ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶಿವಮೊಗ್ಗ : ಧ್ವಜಾರೋಹಣ ಸಂದರ್ಭದಿ ಕಪ್ಪು ಬಾವುಟ
ಶಿವಮೊಗ್ಗ
:
73ನೇ
ಅಖಿಲ
ಭಾರತ
ಕನ್ನಡ
ಸಾಹಿತ್ಯ
ಸಮ್ಮೇಳನ
ನಗರದಲ್ಲಿ
ಬುಧವಾರ
ಆರಂಭಗೊಂಡಿದೆ.
ಇಂದಿನಿಂದ
ನಾಲ್ಕು
ದಿನಗಳ
ಕಾಲ
ಸಾಹಿತ್ಯಚಟುವಟಿಕೆಗಳು
ಗರಿಗೆದರಲಿವೆ.
ನೆಹರೂ ಕ್ರೀಡಾಗಣದಲ್ಲಿ ಉಪಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜವನ್ನು ಹಾರಿಸಲಾಯಿತು.
ಸಮ್ಮೇಳನಾಧ್ಯಕ್ಷ ಕೆ.ಎಸ್.ನಿಸಾರ್ ಅಹಮದ್, ಸಚಿವ ಈಶ್ವರಪ್ಪ, ಶಿವಮೊಗ್ಗ ಜಿಲ್ಲಾಧಿಕಾರಿ ಅನಿಲ್ ಕುಮಾರ್, ಕ.ಸಾ.ಪ. ರಾಜ್ಯಾಧ್ಯಕ್ಷ ಚಂದ್ರಶೇಖರ ಪಾಟೀಲ ಮತ್ತಿತರರು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಕಪ್ಪು ಬಾವುಟ : ಸಮ್ಮೇಳನಕ್ಕೆ ಮುಖ್ಯಮಂತ್ರಿಗಳ ಆಹ್ವಾನಿಸದ ಬಗೆಗೆ ಜೆಡಿಎಸ್ ಕಾರ್ಯಕರ್ತರು ಅಸಮಾಧಾನಗೊಂಡಿದ್ದು, ಧ್ವಜಾರೋಹಣ ಸಂದರ್ಭದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿದರು. ಚಂಪಾ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ರಾಜ್ಯದ ಮುಖ್ಯಮಂತ್ರಿಗೆ ಅಗೌರವ ತೋರಿಸುವುದು ಸಲ್ಲದು ಎಂದು ಕಾರ್ಯಕರ್ತರು ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Friday, May 23, 2003, 5:30 [IST]