Saree Cancer: ಮಹಿಳೆಯರೇ ಹುಷಾರ್! ಸೀರೆ ಉಟ್ಟರೆ ಬರುತ್ತೆ ಕ್ಯಾನ್ಸರ್- ತಡೆಗಟ್ಟುವ ಕ್ರಮಗಳು ಇಲ್ಲಿದೆ....
ಪ್ರಪಂಚದಲ್ಲಿ ಭಾರತೀಯರನ್ನು ವಿಭಿನ್ನವಾಗಿಸುವುದು ಅವರ ಸಂಸ್ಕೃತಿ, ಸಂಪ್ರದಾಯ, ಆಚಾರ-ವಿಚಾರಗಳು ಮತ್ತು ವಿಶಿಷ್ಟತೆಗಳು ಎಂದು ಹೇಳಬಹುದು. ಭಾರತೀಯರು ಸೀರೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಈ ಸೀರೆ ಪ್ರಪಂಚದಾದ್ಯಂತ ಪ್ರೀತಿಪಾತ್ರವಾಗಿದೆ.
ಹೀಗಾಗಿನೇ ಎಷ್ಟೇ ಹೊಸ ಟ್ರೆಂಡಿ ಬಟ್ಟೆ ಬಂದರೂ ಸೀರೆಗೆ ಬೇಡಿಕೆ ಭಾರತದಲ್ಲಿ ಕಡಿಮೆಯಾಗಿಲ್ಲ. ಹಬ್ಬ ಹರಿದಿನಗಳು ಬಂದರೆ ಬಹಳ ಉತ್ಸಾಹದಿಂದ ಮಹಿಳೆಯರು ಸೀರೆ ಉಡುತ್ತಾರೆ. ಆದರೆ ಇತ್ತೀಚಿಗೆ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಮುಂಬೈನಲ್ಲಿ ಮಹಿಳೆಯೊಬ್ಬರಿಗೆ ಸೀರೆಯಿಂದ ಕ್ಯಾನ್ಸರ್ ಬಂದಿರುವುದು ವರದಿಯಾಗಿದೆ. ಅದು ಹೇಗೆ ಎಂದು ನೋಡೋಣ.

ಕ್ಯಾನ್ಸರ್ ಪ್ರಸ್ತುತ ಜಗತ್ತನ್ನು ಬಿರುಗಾಳಿಯಂತೆ ಆವರಿಸುತ್ತಿದೆ. ಮಹಿಳೆಯರು ವಿಶೇಷವಾಗಿ ಸ್ತನ ಕ್ಯಾನ್ಸರ್ ಮತ್ತು ಗರ್ಭಕಂಠದ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಆದರೆ ಇತ್ತೀಚೆಗೆ ಈ ಕ್ಯಾನ್ಸರ್ ಬಗ್ಗೆ ಆಘಾತಕಾರಿ ಮಾಹಿತಿಯೊಂದು ಬಹಿರಂಗವಾಗಿದೆ. ಸೀರೆಗಳು ಭಾರತೀಯ ಮಹಿಳೆಯರಲ್ಲಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆಯಂತೆ.
ಕ್ಯಾನ್ಸರ್ ಅಪಾಯದ ಹೊರತಾಗಿ, ಸೀರೆಯು ಹಲವಾರು ಆರೋಗ್ಯ ಅಪಾಯಗಳನ್ನು ಉಂಟು ಮಾಡುತ್ತದೆ ಎಂದು ಅಧ್ಯಯನ ಕಂಡುಹಿಡಿದಿದೆ. ಮುಂಬೈನ ಆರ್ ಎನ್ ಕೂಪರ್ ಆಸ್ಪತ್ರೆ ಈ ಕುರಿತು ಅಧ್ಯಯನ ನಡೆಸಿದೆ. ಈ ಅಧ್ಯಯನದ ಪ್ರಕಾರ, ಸಾಂಪ್ರದಾಯಿಕ ಉಡುಗೆಯಾದ ಸೀರೆ ಉಡುವುದರಿಂದಾಗುವ ಆರೋಗ್ಯರ ಸಮಸ್ಯೆಗಳ ಬಗ್ಗೆ ಅಧ್ಯಯನಗಳು ನಡೆದಿವೆ.

