ಸತ್ತವರ ಆಭರಣ ಮತ್ತು ಬಟ್ಟೆ ಧರಿಸಿದರೆ ನಿದ್ದೆಯಲ್ಲೂ ಆ ಒಂದು ದೃಶ್ಯ ಕಾಣುತ್ತೆ!
ಸಾವು ನಿರಾಕರಿಸಲಾಗದ ಸತ್ಯ. ಈ ಜಗತ್ತಿನಲ್ಲಿ ಹುಟ್ಟಿದವರೆಲ್ಲರೂ ಒಂದಲ್ಲ ಒಂದು ದಿನ ಸಾಯಲೇ ಬೇಕು. ಈ ಭೂಮಿಯ ಮೇಲಿನ ಜೀವನದ ಪ್ರಯಾಣವನ್ನು ಪೂರ್ಣಗೊಳಿಸಿದ ನಂತರ ಆತ್ಮವು ದೇಹವನ್ನು ಬಿಟ್ಟು ಹೋಗುತ್ತದೆ. ಸಾವಿನ ನಂತರ ಸತ್ತವರ ನೆನಪುಗಳು ಮತ್ತು ಅವರಿಗೆ ಸಂಬಂಧಿಸಿದ ವಿಷಯಗಳು ಮಾತ್ರ ನಮ್ಮೊಂದಿಗೆ ಉಳಿಯುತ್ತವೆ.
ನಾವು ಪ್ರೀತಿಸುವ ಯಾರಾದರೂ ಸತ್ತಾಗ ಅವರು ಬಳಸುವ ವಸ್ತುಗಳನ್ನು ಅವರ ನೆನಪಾಗಿ ಇಟ್ಟುಕೊಳ್ಳುತ್ತೇವೆ. ಬಳಸಬಹುದಾದ ವಸ್ತುವಾಗಿದ್ದರೆ, ನಾವು ಅದನ್ನು ಬಳಸುತ್ತೇವೆ. ಸತ್ತವರ ಆಭರಣ ಅಥವಾ ಬಟ್ಟೆಗಳನ್ನು ಧರಿಸಬಾರದು ಎಂದು ಹೇಳಲಾಗುತ್ತದೆ. ಆದರೆ ಸತ್ತವರ ವಸ್ತುಗಳನ್ನು ಬಳಸುವುದು ಸರಿಯೇ? ಜ್ಯೋತಿಷ್ಯ ಈ ಬಗ್ಗೆ ಏನು ಹೇಳುತ್ತದೆ ಎಂದು ತಿಳಿಯೋಣ.

ಸತ್ತವರ ಆಭರಣಗಳನ್ನು ಧರಿಸಬಹುದೇ?
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಚಿನ್ನ ಸೂರ್ಯನಿಗೆ ಸಂಬಂಧಿಸಿದೆ. ಸೂರ್ಯನನ್ನು ಕ್ರಿಯಾತ್ಮಕ ಗ್ರಹವೆಂದು ಪರಿಗಣಿಸಲಾಗುತ್ತದೆ. ಅದರ ಸುತ್ತಲೂ ಎಲ್ಲಾ ಗ್ರಹಗಳು ಸುತ್ತುತ್ತವೆ. ಹೀಗಾಗಿ ಸತ್ತವರ ಆಭರಣಗಳನ್ನು ಧರಿಸುವುದರಿಂದ ಜೀವಂತ ವ್ಯಕ್ತಿಯ ಜೀವನದಲ್ಲಿ ಸೂರ್ಯನ ಶಕ್ತಿಯ ಋಣಾತ್ಮಕ ಪರಿಣಾಮಗಳು ಉಂಟಾಗುತ್ತವೆ.
ಸತ್ತವರ ಚಿನ್ನದ ಆಭರಣಗಳನ್ನು ಧರಿಸಿದಾಗ, ನಿಮ್ಮ ದೇಹವು ನಕಾರಾತ್ಮಕ ಶಕ್ತಿಯನ್ನು ಎದುರಿಸಬಹುದು. ಅಲ್ಲದೆ ಆರೋಗ್ಯ ಮತ್ತು ಆರ್ಥಿಕ ಸ್ಥಿತಿ ಸೇರಿದಂತೆ ಎಲ್ಲದರಲ್ಲೂ ಹಿನ್ನಡೆಯಾಗಬಹುದು. ಹೀಗಾಗಿ ಸತ್ತವರ ಬಟ್ಟೆ ಹಾಗೂ ಆಭರಣ ಧರಿಸುವುದನ್ನು ತಪ್ಪಿಸಬೇಕು ಎಮದು ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ.
