowda.htmlಬೆಂಗಳೂರು, ಜ. 9 : ಭಾರತೀಯ ಎನ್ರಾನ್ ಎಂದೇ ಕುಖ್ಯಾತಿ ಗಳಿಸಿರುವ ಸತ್ಯ ಕಂಪನಿಯ ಅವ್ಯವಹಾರದ ಕುರಿತು ದೇಶದಲ್ಲಿ ಭಾರಿ ಚರ್ಚೆ ನಡೆಯತೊಡಗಿದೆ. ಈ ಹಗರಣಕ್ಕೆ ಮಾಜಿ ಪ್ರಧಾನಮಂತ್ರಿ ದೇವೇಗೌಡರು ನೀಡುವ ಉತ್ತರ ಎಲ್ಲರೂ ಹುಬ್ಬೇರಿಸುವಂತಿದೆ. ಸತ್ಯಂ ಕಂಪನಿಯ ಚೇರಮನ್ ರಾಮಲಿಂಗರಾಜು ಕೇವಲ ಏಳು ಸಾವಿರ ಕೋಟಿ ರುಪಾಯಿ ಅವ್ಯವಹಾರ ನಡೆಸಿದ್ದಾರೆ. ಆದರೆ, ನೈಸ್ ಕಂಪನಿಯ ಅಶೋಕ್ 33994http://kannada.oneindia.com/img/2009/01/09-devegowda6e.jpg37312ಮೈಸೂರುಕಾಪನಹಳ್ಳಿ ಗವಿಮಠ ಸಂಭ್ರಮದ ಜಾತ್ರೆ/news/2009/02/11/gavimath-communal-harmony-kodihallli-pontiff.htmlಕೆ.ಆರ್.ಪೇಟೆ, ಫೆ. 11 : ತಾಲೂಕಿನ ಇತಿಹಾಸ ಪ್ರಸಿದ್ಧ ಕಾಪನಹಳ್ಳಿಯ ಗವಿಮಠದ ಸ್ವತಂತ್ರ ಸಿದ್ಧಲಿಂಗೇಶ್ವರರ ರಥೋತ್ಸವವು ಸಡಗರ-ಸಂಭ್ರಮಗಳಿಂದ ನಡೆಯಿತು. ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಸಿಂಧಘಟ್ಟ ಅರವಿಂದ್ ಸಿದ್ದಲಿಂಗೇಶ್ವರರ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.ರಥೋತ್ಸವ ನಂತರ ನಡೆದ ಭಾವೈಕ್ಯ ಧರ್ಮ ಸಮ್ಮೇಳನದಲ್ಲಿ ಮಾತನಾಡಿದ ಕೋಡಿಮಠದ ಶ್ರೀಗಳು ನಾಡಿನಲ್ಲಿ ನಡೆಯುತ್ತಿರುವ ರಥೋತ್ಸವಗಳು ಮುಂತಾದ ಧಾರ್ಮಿಕ ಕಾರ್ಯಕ್ರಮಗಳಲ್ಲಿ 34586http://kannada.oneindia.com/img/2009/02/11-kapanahalli-gavimata.jpg100533ಜಯಂತಿಹಾಗೆ ಸುಮ್ಮನೆ ಕಿರಣೋದಯ/movies/hero/2008/12/27-haage-summane-kiran-star-is-born.htmlಸಿನಿಮಾ ಆರಂಭದ ನಡುವೆ ಪ್ರೇಕ್ಷಕರ ನಡುವೆ ಅಳುಕಿನಿಂದ ಓಡಾಡುತ್ತಿದ್ದ ಹುಡುಗನಿಗೆ ಸಿನಿಮಾ ಮುಗಿಯುವ ವೇಳೆಗೆ ಕೊಂಚ ಧೈರ್ಯ. ಕಿರಣ್ ಕಿರಣ್ ಎನ್ನುವ ಸಣ್ಣ ಸದ್ದು ಕ್ರಮೇಣ ಜೋರಾಯಿತು. ಆಟೊಗ್ರಾಫ್‌ಗೆ ಕೈಚಾಚಿದ ಸಾಲು ಬೆಳೆಯಿತು. ಅಲ್ಲಿಗೆ ಕನ್ನಡ ಚಿತ್ರೋದ್ಯಮದಲ್ಲಿ ಹೊಸ ನಾಯಕನೊಬ್ಬ ಹುಟ್ಟಿಕೊಂಡಂತಾಯಿತು.