ಸೀರೆ ಕ್ಯಾನ್ಸರ್ ಹೇಗೆ ಬರುತ್ತದೆ?
ದಿಲ್ಲಿಯ ಪಿಎಸ್ಆರ್ಐ ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸಕ ಡಾ.ವಿವೇಕ್ ಗುಪ್ತಾ ಅವರು, ಒಂದೇ ಬಟ್ಟೆಯನ್ನು ದೀರ್ಘಕಾಲದವರೆಗೆ ಧರಿಸುವುದರಿಂದ ಸೊಂಟದಲ್ಲಿ ಕಿರಿಕಿರಿ ಉಂಟಾಗುತ್ತದೆ ಎಂದು ಹೇಳುತ್ತಾರೆ. ಇದು ಚರ್ಮದ ಬಣ್ಣವನ್ನು ಬದಲಾಯಿಸುತ್ತದೆ.
ಇದರಿಂದಾಗಿ ಚರ್ಮ ಪದರಗಳಾಗಿ ಬದಲಾಗುತ್ತದೆ. ಅದರ ನಂತರ, ಇದು ಅಲ್ಸರ್ ಆಗಿ ಮಾರ್ಪಟ್ಟು ಕ್ಯಾನ್ಸರ್ಗೆ ಕಾರಣವಾಗುವ ಸಾಧ್ಯತೆಗಳಿವೆ. ಸಂಶೋಧಕರು ಇದನ್ನು ವೈದ್ಯಕೀಯದಲ್ಲಿ ಸ್ಕ್ವಾಮಸ್ ಸೆಲ್ ಕಾರ್ಸಿನೋಮ/ಸೀರೆ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ. 68 ವರ್ಷದ ಮಹಿಳೆಯೊಬ್ಬರಿಗೆ ಈ ರೀತಿಯ ಕ್ಯಾನ್ಸರ್ ಇರುವುದು ಪತ್ತೆಯಾದ ನಂತರ ಇದು ಬೆಳಕಿಗೆ ಬಂದಿದೆ ಎಂದು ವೈದ್ಯರು ಹೇಳಿದ್ದಾರೆ.

ಸೀರೆ ಉಡುವುದರಿಂದ ಬರುವ ಕ್ಯಾನ್ಸರ್..
ಇದು ಸೀರೆ ಉಡುವುದರಿಂದ ಬರುವ ಕ್ಯಾನ್ಸರ್ ಆಗಿರುವುದರಿಂದ ಸೀರೆ ಕ್ಯಾನ್ಸರ್ ಎಂದು ಪರಿಗಣಿಸಲಾಗಿದೆ. ಹೆಚ್ಚು ಬಿಸಿಲು ಇರುವ ಜಾರ್ಖಂಡ್ ಮತ್ತು ಬಿಹಾರಗಳಲ್ಲಿ ಸೀರೆ ಕ್ಯಾನ್ಸರ್ ಹೆಚ್ಚು ಕಂಡುಬರುತ್ತದೆ. ತಜ್ಞರು ಹೇಳುವ ಪ್ರಕಾರ ಈ ಕ್ಯಾನ್ಸರ್ ನ ಸಂಖ್ಯೆ ಹೆಚ್ಚಾಗಿದ್ದರು, ಇದರಿಂದ ಸಾವು ಬಹಳ ಅಪರೂಪದ ಘಟನೆ ಎಂದು ವೈದ್ಯರು ಹೇಳುತ್ತಾರೆ.
ನಮ್ಮ ದೇಶದ ಅನೇಕ ಭಾಗಗಳಲ್ಲಿ ಶ್ರೀಮಂತ, ಬಡ ಮತ್ತು ಮಧ್ಯಮ ವರ್ಗದ ಎಲ್ಲರೂ ಸೀರೆ ಉಡುತ್ತಾರೆ. ಆದರೆ ಸೀರೆಯೊಳಗೆ ಧರಿಸಿರುವ ಸ್ಕರ್ಟ್ ನಿಂದ ತ್ವಚೆಯ ಮೇಲೆ ಪರಿಣಾಮ ಬೀರುತ್ತದೆ. ಸ್ಕರ್ಟ್ ಅನ್ನು ಬಿಗಿಗೊಳಿಸುವುದರಿಂದ, ಸೊಂಟದ ಸುತ್ತಲಿನ ಚರ್ಮವು ಕಿರಿಕಿರಿಗೊಳ್ಳುತ್ತದೆ. ಇದರಿಂದ ತುರಿಕೆ, ಹುಣ್ಣುಗಳು ಕ್ರಮೇಣ ಕಾಣಿಸಿಕೊಳ್ಳುತ್ತವೆ. ಹೆಚ್ಚಿನ ತಾಪಮಾನವಿರುವ ಸ್ಥಳಗಳಲ್ಲಿ ಇದು ತುಂಬಾ ಕಿರಿಕಿರಿಯುಂಟುಮಾಡುತ್ತದೆ. ಈ ಸಮಸ್ಯೆಯನ್ನು ನಿರ್ಲಕ್ಷಿಸಿದರೆ, ಇದು ಕ್ಯಾನ್ಸರ್ ಆಗಿ ಬದಲಾಗುವ ಅಪಾಯವಿದೆ.