ಸತ್ತವರ ಆಭರಣಗಳನ್ನು ಧರಿಸುವುದರಿಂದ ಉಂಟಾಗುವ ಪರಿಣಾಮಗಳು?
ಯಾರಾದರೂ ಸತ್ತವರ ಆಭರಣವನ್ನು ಧರಿಸಿದರೆ, ಅದು ದೇಹದ ಶಕ್ತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ಮೃತರ ಚಿನ್ನದ ಆಭರಣಗಳನ್ನು ಧರಿಸಿದಾಗ ಅವರ ಜಾತಕದಲ್ಲಿ ಸೂರ್ಯನು ದುರ್ಬಲಗೊಳ್ಳಲು ಪ್ರಾರಂಭಿಸುತ್ತಾನೆ ಮತ್ತು ಅದರ ನಕಾರಾತ್ಮಕ ಪರಿಣಾಮಗಳು ಜೀವನದಲ್ಲಿ ಪ್ರಭಾವ ಬೀರುತ್ತವೆ. ಮಾತ್ರವಲ್ಲದೆ ನಿದ್ದೆಯಲ್ಲಿ ಆತ್ಮಗಳು ಕಾಣಿಸಿಕೊಳ್ಳುತ್ತವೆ.
ಇದಕ್ಕೆ ಮುಖ್ಯ ಕಾರಣವೆಂದರೆ ಚಿನ್ನ ಸೂರ್ಯನ ಲೋಹವಾಗಿದ್ದು, ಒಬ್ಬ ವ್ಯಕ್ತಿಯ ಆಭರಣದ ಸೌರಶಕ್ತಿ ಅವರು ಸತ್ತ ನಂತರ ಕಡಿಮೆಯಾಗುತ್ತದೆ. ಜೀವಂತವಾಗಿರುವ ವ್ಯಕ್ತಿಯು ಆ ಆಭರಣಗಳನ್ನು ಧರಿಸಿದರೆ, ಈ ಆಭರಣದ ಅನೇಕ ದುಷ್ಪರಿಣಾಮಗಳು ಅವರ ಜೀವನದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಸತ್ತವರ ಆಭರಣಗಳನ್ನು ಧರಿಸುವುದು ನಿಮ್ಮ ಕೆಲಸದ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದು ಮಾತ್ರವಲ್ಲದೆ ವ್ಯವಹಾರದಲ್ಲಿ ನಷ್ಟವನ್ನು ಉಂಟುಮಾಡಬಹುದು.
ಸತ್ತವರ ಬಟ್ಟೆಗಳನ್ನು ಧರಿಸಬಹುದೇ?
ಗರುಡ ಪುರಾಣದ ಪ್ರಕಾರ ಸತ್ತವರ ಬಟ್ಟೆಯನ್ನು ಗೊತ್ತಿಲ್ಲದೆಯೂ ಧರಿಸಬಾರದು. ಸತ್ತವರ ಬಟ್ಟೆಗಳು ಸಹ ಆತ್ಮಗಳನ್ನು ಆಕರ್ಷಿಸಬಹುದು. ವಿಶೇಷವಾಗಿ ಒಂದೇ ಕುಟುಂಬದ ಸದಸ್ಯರು ಸತ್ತವರ ಬಟ್ಟೆಗಳನ್ನು ಧರಿಸಿದಾಗ ಅವರು ಭೀಕರ ಪರಿಣಾಮಗಳನ್ನು ಎದುರಿಸುತ್ತಾರೆ. ಸತ್ತವರು ಮತ್ತು ಅವರ ನೆಚ್ಚಿನ ಬಟ್ಟೆಗಳ ನಡುವೆ ಬಂಧವಿರುತ್ತದೆ. ಅದನ್ನು ಮುರಿಯುವುದು ತುಂಬಾ ಕಷ್ಟ. ಜೀವಂತ ವ್ಯಕ್ತಿ ಅದನ್ನು ಧರಿಸಿದಾಗ ಅದು ನಕರಾತ್ಮಕ ಪರಿಣಾಮ ಜೀವಂತ ವ್ಯಕ್ತಿಯ ಮೇಲೆ ಬೀರುತ್ತವೆ.

ಗರುಡ ಪುರಾಣ ಏನು ಹೇಳುತ್ತದೆ?
ಬದುಕಿರುವ ವ್ಯಕ್ತಿ ಮೃತನ ಆಭರಣ ಅಥವಾ ಇನ್ನಾವುದೇ ವಸ್ತುವನ್ನು ಬಳಸಿದರೆ ಅವರ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ ಎಂದು ಗರುಡ ಪುರಾಣ ಹೇಳುತ್ತದೆ. ಹೀಗೆ ಮಾಡುವುದರಿಂದ ಸತ್ತವರ ಆತ್ಮ ಸದಾ ನಿಮ್ಮ ಹತ್ತಿರ ಇರುತ್ತದೆ. ಅವರು ಮೋಕ್ಷವನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ಸತ್ತವರ ಆತ್ಮದ ಆಕರ್ಷಣೆಯು ಯಾವಾಗಲೂ ಜೀವಂತವಾಗಿರುತ್ತದೆ. ಅದು ಪಿತೃ ದೋಷವನ್ನು ಉಂಟುಮಾಡುತ್ತದೆ. ಅದಕ್ಕಾಗಿಯೇ ಸತ್ತವರ ನೆಚ್ಚಿನ ವಸ್ತುಗಳನ್ನು ವಿಶೇಷವಾಗಿ ಆಭರಣ ಮತ್ತು ಬಟ್ಟೆಗಳನ್ನು ಬಳಸುವುದು ಹಾನಿಕಾರಕವೆಂದು ಪರಿಗಣಿಸಲಾಗಿದೆ. ಆದರೆ ಅವರ ಆಭರಣಗಳನ್ನು ಸತ್ತವರ ನೆನಪಿಗಾಗಿ ಇಡಬಹುದು, ಆದರೆ ಅದನ್ನು ದೇಹದ ಮೇಲೆ ಧರಿಸಬಾರದು.
ಹೇಗೆ ಧರಿಸುವುದು?
ನೀವು ಸತ್ತವರ ಆಭರಣವನ್ನು ಬಳಸಲು ಬಯಸಿದರೆ, ಅದನ್ನು ಸ್ವಚ್ಛಗೊಳಿಸಿದ ನಂತರ ನೀವು ಅದನ್ನು ಧರಿಸಬಹುದು. ಚಿನ್ನಾಭರಣವನ್ನು ಗಂಗಾಜಲದಲ್ಲಿ 24 ಗಂಟೆಗಳ ಕಾಲ ನೆನೆಸಿ ಸ್ವಚ್ಛಗೊಳಿಸಬೇಕು. ಅವುಗಳನ್ನು ನಿರುಪದ್ರವ ಮಾಡಲು ನೀವು ಕೆಲವು ಮಂತ್ರಗಳನ್ನು ಪಠಿಸಬೇಕಾಗುತ್ತದೆ. ಇದನ್ನು ಮಾಡಿದ ನಂತರ, ನೀವು ಸತ್ತವರ ಆಭರಣಗಳನ್ನು ಬಳಸಬಹುದು.
ಈ ಪರಿಹಾರದಿಂದ ಮೃತರ ಆತ್ಮವನ್ನು ಆಭರಣಗಳಿಗೆ ಕೊನೆಗೊಳಿಸಲು ಸಹಾಯವಾಗುತ್ತದೆ. ನೀವು ಸತ್ತವರ ಆಭರಣಗಳನ್ನು ಧರಿಸಲು ಬಯಸಿದರೆ, ಶುದ್ಧೀಕರಣದ ನಂತರ ಬಳಸಿ ಆಭರಣವನ್ನು ನೇರವಾಗಿ ದೇಹದ ಮೇಲೆ ಧರಿಸಬೇಡಿ. ಶುದ್ಧೀಕರಣದ ನಂತರ ಅದನ್ನು ಹಳದಿ ದಾರದಿಂದ ಕೆಲವು ದಿನಗಳವರೆಗೆ ಕಟ್ಟಬೇಕು. 21 ದಿನಗಳ ನಂತರ ಧರಿಸಬಹುದು.
-
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
Gold Rate March 23: ಚಿನ್ನ - ಬೆಳ್ಳಿ ದರ ಭಾರೀ ಕುಸಿತ: ಒಂದೇ ದಿನದಲ್ಲಿ ಶೇ. 4% ಇಳಿಕೆ, ಬಂಗಾರ ಪ್ರಿಯರಿಗೆ ಸಿಹಿ ಸುದ್ದಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ












Click it and Unblock the Notifications