ಮರೆಯಾಗುತ್ತಿರುವ ಕರಾವಳಿಯ ಹುರಿಯಕ್ಕಿ ಲಾಡು

* ವಿನಾಯಕ ಪಟಗಾರ್, ಬೆಟ್ಕುಳಿ, ಕುಮಟಾ
ಮೊದಲ್ಲೆಲ್ಲಾ ಬೇಸಿಗೆ ರಜೆ ಮುಗಿಸಿ ದೂರದ ಊರುಗಳಿಗೆ ಹೋಗುವಾಗ ಡಬ್ಬಿ ತುಂಬ ಅಜ್ಜಿ ಮಾಡಿಕೊಟ್ಟ ಹುರಿಯಕ್ಕಿ ಲಾಡುವನ್ನು ತೆಗೆದುಕೊಂಡು ಹೋಗುತ್ತಿದ್ದೆವು. ಧೋ ಎಂದು ಸುರಿಯುವ ಕುಂಭದ್ರೋಣ ಮಳೆಯಲ್ಲಿ ಹುರಿಯಕ್ಕಿ ಲಾಡುವನ್ನು ತಿನ್ನುತ್ತಿದ್ದರೆ ಕರಾವಳಿ ಊರಿನ ಸವಿ ಸವಿ ನೆನಪುಗಳು ಆವರಿಸುತ್ತಿದ್ದವು. ಇವಾಗ ಧೋಧೋ ಮಳೆಯೂ ಇಲ್ಲ, ಹುರಿಯಕ್ಕಿ ಲಾಡುವಿನ ರುಚಿಯ ಪರಿಚಯವೂ ಅನೇಕರಿಗೆ ಗೊತ್ತಿಲ್ಲವೆನ್ನಿ. ಈ ಸಲದ ಮಳೆಗಾಲದಲ್ಲಿ ಹುರಿಯಕ್ಕಿ ಲಾಡುವಿನ ರುಚಿಯಿಂದ ನೀವು ವಂಚಿತವಾಗಬೇಡಿ. ಆದ್ದರಿಂದ ಅದನ್ನು ತಯಾರಿಸುವ ಬಗೆ ತಿಳಿದುಕೊಳ್ಳಿ.
ಬೇಕಾಗುವ ಪದಾಥಗಳು (ಸುಮಾರು ಹತ್ತು ಲಾಡುವಿಗೆ ಆಗುವಷ್ಟು)
ಕುಚ್ಚಿಗೆ ಅಕ್ಕಿ : 250 ಗ್ರಾಂ
ತೆಳು ಬೆಲ್ಲ : 200 ಗ್ರಾಂ
ಕೊಬ್ಬರಿ ತುರಿ : ಒಂದು ಕಪ್
ಶೇಂಗಾ ಕಾಳು : ಒಂದು ಕಪ್
ರುಚಿಗೆ ತಕ್ಕಷ್ಟು ಏಲಕ್ಕಿ ಪುಡಿ ಮತ್ತು ಉಪ್ಪು
ತಯಾರಿಸುವ ವಿಧಾನ
ಮೊದಲಿಗೆ ಕೆಂಪು ಕೆಂಪಾಗಿರುವ ಕುಚ್ಚಿಗೆ ಅಕ್ಕಿಯನ್ನು ಇನ್ನಷ್ಟು ಕೆಂಪಾಗುವಂತೆ ಹದವಾದ ಬೆಂಕಿಯಲ್ಲಿ ಹುರಿಯಬೇಕು. ನಂತರ ಆರಲು ಬಿಡಬೇಕು. ಹುರಿದ ಅಕ್ಕಿಯನ್ನು ತಣ್ಣಗಾದ ನಂತರ ಮಿಕ್ಸಿಯಲ್ಲಿ ರುಬ್ಬಿ ಕಡಿ ಕಡಿಯಾಗಿರುವಂತೆ ಹಿಟ್ಟು ಮಾಡಿಕೊಳ್ಳಬೇಕು. (ಬೀಸು ಕಲ್ಲಿನಲ್ಲಿ ಹಿಟ್ಟು ಮಾಡಿದರೆ ಇನ್ನೂ ಉತ್ತಮ. ಆದರೆ ಈಗಿನ ಕಾಲದಲ್ಲಿ ಬೀಸುಕಲ್ಲನ್ನು ಭೂತಗನ್ನಡಿ ಹಾಕಿ ಹುಡುಕಬೇಕು.)