ಹಾಗೇ ಸುಮ್ಮನೆ ಚಿತ್ರ ಹೇಗಿದೆ ಎಂದು ಒಂದಷ್ಟು ಜನರನ್ನು ಮಾತನಾಡಿಸಿ. ಒಬ್ಬೊಬ್ಬರದು ಒಂದೊಂದು ಅನಿಸಿಕೆ. ಆದರೆ 33729http://kannada.oneindia.com/img/2008/12/27-kiran1.jpg100533ಜಯಂತಿಸ್ಯಾಂಡಲ್‌ವುಡ್ 2008 ಗೋಚಾರಫಲ/movies/headlines/2009/01/01-kannada-movies-2008-birds-eye-view.html*ಜಯಂತಿಸೆನ್ಸಾರ್ ಆದ ಚಿತ್ರಗಳ ಸಂಖ್ಯೆ ನೂರಾ ಐವತ್ತೆರಡು. ತೆರೆಕಂಡ ಚಿತ್ರಗಳು 118. ಸೆನ್ಸಾರ್ ಮಂಡಳಿ ಅಧ್ಯಕ್ಷ ಚಂದ್ರಶೇಖರ್ ಅವರ ಲ್ಯಾಪ್‌ಟಾಪ್‌ನಲ್ಲಿನ ಅಂಕಿಅಂಶಗಳ ಪ್ರಕಾರ ಹೇಳುವುದಾದರೆ- ಯಶಸ್ಸಿನ ಪ್ರಮಾಣ ಶೇ.8-9ರ ನಡುವೆ ಗಿರಕಿ ಹೊಡೆಯುತ್ತಿದೆ. ಹಳೆಯ ಮುಖಗಳಿಗೆ 2008 ಹೇಳಿಕೊಳ್ಳುವಂಥ ವರ್ಷವೇನಲ್ಲ. ತಾರೆಗಳ ಗ್ರಹಗತಿ ಹೀಗಿದೆ ನೋಡಿ: ವಿಷ್ಣುವರ್ಧನ್: 2008ರಲ್ಲಿ ಒಂದೂ ಸಿನಿಮಾ ತೆರೆಕಾಣಲಿಲ್ಲ. ಶಿವರಾಜ್‌ಕುಮಾರ್: ಸತ್ಯ ಇನ್ 33815http://kannada.oneindia.com/img/2009/01/01-vishnu-yejamanru1e.jpg100533ಜಯಂತಿಹೊಸ ನಿರ್ದೇಶಕರೆಲ್ಲಾ ಅಡ್ಡಕಸುಬಿಗಳು: ರಾಜೇಂದ್ರ ಸಿಂಗ್ ಬಾಬು/movies/headlines/2009/01/20-piece-of-advice-to-young-movie-directors.html*ಜಯಂತಿಹಳೆ ತಲೆಗಳ ಕಾಲ ಮುಗೀತು ಸ್ವಾಮಿ. ಹೊಸ ತಂತ್ರಜ್ಞಾನ ಬಂದಿದೆ. ಮಾರುಕಟ್ಟೆ ಸ್ಟ್ರಾಟಜಿ ಬದಲಾಗಿದೆ. ಪಿಕ್ಚರ್ ಆಯುಸ್ಸು ಈಗ ಮೂರೇ ತಿಂಗಳು. ಅಷ್ಟರಲ್ಲಿ ಹಣ ಮಾಡಿಕೋಬೇಕು. ನಮ್ಮ ಹಳೆ ತಲೆಗಳಿಗೆ ಅದು ಗೊತ್ತೇ ಇಲ್ಲ. ಅವರೆಲ್ಲಾ ಇಂಡಸ್ಟ್ರಿಯಿಂದ ಜಾಗ ಖಾಲಿ ಮಾಡೋದು ವಾಸಿ: ಶಶಾಂಕ್ಗಾಂಧಿನಗರದಲ್ಲಿ ಈಗ ಮೇಕರ್ಸ್ ಅಂತ ನಾಲ್ಕೇ ಜನ ಇದ್ವಿ. ಈಗ ನೀನು ಸೇರಿಕೊಂಡಿದೀಯ 34173http://kannada.oneindia.com/img/2009/01/20-yogarajbhat2e.jpg100533ಜಯಂತಿಗುಂಡು ಪಾರ್ಟಿ ನಿಷೇಧ ಚಿತ್ರಾನ್ನ! ಚಿತ್ರಾನ್ನ?/movies/controversy/2009/01/23-kannada-producers-break-kfpa-rule.html*ಜಯಂತಿನಿಯಮ ಇರೋದು ಮುರಿಯಲಿಕ್ಕೆ ಅಂತ ಕೆಲವು ವಿಚಾರವಾದಿಗಳು ಹೇಳಿದ್ದುಂಟು. ಕನ್‌ಫ್ಯೂಸ್ ದಿ ರೀಡರ್ಸ್ ಅಂತ ವೈಯೆನ್ಕೆ ಕೂಡ ಆಗಾಗ ಹೇಳುತ್ತಿದ್ದರು. ಈಗ ಸುದ್ದಿಮಿತ್ರರು ನಿರ್ಮಾಪಕರನ್ನೇ ಕನ್‌ಫ್ಯೂಸ್ ಮಾಡಹೊರಟಿದ್ದಾರೆ. ಇದೇ ತಿಂಗಳ ಹದಿನೈದರ ನಂತರ ರಾತ್ರಿ ಹೊತ್ತು ಯಾರೂ ಪ್ರೆಸ್‌ಮೀಟ್ ಇಡಕೂಡದು ಅಂತ ನಿರ್ಮಾಪಕರ ಸಂಘ ಫರ್ಮಾನು ಹೊರಡಿಸಿದ್ದು ಗೊತ್ತೇ ಇದೆ. ಈ ವಾರ ಆ ಫರ್ಮಾನನ್ನು ಮೂವರು 34241http://kannada.oneindia.com/img/2009/01/23-kcn-chandrashekar2e.jpg100533ಜಯಂತಿಭಕ್ತ ಸಿರಿಯಾಳ ಖ್ಯಾತಿ ಚಂದೂಲಾಲರ ಹೊಸ ಚಿತ್ರ/movies/headlines/2009/01/23-chandulal-jains-new-kannada-movie-videshi.htmlಸಾವಿನ ಕದ ತಟ್ಟಿ ಬದುಕಿ ಬಂದ ನಿರ್ಮಾಪಕ ಚಂದೂಲಾಲ್ ಜೈನ್ ಕೈಲಿ ಗುಟ್ಕಾ ಹಿಡಿದಿದ್ದರು. ಅನತಿ ದೂರದಲ್ಲಿ ಅವರ ಮಡದಿ. ಆಕೆ ಎಲ್ಲಿ ನೋಡಿಯಾರೋ ಎಂಬ ಧಾವಂತದಲ್ಲಿಯೇ ಗುಟ್ಕಾವನ್ನು ಬಾಯಿಗೆ ಇಳಿಸಿದರು. ಅದು, ಅವರ ಎಪ್ಪತ್ತನಾಲ್ಕನೇ ಹುಟ್ಟುಹಬ್ಬದ ಔತಣಕೂಟ. ದಾಂಪತ್ಯ ಜೀವನಕ್ಕೆ ಕಾಲಿಟ್ಟು ಐವತ್ತು ವರ್ಷ ಸರಿದ ಸಂತೋಷವೂ ಬೆರೆತಿತ್ತು. ಯುಗಳ ಸಂಭ್ರಮದ ಕಾರ್ಯಕ್ರಮ ನಡೆದದ್ದು, ಗುರುವಾರ 