ಗಮನಹರಿಸಬೇಕಾದ ಲಕ್ಷಣಗಳು:
• ಕೆಂಪು, ತುರಿಕೆಗಳು
• ಹುಣ್ಣುಗಳ ರಚನೆ
• ತೊಡೆಸಂದು ಬಳಿ ಗೆಡ್ಡೆಗಳು
ಸೀರೆ ಕ್ಯಾನ್ಸರ್ ತಡೆಗಟ್ಟಲು ಕೆಲವು ಸಲಹೆಗಳು:
1. ಸಡಿಲವಾದ ಸೀರೆ ಮತ್ತು ಪೆಟ್ಟಿಕೋಟ್ಗಳನ್ನು ಧರಿಸಿ.
2. ನಿತ್ಯ ಸ್ನಾನ ಮಾಡಿ ಬಟ್ಟೆಯನ್ನು ಬದಲಾಯಿಸಿ, ಬಿಸಿಲಿನಲ್ಲಿ ಬಟ್ಟೆ ಒಳಗಿಸಿ.
3. ಪೆಟ್ಟಿಕೋಟ್ಗಳನ್ನು ಸಡಿಲವಾಗಿ ಧರಿಸಿ ಅಂಟಿಕೊಳ್ಳುವ ಪೆಟ್ಟಿಕೋಟ್ಗಳನ್ನು ಕಡಿಮೆ ಮಾಡಿ.
4. ಯಾವಾಗಲೂ ತೆಳುವಾದ, ಅಗಲವಾದ ಪೆಟ್ಟಿಕೋಟ್ಗಳನ್ನು ಆಯ್ಕೆ ಮಾಡಿ.
5. ಚರ್ಮದ ಮೇಲೆ ಯಾವುದೇ ಬದಲಾವಣೆಗಳಾದಲ್ಲಿ ಪೆಟ್ಟಿಕೋಟ್ಗಳನ್ನು ಬದಲಾಯಿಸಿ. ವಿಶೇಷವಾಗಿ ಬೆಳಿಗ್ಗೆ 10 ರಿಂದ ಸಂಜೆ 4 ರ ನಡುವೆ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದನ್ನು ಮಿತಿಗೊಳಿಸಿ.
6. ತಂಪಾದ ಪ್ರದೇಶದಲ್ಲಿ ಇರಲು ಅಥವಾ ನೆರಳಿನ ಪ್ರದೇಶದಲ್ಲಿ ಇರಲು ಪ್ರಯತ್ನಿಸಿ. ಸನ್ಸ್ಕ್ರೀನ್ ಅನ್ನು ಬಳಸಿ.
7. ಪ್ರತಿ ಎರಡು ಗಂಟೆಗಳಿಗೊಮ್ಮೆ ಸ್ವಚ್ಚಗೊಳಿಸಿ ಸನ್ಸ್ಕ್ರೀನ್ ಅನ್ನು ಪುನಃ ಅನ್ವಯಿಸಿ.
8. ಅತಿಯಾದ ಬಿಸಿಲು ಚರ್ಮದ ಕ್ಯಾನ್ಸರ್ ಅನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಹೆಚ್ಚಿಸುವ ಹಾನಿಕಾರಕ UV ವಿಕಿರಣವನ್ನು ಹೊರಸೂಸುತ್ತದೆ.
9. ನಿಮ್ಮ ಚರ್ಮದ ಮೇಲೆ ಯಾವುದೇ ಅನುಮಾನಾಸ್ಪದ ಗಾಯಗಳು ಅಥವಾ ಬದಲಾವಣೆಗಳನ್ನು ನೀವು ಗಮನಿಸಿದರೆ ಚರ್ಮಶಾಸ್ತ್ರಜ್ಞರನ್ನು ಸಂಪರ್ಕಿಸಿ.
10. ಹಾನಿಕಾರಕ ಯುವಿ ಕಿರಣಗಳಿಂದ ನಿಮ್ಮ ತುಟಿಗಳನ್ನು ರಕ್ಷಿಸಲು ಲಿಪ್ ಬಾಮ್ ಅನ್ನು ಬಳಸಿ. ತಂಬಾಕು ಧೂಮಪಾನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ವಿಶೇಷವಾಗಿ ತುಟಿಗಳ ಮೇಲೆ. ಧೂಮಪಾನವನ್ನು ನಿಲ್ಲಿಸುವುದು ಈ ಅಪಾಯವನ್ನು ಕಡಿಮೆ ಮಾಡಲು ಮತ್ತು ನಿಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
-
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್












Click it and Unblock the Notifications