ಸಮ್ಮೇಳನ ಸಮಾರೋಪ : ಕುಮಾರಸ್ವಾಮಿ ಹಾಜರ್
ಶಿವಮೊಗ್ಗ
:
ಸಾಹಿತ್ಯ
ಸಮ್ಮೇಳನ
ಸಮಾರೋಪ
ಸಮಾರಂಭದಲ್ಲಿ
ಪಾಲ್ಗೊಳ್ಳುವ
ಮೂಲಕ
ಮುಖ್ಯಮಂತ್ರಿ
ಎಚ್.ಡಿ.ಕುಮಾರಸ್ವಾಮಿ
ತಮ್ಮ
ಕನ್ನಡ
ಪ್ರೇಮ
ಮೆರೆದರು.
ಶನಿವಾರ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಾ, ಕನ್ನಡದ ವಿಷಯ ಬಂದಾಗ ಅಧಿಕಾರವನ್ನೂ ತ್ಯಜಿಸಿ, ಕನ್ನಡಪರ ಹೋರಾಟ ಮಾಡಲು ಕಂಕಣಬದ್ಧ ಎಂದು ಘೋಷಿಸಿದರು.
ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನ ಪಡೆಯಲು ಹೋರಾಟ ಮಾಡಬೇಕಾಗಿ ಬಂದಿರುವುದು ವಿಷಾದನೀಯ. ನೆರೆಯ ತಮಿಳರಿಗೆ ಸಾಧ್ಯವಾದದ್ದು ನಮಗೇಕೇ ಸಾಧ್ಯವಿಲ್ಲ ಎಂದ ಅವರು, ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಟೀಕಿಸಿದರು. ಅಲ್ಲದೆ ಕನ್ನಡವೂ ಈ ಸ್ಥಾನ ಪಡೆಯಲು ಸಾಧ್ಯವಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸಮ್ಮೇಳನಾಧ್ಯಕ್ಷರು ಮೊದಲ ದಿನದ ಭಾಷಣದಲ್ಲಿ ಎತ್ತಿದ ವಿಚಾರಗಳು ಅಂತಃಕರಣ ತಟ್ಟಿವೆ. ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಳ್ಳುವ ಎಲ್ಲ ಕನ್ನಡಪರ ನಿರ್ಣಯಗಳಿಗೂ ಸರ್ಕಾರದ ತಾತ್ವಿಕ ಒಪ್ಪಿಗೆ ಇದೆ ಎಂದು ಘೋಷಿಸಿದರು.
ಚಕಮಕಿ ಇಲ್ಲ : ಸಮಾರಂಭದಲ್ಲಿ ಕಸಾಪ ಅಧ್ಯಕ್ಷ ಚಂದ್ರಶೇಖರ ಪಾಟೀಲ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಮಧ್ಯೆ ಮಾತಿನ ಚಕಮಕಿ ನಡೆಯಬಹುದು ಎಂಬ ಊಹಾಪೋಹಗಳು ಎದ್ದಿದ್ದವು. ಆದರೆ ಇಂತಹ ಯಾವುದೇ ಮಾತುಗಳಿಗೆ ಆಸ್ಪದವಿಲ್ಲದೆ ಕಾರ್ಯಕ್ರಮ ಸುಸೂತ್ರವಾಗಿ ನೆರವೇರಿತು.
(ದಟ್ಸ್ ಕನ್ನಡ ವಾರ್ತೆ)