34249http://kannada.oneindia.com/img/2009/01/23-chandulal-jain1.jpgnews"> ರಂಗಕರ್ಮಿ ಅಲಮೇಲು ಅವರಿಗೆ ಮೈಸೂರಲ್ಲಿ ಸನ್ಮಾನ | Dramatist Alamelu Iyengar felicitated in Mysuru - ರಂಗಕರ್ಮಿ ಅಲಮೇಲು ಅವರಿಗೆ ಮೈಸೂರಲ್ಲಿ ಸನ್ಮಾನ - Kannada Oneindia

ರಂಗಕರ್ಮಿ ಅಲಮೇಲು ಅವರಿಗೆ ಮೈಸೂರಲ್ಲಿ ಸನ್ಮಾನ

Dramatist Alamelu Iyengar felicitated in Mysuru
ಅಮೆರಿಕಾದ ಸುಪ್ರಸಿದ್ಧ ರಂಗಕರ್ಮಿ ; ನಟಿ, ನಿರ್ದೇಶಕಿ ಮತ್ತು ನಾಟಕಕರ್ತೃ ಅಲಮೇಲು ಅಯ್ಯಂಗಾರ್ ಅವರನ್ನು ಮೈಸೂರಿನ ಸುರುಚಿ ರಂಗಮನೆ' ಜೂನ್ 13ರಂದು ಸನ್ಮಾನಿಸಿತು. ಮೈಸೂರಿನ ಆಹ್ವಾನಿತ ರಂಗಕರ್ಮಿಗಳು ಅವರನ್ನು ಭೇಟಿಮಾಡಿ, ಅಮೆರಿಕಾದ ರಂಗಚಟುವಟಿಕೆಗಳ ಬಗ್ಗೆ ಸಂವಾದ ನಡೆಸಿದರು. ಸಂವಾದವನ್ನು ಆಯೋಜಿಸಿದ್ದವರು ಅಮೆರಿಕನ್ನಡದ ನಾಗಲಕ್ಷ್ಮಿ ಮತ್ತು ಹರಿಹರೇಶ್ವರ ದಂಪತಿಗಳು.

* ಜಯಂತಿ ಅಮೃತೇಶ್, ಸರಸ್ವತೀಪುರಂ, ಮೈಸೂರು

ಅಲಮೇಲು ಅವರ ಪರಿಚಯ, ಸಾಧನೆ ಮತ್ತು ನಾಟಕ ಪ್ರದರ್ಶನಗಳ ವಿವರವಿರುವ ಹರಿಹರೇಶ್ವರರ ಲೇಖನದ ಕರಪತ್ರ ಕಾರ್ಯಕ್ರಮದ ಪ್ರಾರಂಭದಲ್ಲೇ ಎಲ್ಲರ ಕೈ ಸೇರಿತು; ಅದರಿಂದಾಗಿ ಪರಿಚಯ ಭಾಷಣದ ಅಮೂಲ್ಯ ಸಮಯ ಉಳಿಯಿತು. ಅಲಮೇಲು ಅವರು ಕೇಲವು ನಿಮಿಷಗಳ ಕಾಲ ಅಮೆರಿಕದ ಕನ್ನಡ ರಂಗಭೂಮಿ ಮತ್ತು ತಮ್ಮ ನಾಟಕಗಳ ಬಗ್ಗೆ ಮಾತನಾಡಿದ ನಂತರ ನೇರ ಸಂವಾದ ಪ್ರಾರಂಭವಾಯಿತು. ಆಹ್ವಾನಿತರು ಅನೇಕ ಪ್ರಶ್ನೆಗಳನ್ನು ಕೇಳಿ ತಮ್ಮ ಸಂಶಯವನ್ನು ಪರಿಹರಿಸಿಕೊಂಡರು. ಪುಷ್ಕಳ ಭೋಜನದೊಡನೆ ಹರಿಹರೇಶ್ವರ-ನಾಗಲಕ್ಷ್ಮಿ ದಂಪತಿಗಳು ಆಹ್ವಾನಿತರಿಗೆ ಪುಸ್ತಕದ ಉಡುಗೊರನೆ ನೀಡಿ ಕಳುಹಿಸಿಕೊಟ್ಟದ್ದು ವಿಶೇಷವಾಗಿತ್ತು. ಅವರು ಉಡುಗೊರೆಯಾಗಿ ನೀಡಿದ್ದು ಅಲಮೇಲು ಅವರ ಹೈಟೆಕ್ ಹಯವದನಾಚಾರ್ ಮತ್ತು ಇತರ ನಾಟಕಗಳು.