ವಿಶಾಲವಾದ ಪಾತ್ರೆಯಲ್ಲಿ ತೆಳುವಾದ ಬೆಲ್ಲವನ್ನು ಹಾಕಿ ಒಂದು ಸುತ್ತಿನ ಪಾಕ ಬರುವಂತೆ ಕಾಯಿಸಬೇಕು. ನಂತರ ಪಾತ್ರೆಯನ್ನು ಕೆಳಗಿಳಿಸಿಟ್ಟು ಬೆಲ್ಲದ ಪಾಕಕ್ಕೆ ಕಡಿ ಕಡಿಯಾಗಿರುವ ಹಿಟ್ಟನ್ನು ಸಾವಕಾಶವಾಗಿ ಸುರಿಯುತ್ತ ಪಾಕವನ್ನು ಗಟ್ಟಿಯಾದ ದೊಡ್ಡದಾದ ಚಮಚದಿಂದ ತಿರುಗಿಸಬೇಕು. ನಂತರ ಕೊಬ್ಬರಿ ತುರಿ, ಏಲಕ್ಕಿ ಪುಡಿ, ಶೇಂಗಾಕಾಳುಗಳನ್ನು ಒಂದೊಂದಾಗಿ ಹಾಕಿ ಕಲಿಸಬೇಕು. ನಂತರ ಹದವಾದ ಗಾತ್ರದಲ್ಲಿ ಲಾಡುವನ್ನು ಕಟ್ಟಬೇಕು. ಈಗ ಕೆಂಪು ಕಪ್ಪನೆಯ ಹುರಿಯಕ್ಕಿ ಲಾಡು ರೆಡಿ. ಸಂಜೆಯ ಚಹಾ ವೇಳೆಯಲ್ಲಿ ಇಲ್ಲವೆ ಬಾಯಾರಿದಾಗ ನೀರು ಸೇವಿಸುವ ಮೊದಲು ಇದನ್ನು ತಿಂದು ಸೇವಿಸಿದ್ದರೆ ಸಿಗುವ ರುಚಿ ಇನ್ಯಾತರಲ್ಲೂ ಸಿಗದು. ಒಮ್ಮೆ ಪ್ರಯತ್ನಿಸಿ ನೋಡಿ.
ಕೋರಿಕೆ : ಓದುಗರೆ, ಮಳೆಗಾಲ ಬಂತೆಂದರೆ ಮಲೆನಾಡು, ಕರಾವಳಿ ಮತ್ತು ಬಯಲುಸೀಮೆ ಪ್ರದೇಶಗಳಲ್ಲಿ ಹೊಸರುಚಿಗಳ ಭಾರೀ ಭರಾಟೆ. ಒಂದೊಂದು ತಿನಿಸುಗಳ ಹೆಸರು ಕೇಳುತ್ತಿದ್ದಂತೆ ಬಾಯಲ್ಲಿ ನೀರೂರಲು ಪ್ರಾರಂಭಿಸುತ್ತದೆ. ಇನ್ನೇಕೆ ತಡ, ನಿಮ್ಮ ಪ್ರದೇಶದಲ್ಲಿ ತಯಾರಿಸುವ ಹೊಸರುಚಿಯನ್ನು ನಮಗೂ ಬರೆದು ತಿಳಿಸಿ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ












Click it and Unblock the Notifications