ಆ ಸಂಜೆಯ ಕಾರ್ಯಕ್ರಮದಲ್ಲಿ ನಡೆದ ಇನ್ನೊಂದು ವಿಶೇಷವೇನೆಂದರೆ, ಅಲಮೇಲು ಅವರೊಂದಿಗೆ ಕರ್ನಾಟಕ ರಾಜ್ಯ ಜಾನಪದ ಅಕಾಡೆಮಿಯ ಜಿಶಂಪ ಪ್ರಶಸ್ತಿ ಪುರಸ್ಕೃತ, ಮೈಸೂರಿನ ಡಾ| ವೈಸಿ ಭಾನುಮತಿ ಮತ್ತು ಸುರುಚಿ ರಂಗಮನೆಯ ಸಂಚಾಲಕಿ ವಿಜಯಾ ಸಿಂಧುವಳ್ಳಿ ಅವರಿಗೆ ನಡೆಸಿದ ಸನ್ಮಾನ. ಅವರನ್ನು ಪ್ರಸಿದ್ಧ ಲೇಖಕ ಪ್ರೊ| ಪ್ರಭುಶಂಕರ್ ಅವರು ಅಲಮೇಲು ಅವರನ್ನು ಸನ್ಮಾನಿಸಿದರು.

ಇದಾದ ಮರುದಿನ ನನಗೆ ಒದಗಿದ ಮತ್ತೊಂದು ಸದವಕಾಶವೆಂದರೆ ಅಲಮೇಲು ಅವರೊಡನೆ ನನ್ನ ಸಂದರ್ಶನ. ಸರಳ, ಸ್ನೇಹಮಯ ವ್ಯಕ್ತಿತ್ವದ ಅಲಮೇಲು ಅವರನ್ನು ಭೇಟಿಮಾಡಿ, ಅವರ ಕ್ರಿಯಾಶೀಲತೆಯ ಬಗ್ಗೆ, ಅವರ ಗೆಲುವಿನ ಬಗ್ಗೆ ಅನೇಕ ವಿಷಯಗಳನ್ನು ನೇರವಾಗಿ ತಿಳಿದುಕೊಳ್ಳುವ ಸೌಭಾಗ್ಯ ನನ್ನದಾಯಿತು. ಆ ಸಂದರ್ಶನದಲ್ಲಿ ಮತ್ತು ಕಾರ್ಯಕ್ರಮದಲ್ಲಿ ನಡೆದ ಸಂವಾದದಲ್ಲಿ ಅವರ ಬಗ್ಗೆ ತಿಳಿದು ಬಂದ ವಿಷಯಗಳ ಒಂದು ನೋಟ ಈಗ ನಿಮ್ಮ ಮುಂದಿದೆ:

ಸಮುದಾಯದಲ್ಲಿ ಹುಟ್ಟಿ ಸಮುದಾಯಕ್ಕಾಗಿಯೇ ಬೆಳೆದ ಕಲಾಪ್ರಕಾರವಾದ ನಾಟಕಕಲೆಯು ಅನೇಕ ರೀತಿಗಳಲ್ಲಿ ಬೆಳೆಯುತ್ತಾ ಬಂದಿದೆ. ಆಧುನಿಕ ವಿಜ್ಞಾನ ಸಾಧನೆಗಳಿಂದ ಕಲಾನುಭೂತಿ ಬಹಳಮಟ್ಟಿಗೆ ನಿಷ್ಕ್ರಿಯವೂ, ಅನಾಸಕ್ತವೂ ಆಗುತ್ತಿದೆ. ಇಂತಹ ಮನೋರಂಜನೆಯಲ್ಲಿ ಪ್ರೇಕ್ಷಕನೂ, ಶ್ರೋತೃವೂ ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯವಿಲ್ಲ. ಈ ದೃಷ್ಟಿಯಿಂದ ನಾಟಕವು ಜನತೆಯ ಕಲೆಯಾಗಿ ಜೀವಂತವಾಗಿದೆ. ಹೀಗೆ ಪ್ರೇಕ್ಷಕವರ್ಗಕ್ಕೂ, ನಾಟಕದ ಪಾತ್ರಧಾರಿಗಳಿಗೂ ನೇರ ಸಂಪರ್ಕ ಒದಗಿಸುವುದರಲ್ಲಿ ಅಮೆರಿಕದ ಅಲಮೇಲು ಅಯ್ಯಂಗಾರ್‌ಅವರು ನಿಸ್ಸೀಮರು.

ಅಲಮೇಲು ಅವರು ಕನ್ನಡನಾಡಿನ ಹೆಸರಾಂತ ಕವಿ, ಗೀತರೂಪಕಕಾರ, ಸಾಹಿತ್ಯ ದಿಗ್ಗಜರಾದ ಪು.ತಿ.ನ. ರವರ ಸುಪುತ್ರಿ. ಈಕೆಯ ಪತಿ ತಿರುನಾರಾಯಣ ಅವರು; ಟೆಲಿಕಮ್ಯುನಿಕೇಷನ್ ಇಂಜಿನಿಯರ್. ಅಲಮೇಲು ಅವರಿಗೆ ಚಿಕ್ಕಂದಿನಿಂದಲೂ ಸಾಹಿತ್ಯದಲ್ಲಿ ಒಲವು, ಅಸಕ್ತಿ; ಸಾಹಿತಿಗಳೊಡನೆ ಒಡನಾಟ. ಅವರೇ ಹೇಳುವಂತೆ ಆಟವಾಡುವ ವಯಸ್ಸಿನಲ್ಲಿ ಕಿವಿಗೆ ಸಾಹಿತ್ಯದ ತುಣುಕುಗಳು ಬಂದು ಬೀಳುತ್ತಿದ್ದವು. ಹಾಗಾಗಿ ಸಾಹಿತ್ಯದತ್ತ ಒಲವು ಬೆಳೆಯುತ್ತಲೇ ಹೋಯಿತು. ಅದರಲ್ಲೂ ನಾಟಕಗಳೆಂದರೆ ಚಿಕ್ಕಂದಿನಿಂದಲೂ ಬಲು ಹುಚ್ಚು. ಒಂದು ವಿಧದಲ್ಲಿ ಈಕೆ ಹೋರಾಟಗಾರ್ತಿಯೂ ಹೌದು. ಕರ್ನಾಟಕದಲ್ಲೇ ದೊಡ್ಡಸಂಸ್ಥೆಯಾದ ಮಹಾರಾಣಿ ಕಾಲೇಜಿನಲ್ಲಿ ಕನ್ನಡವನ್ನು ಮುಖ್ಯ ವಿಷಯವನ್ನಾಗಿ ಹೇಳಿಕೊಡಲು ಅವಕಾಶವಿರದಿದ್ದನ್ನು ಕಂಡು ನೊಂದಿದ್ದ ಈಕೆ, ಹಿರಿಯರಾದ ಕಮಲಾ ಹಂಪನಾ, ತೀನಂಶ್ರೀ ಇವರ ಬೆಂಬಲದಿಂದ ಹೋರಾಡಿ, ಮೊತ್ತಮೊದಲಬಾರಿಗೆ ಕನ್ನಡವನ್ನು ಮುಖ್ಯವಿಷಯವಾಗಿ ಅಭ್ಯಸಿಸುವ ಅವಕಾಶ ದೊರಕುವಂತೆ ಮಾಡಿದ ಸಾಧನೆ ಅಮೋಘವಾದದ್ದು.

ವಿಜ್ಞಾನದಿಂದ ಸಾಹಿತ್ಯದತ್ತ ತನ್ನ ಒಲವನ್ನು ತಿರುಗಿಸಿದ ಮುಖ್ಯ ಘಟನೆ ಇದು ಎನ್ನುತ್ತಾರೆ ಅಲಮೇಲು. ಅಂದು ಕನ್ನಡದ ದಿಶೆಯಲ್ಲಿ ಇಟ್ಟ ದಿಟ್ಟ ಹೆಜ್ಜೆ, ತನ್ನನ್ನು ಮಹರಾಣಿ ಕಾಲೇಜಿನಿಂದ ಮಾನಸಗಂಗೋತ್ರಿಯವರೆಗೂ ನಡೆಸಿಕೊಂಡು ಬಂದಿದೆ ಎನ್ನುತ್ತಾರೆ. ಕನ್ನಡ ಎಂ.ಎ. ಪದವೀಧರಳಾದ ಬಳಿಕ(1969) 'ಜ್ಞಾನಗಂಗೋತ್ರಿ' ಮಕ್ಕಳ ವಿಶ್ವಕೋಶದಲ್ಲಿ ನಿರಂಜನ ಮತ್ತು ಪ್ರೊ. ಎಲ್.ಎಸ್. ಶೇಷಗಿರಿರಾವ್ ಅವರ ನೇತೃತ್ವದಲ್ಲಿ ಎರಡು ವರ್ಷಗಳ ಕಾಲ ಉಪಸಂಪಾದಕರಾಗಿದ್ದರು. ಅನಂತರ ಬೆಂಗಳೂರಿನ ಆಚಾರ್ಯ ಪಾಠಶಾಲೆಯಲ್ಲಿ ಕನ್ನಡ ಅಧ್ಯಾಪಕರಾಗಿದ್ದರು. ಬೆಂಗಳೂರಿನ ಆಕಾಶವಾಣಿಯಲ್ಲಿ ಮಕ್ಕಳ ಕಾರ್ಯಕ್ರಮ, ವನಿತಾವಿಹಾರ, ರೇಡಿಯೋ ನಾಟಕ, ಮಾತಿನ ಚಾವಡಿ-ಗಳಲ್ಲಿ ಭಾಗವಹಿಸುತ್ತಿದ್ದರು. ಇವರು 1971ರಿಂದ 1979ರವರೆಗೆ ಆಂಧ್ರ ಪ್ರದೇಶದ ಹೈದರಾಬಾದಿನಲ್ಲಿ ವಾಸವಾಗಿದ್ದರು. ಆಗ ಅಲ್ಲೊಂದು ಕನ್ನಡಕೂಟವನ್ನು ಪ್ರಾರಂಭಿಸಿ ಅನೇಕ ಕಾರ್ಯಕ್ರಮಗಳನ್ನು ಏರ್ಪಡಿಸಿದರು. ಅಲ್ಲಿಯ ಆಕಾಶವಾಣಿ ಕೇಂದ್ರದಲ್ಲಿ ಕನ್ನಡ ನಾಟಕ, ಭಾವಗೀತೆಗಳ ಕಾರ್ಯಕ್ರಮಗಳನ್ನು ಪ್ರಸಾರಮಾಡಿದ್ದೇ ಅಲ್ಲದೆ ಕನ್ನಡ ಜನಪದ ಸಾಹಿತ್ಯದಮೇಲೆ ಆರು ಭಾಷಣಗಳನ್ನು ಬಿತ್ತರಿಸಿದರು.

ಅಲಮೇಲು ಅವರು ನೆನಪಿಸಿಕೊಂಡದ್ದು, 'ಜನಪದ ಸಾಹಿತ್ಯದಲ್ಲಿ ತಾಯಿ', ಜನಪದ ಸಾಹಿತ್ಯದಲ್ಲಿ ತಾಯಿ-ಮಗಳ ಬಾಂಧವ್ಯ, ಜನಪದ ಸಾಹಿತ್ಯದಲ್ಲಿ ಸೊಸೆ, ಮತ್ತು ಇದರಲ್ಲಿ 'ಶಿಶು'. ಈ ಮಧ್ಯೆ ಸುಧಾ', ಪ್ರಜಾಮತ' ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದರು. ಅವರ ಲಘು ಹಾಸ್ಯ ಬರಹಗಳು, ವೆಂಕಜ್ಜಿ ಜೇಮ್ಸ್ ಬಾಂಡ್, ಮೊಬೈಲ್‌ಮೋಹಿನಿ, ಸಂಪದ್‌ಗಿರಿರಾಯನ ಸಂಪಾದಕಗಿರಿ ಇತ್ಯಾದಿ. ಇವರ ಹಾಸ್ಯ ಕವನಗಳಲ್ಲೂ ಹಾಸ್ಯದ ಮೆರವಣಿಗೆ ನಿಂತಿಲ್ಲ ; ಹಾಗೆಯೇ ಇವರ ವಿಮರ್ಶಾತ್ಮಕ ಲೇಖನಗಳಿಗೇನೂ ಕೊರತೆಯಿಲ್ಲ. ವಿವಾಹ ಇತರ ಸಾಮಾಜಿಕ ಸಂದರ್ಭಕ್ಕೆ ರಚಿಸಿದ ಗೀತೆಗಳೂ ಅನೇಕ. 1979ರಲ್ಲಿ ಇವರು ಅಮೆರಿಕೆಗೆ ಬಂದ ನಂತರ ಸಾಹಿತ್ಯಸೇವೆ ನಿರಂತರವಾಗಿ ನಡೆದಿದೆ. 1968ರಲ್ಲಿ ಉತ್ತರ ಕ್ಯಾಲಿಫೋರ್ನಿಯಾದ ಕನ್ನಡಕೂಟದ ಅಧ್ಯಕ್ಷರಾಗಿದ್ದ ಸಮಯದಲ್ಲಿ ಮೊದಲ ಕಾರ್ಯಕ್ರಮವನ್ನು ತಮ್ಮ ತಂದೆಯವರ "ಹರಿಣಾಭಿಸರಣ" ಎಂಬ ಗೇಯ ನಾಟಕದಿಂದ ಪ್ರಾರಂಭಿಸಿ, ಕೊನೆಗೆ ಕಾರ್ಯಕ್ರಮವನ್ನು ಅಲಮೇಲು ಅವರೇ ಬರೆದು, ನಿರ್ದೇಶಿಸಿ ತಾವೇ ಅದರಲ್ಲಿ ನಟಿಸಿದರು. ಅದೇ "ಅಪ್ಟುಡೇಟ್ ಅಂಬುಜಮ್ಮ." ಇಂತಹ ನಗೆ ನಾಟಕಗಳನ್ನು ಬರೆಯಲು ಆಕೆಗೆ ಸ್ಫೂರ್ತಿ ಏನೆಂದು ಕೇಳಿದ್ದಕ್ಕೆ, "ನನ್ನ ಸುತ್ತಮುತ್ತಲೂ ನಡೆಯುವ ಪ್ರಸಂಗಗಳೇ ನನ್ನ ಸ್ಫೂರ್ತಿ"ಎನ್ನುತ್ತಾರೆ.

ಅಮೆರಿಕಕ್ಕೆ ಬಂದಾಗಲಿಂದ ಅಲ್ಲಿಯ ನಡೆ, ನುಡಿ, ಸಂಸ್ಕೃತಿಗಳನ್ನು ನಮ್ಮ ಅಜ್ಜ-ಅಜ್ಜಿಯರು ನೋಡಿದರೆ ಹೇಗೆ ಪ್ರತಿಕ್ರಿಯಿಸಬಹುದು ಎಂದು ಊಹಿಸಿಕೊಂಡಾಗ ಹಾಸ್ಯದ ಹೊನಲು ಉಕ್ಕಿ ಹರಿಯಿತು. ಅದರ ಫಲವೇ 'ಅಪ್ಟುಡೇಟ್ ಅಂಬುಜಮ್ಮ.' ಈ ಪ್ರಥಮ ಪ್ರಯತ್ನಕ್ಕೆ ಅಲ್ಲಿಯ ಕನ್ನಡ ಸಹೃದಯರಿಂದ ದೊರೆತ ಪ್ರೋತ್ಸಾಹ ಅಲಮೇಲು ಅವರನ್ನು ದಿಗ್ಮೂಢಳನ್ನಾಗಿಸಿತು. ಮಗನನ್ನು ಕಳೆದುಕೊಂಡು 6 ವರುಷ ಶೋಕಸಾಗರದಲ್ಲಿ ಮುಳುಗಿದ್ದ ಹಿರಿಯರೊಬ್ಬರು ಅಲಮೇಲು ಅವರ ಈ ನಾಟಕವನ್ನು ನೋಡಿ ಮನಸಾ ನಕ್ಕರಂತೆ. ತಮ್ಮನ್ನು ಶೋಕಸಾಗರದಿಂದ ಹೊರ ತಂದಿದ್ದಕ್ಕೆ ಅವರನ್ನು ಅಭಿನಂದಿಸಿದ್ದರು.

ಅಲಮೇಲು ಅವರ ನಾಟಕಗಳ ಒಂದು ಪಕ್ಷಿ ನೋಟ »

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+